- Monday
- April 27th, 2026
ಹಿಂದೂ ಸಂಗಮ ಹರಿಹರ ಮಂಡಲ ಇದರ ವತಿಯಿಂದ ಹಿಂದೂ ಸಮಾಜದ ಏಕತೆ, ಸಾಮರಸ್ಯ, ಸಾಮಾಜಿಕ ಪರಿವರ್ತನೆ ಹಾಗೂ ಧಾರ್ಮಿಕ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಫೆ.02ರಂದು ಬಾಳುಗೋಡು ದಿ.ತಮ್ಮಯ್ಯ ಗೌಡ ಕೂಜುಗೋಡು-ಕಟ್ಟೆಮನೆ ಕ್ರೀಡಾಂಗಣ, ಬೆಟ್ಟುಮಕ್ಕಿ-ಮುಚ್ಚಾರ ಇಲ್ಲಿ “ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ” ನಡೆಯಲಿದ್ದು, ಅಪರಾಹ್ನ 3:00 ಗಂಟೆಗೆ ಬಾಳುಗೋಡು ಪದಕ ಅಂಚೆ...
ಮಂಗಳೂರು ವಿದ್ಯುತ್ ಸರಬರಾಜು ನಿಗಮ(ನಿ.) ಮೆಸ್ಕಾಂ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಜ.19ರಂದು ಪ್ರಥಮ ಬಾರಿಗೆ ಆಗಮಿಸಿದ ಹರೀಶ್ ಕುಮಾರ್ ರವರನ್ನು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್, ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಶಾಲು ಹಾಕಿ, ಪುಷ್ಪ ಗುಚ್ಚ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ...
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಜ.16 ರಿಂದ ಆರಂಭಗೊಂಡಿದ್ದು, ಜ.19 ರಂದು ಬ್ರಹ್ಮರಥೋತ್ಸವ ಹಾಗೂ ಬೆಡಿ ಪ್ರದರ್ಶನ ನಡೆಯಿತು.ಜ.19 ರಂದು ಬೆಳಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ, ಪಲ್ಲಕ್ಕಿ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ...
ಸುಬ್ರಹ್ಮಣ್ಯ ಜನವರಿ 19 : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ದ.ಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಶ್ರೀ ಬಸವೇಶ್ವರ ದೇವಸ್ಥಾನ ಬಸವನ ಮೂಲ ಕುಲಕುಂದ,ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಸುಬ್ರಹ್ಮಣ್ಯ ಮಠ, ಗ್ರಾಮ ಸುಬ್ರಹ್ಮಣ್ಯ ಪಂಚಾಯತ್,...
“ನಾರಾಯಣ ಗುರುಗಳು ಸರ್ವ ಸಮಾಜದ ಗುರು” : ಕುಸುಮಾಕರ ಕುಂಪಲ ; ಸುಳ್ಯ ಯುವವಾಹಿನಿ ವತಿಯಿಂದ “ಗುರುಸ್ಫೂರ್ತಿ” ಕಾರ್ಯಕ್ರಮ
“ಮನುಷ್ಯರೆಲ್ಲರೂ ಒಂದೇ ಜಾತಿ ಎಂದು ತಿಳಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಸರ್ವ ಜಾತಿಯವರಿಗೂ ತಿಳಿಸುವ ಕಾರ್ಯ ಮಾಡಬೇಕಿದೆ. ನಾರಾಯಣ ಗುರು ತತ್ವಗಳನ್ನು ಪ್ರತಿ ದಿನ ಜೀವನದಲ್ಲಿ ಅಳವಡಿಸಿಕೊಂಡು ಸಂಘಟಿತರಾದಾಗ ಯಶಸ್ಸು ಸಾಧ್ಯ” ಎಂದು ಯುವವಾಹಿನಿ ಕೊಲ್ಯ ಘಟಕದ ಪೂರ್ವಾಧ್ಯಕ್ಷ ಕುಸುಮಾಕರ ಕುಂಪಲ ಹೇಳಿದರು. ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಸುಳ್ಯ ಘಟಕದ...
ಸುಳ್ಯದ ಕೆ.ವಿ.ಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಿನ್ನೆ(ಜ.19) ಮತ್ತು ಇಂದು(ಜ.20) “ಲ್ಯೂಮಿಯರ್–2k26” ಕಾಲೇಜು ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ.ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಜ.19 ಸೋಮವಾರದಂದು ನೆರವೇರಿತು. ಗಣ್ಯರು ದೀಪ ಬೆಳಗುವುದರೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಕಾಡೆಮಿ ಆಫ್ ಲಿಬೆರಲ್ ಎಜ್ಯುಕೇಶನ್(ರಿ.) ಸುಳ್ಯ ಅಧ್ಯಕ್ಷರಾದ ಡಾ ಕೆವಿ ಚಿದಾನಂದ...
“ಆರ್ ಎಸ್.ಎಸ್ ವ್ಯಕ್ತಿ ನಿರ್ಮಾಣದ ಮೂಲಕ ಹಿಂದೂ ಸಮಾಜದ ಸಂಘಟನೆಯೊಂದಿಗೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ ಎಂದು” ಮುಖ್ಯ ಭಾಷಣಕಾರರಾಗಿ ಆಗಮಿಸಿದ ಸಂಘದ ಕರ್ನಾಟಕ ಘೋಷ್ ಪ್ರಮುಖ್ ಆಗಿ ಪ್ರಸ್ತುತ ವಿಕ್ರಮ ವಾರಪತ್ರಿಕೆಯ ಸಹ ಸಂಪಾದಕ ನ.ನಾಗರಾಜ್ ಭದ್ರಾವತಿ ಹೇಳಿದರು. ಅವರು ಗುತ್ತಿಗಾರಿನಲ್ಲಿ ಜ.18 ರಂದು ನಡೆದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು. “ಮೇಲು-ಕೀಳು ಎನ್ನುವ...
“ಸುಳ್ಯ ನಗರ ರೋಟರಿ ಸ್ಕೂಲ್ ಮುಂಭಾಗದಲ್ಲಿ ಕಳೆದ ಹಲವು ದಿನಗಳಿಂದ ಪೈಪಿನಿಂದ ನಿರಂತರವಾಗಿ ನೀರು ಸೋರಿಕೆಯಾಗುತ್ತಿದೆ. ಈ ಸಮಸ್ಯೆ ಬಗ್ಗೆ ಸಾರ್ವಜನಿಕರು ಗಮನ ಸೆಳೆದಿದ್ದರೂ ನಗರಾಡಳಿತದಿಂದ ಇದುವರೆಗೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ನೀರಿನ ಸೋರಿಕೆಯಿಂದ ರಸ್ತೆ ಉದ್ದಕ್ಕೂ ನೀರು ಹರಿಯುತ್ತಿದ್ದು, ನಡೆದುಕೊಂಡು ಹೋಗುವ ಸಾರ್ವಜನಿಕರಿಗೆ ಹಾಗೂ ರಿಕ್ಷಾ ಚಾಲಕರಿಗೆ ತೀವ್ರ ತೊಂದರೆ ಉಂಟಾಗಿದೆ. ಸುಳ್ಯದಲ್ಲಿ...
ಕೋಡಿಬೈಲು ಕುಟುಂಬದ “ಧರ್ಮದೈವ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ”ಯು ಜ.17 ಮತ್ತು 18ರಂದು ಯೇನೆಕಲ್ಲು ಗ್ರಾಮದ ಕೋಡಿಬೈಲು ತರವಾಡು ಮನೆಯಲ್ಲಿ ನಡೆಯಿತು.ಜ.17ನೇ ಶನಿವಾರದಂದು ಸಂಜೆ ದೈವಗಳ ಭಂಡಾರ ತೆಗೆದು ನಂತರ ರಾತ್ರಿ ಕಲ್ಲುರ್ಟಿ ಮತ್ತು ಜಾವತೆ ದೈವಗಳ ನೇಮೋತ್ಸವ ಹಾಗೂ ಅನ್ನಸಂತರ್ಪಣೆ ನಡೆದು ನಂತರ ಕೊರತ್ತಿ, ವರ್ಣಾರ ಪಂಜುರ್ಲಿ, ವ್ಯಾಘ್ರ ಚಾಮುಂಡಿ, ಕುಪ್ಪೆ ಪಂಜುರ್ಲಿ...
ಕೊಲ್ಲಮೊಗ್ರು ಗ್ರಾಮದ ಹರಿಪ್ರಸಾದ್ ಮಲ್ಲಾಜೆ ಹಾಗೂ ಸುಜಿತ್ ಗೋಳ್ಯಾಡಿ ಎಂಬ ಇಬ್ಬರು ಯುವಕರು ನಿನ್ನೆ(ಜ.18) ಸುಬ್ರಹ್ಮಣ್ಯದ ಕುಲ್ಕುಂದ ಸಮೀಪದ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇಂದು(ಜ.19) ಮೃತರ ಅಂತಿಮ ಯಾತ್ರೆ ನೆರವೇರಿದ್ದು, ಹರಿಹರ ಪಳ್ಳತ್ತಡ್ಕದಲ್ಲಿ ಅಂತಿಮ ಯಾತ್ರೆಯನ್ನು ಮುಗಿಸಿ ಕೊಲ್ಲಮೊಗ್ರದ ಮಯೂರ ವೃತ್ತಕ್ಕೆ ಬಂದು ಕೊಲ್ಲಮೊಗ್ರು ಪೇಟೆಯಲ್ಲಿ ಮೃತರ ಅಂತಿಮ...
Loading posts...
All posts loaded
No more posts
