ದಸರಾ ಕ್ರೀಡಾ ಕೂಟದ ಯೋಗಾಸನ ಸ್ಪರ್ಧೆಯಲ್ಲಿ  ವಿಧಾತ್ ಮುಡೂರು ವಿಭಾಗ ಮಟ್ಟಕ್ಕೆ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಮಹಾನಗರ ಪಾಲಿಕೆ, ಮೈ ಭಾರತ್ ದಕ್ಷಿಣ ಕನ್ನಡ, ಜಿಲ್ಲಾ ಯುವಜನ ಒಕ್ಕೂಟ(ರಿ.) ಹಾಗೂ ವಿವಿಧ ಸಂಘ ಸಂಸ್ಥೆಗಳ  ಸಂಯುಕ್ತಾಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ 2025-26 ಯೋಗಾಸನ ಸ್ಪರ್ಧೆಯು ಸೆ.07ರಂದು ಮಂಗೂರಿನ ಮಂಗಳಾ...

ಕುಲ್ಕುಂದ : ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ

ಸುಬ್ರಹ್ಮಣ್ಯ : ಕುಲ್ಕುಂದದ ಬಸವನಮೂಲದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಗ್ರಹಣ ಶಾಂತಿ ಹೋಮ ನಡೆಯಿತು. ಚಂದ್ರಗ್ರಹಣದ ದೋಷ ಪರಿಹಾರಾರ್ಥ ಅನೇಕ ಭಕ್ತರು ಆಗಮಿಸಿ ಶಾಂತಿ ಹೋಮ ಮಾಡಿಸಿದರು.ಗ್ರಹಣದ ಬಳಿಕ ಸೋಮವಾರ ಮುಂಜಾನೆ ದೇವಳದಲ್ಲಿ ಶುದ್ಧಿ ಕಾರ್ಯ ನಡೆಯಿತು. ಬಳಿಕ ಬೆಳಗಿನ ಮಹಾಪೂಜೆ ನೆರವೇರಿತು.ತದನಂತರ ಗ್ರಹಣ ಶಾಂತಿ ಹೋಮಕ್ಕೆ ಭಕ್ತರು ಸಂಕಲ್ಪ ನೆರವೇರಿಸಿದರು.ನಂತರ ದೇವಳದ ಪ್ರಧಾನ...
Ad Widget

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆನಂದ ಗುರೂಜಿ ಭೇಟಿ

ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯರಾದ ಆನಂದ ಗುರೂಜಿ  ಭೇಟಿ ನೀಡಿದರು. ಶ್ರೀ ದೇವರ ದರುಶನ ಪಡೆದ ಅವರಿಗೆ ದೇವಳದ ಅರ್ಚಕರು ಮಹಾಪ್ರಸಾದ ನೀಡಿದರು. ಬಳಿಕ ಅವರು ಹೊಸಳಿಗಮ್ಮನ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು.ಸ್ವಾಮೀಜಿಗಳ ಭೇಟಿ : ಬಳಿಕ ಅವರು ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ...

ಕುಕ್ಕೆ ಸುಬ್ರಹ್ಮಣ್ಯ : ತಾಲೂಕು ಮಟ್ಟದ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟ ; “ಬದುಕಿನಲ್ಲಿ ಆರೋಗ್ಯ ಸಮೃದ್ಧಿಯ ಅಧಿಕ್ಯತೆಗೆ ಕ್ರೀಡಾ ಚಟುವಟಿಕೆಗಳು ಪೂರಕ” : ಅಶೋಕ್ ನೆಕ್ರಾಜೆ ಅಭಿಮತ

ಸುಬ್ರಹ್ಮಣ್ಯ : “ಪಠ್ಯದೊಂದಿಗೆ ಪಠ್ಯೇತರ ಚಟಿವಟಿಕೆಗಳು ವಿದ್ಯಾರ್ಥಿಗಳ ಬದುಕಿಗೆ ಪೂರಕವಾಗುತ್ತದೆ. ಆರೋಗ್ಯ ಸಮೃದ್ದಿಯ ಔನತ್ಯಕ್ಕೆ ಕ್ರೀಡಾ ಚಟುವಟಿಕೆಗಳ ಪಾತ್ರ ಅನನ್ಯ. ಪಂದ್ಯಾಟಗಳು ಕ್ರೀಡಾಳುಗಳು ಕ್ರೀಡಾಸ್ಪೂರ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಇದರಿಂದ ಈ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪ್ರಾಪ್ರವಾಗುತ್ತದೆ” ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ  ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ ಹೇಳಿದರು. ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ...

ಸುಬ್ರಹ್ಮಣ್ಯ: ಶಿಕ್ಷಕರ ದಿನಾಚರಣೆ ; “ಮಕ್ಕಳು ನೀಡುವ ಪ್ರೀತಿ ಮತ್ತು ಗೌರವ ಗುರುಗಳಿಗೆ ಪರಮಾನ್ನ” : ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ನಂದಾ ಹರೀಶ್

ಸುಬ್ರಹ್ಮಣ್ಯ : “ಮಕ್ಕಳು ನೀಡುವ ಪ್ರೀತಿ ಶಿಕ್ಷಕರಿಗೆ ಪರಮಾನ್ನ‌. ವಿದ್ಯಾರ್ಥಿಗಳು ಗುರುಗಳಿಗೆ ನೀಡುವ ಗೌರವ ಮತ್ತು ಪ್ರೀತಿ ಶಿಕ್ಷಕರ ಬದುಕಿನಲ್ಲಿ ಅತ್ಯಂತ ಹೆಚ್ಚು ಆನಂದ ನೀಡುವ ಕ್ಷಣವಾಗುತ್ತದೆ‌. ಗುರುಗಳು ಭಗವಂತನಿಗೆ ಸಮಾನರು. ಗುರುಗಳಿಗೆ ವಿದೇಯರಾಗಿರುವುದು ಅತ್ಯವಶ್ಯಕ” ಎಂದು ಎಸ್.ಎಸ್.ಪಿ.ಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ನಂದಾ ಹರೀಶ್ ಹೇಳಿದರು.ಸುಬ್ರಹ್ಮಣ್ಯದ ಎಸ್.ಎಸ್. ಪಿ.ಯು ಕಾಲೇಜಿನ ಪ್ರೌಢಶಾಲಾ...

ಕಟ್ಟ-ಗೋವಿಂದನಗರ ಸ.ಕಿ.ಪ್ರಾ ಶಾಲೆಗೆ ಸಮವಸ್ತ್ರ ಕೊಡುಗೆ

ಕಟ್ಟ-ಗೋವಿಂದನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಯವದನ ಇಂಡಸ್ಟ್ರೀಸ್ ಕೊಲ್ಲಮೊಗ್ರು ಇದರ ಮ್ಹಾಲಕರಾದ ಮಹೇಶ್ ಪೈಲೂರು ಸಮವಸ್ತ್ರ(ಪ್ಯಾಂಟ್-ಟೀಶರ್ಟ್) ಗಳನ್ನು ಕೊಡುಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಸಾವಿತ್ರಿ.ಎನ್, ದಾನಿಗಳಾದ ಮಹೇಶ್ ಪೈಲೂರು, ಸ್ಥಳೀಯರಾದ ತಾರಾನಾಥ್.ಎಂ, ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು, ಅತಿಥಿ ಶಿಕ್ಷಕರಾದ ಮಮತಾ.ಪಿ.ಎಸ್, ಅಂಗನವಾಡಿ ಕಾರ್ಯಕರ್ತೆ ವಿದ್ಯಾ.ಎ.ಜಿ ಹಾಗೂ ಅಡುಗೆ ಸಿಬ್ಬಂದಿ...

“ಎಂ.ಜಿ ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆ”ಯ ಫಲಿತಾಂಶ ಪ್ರಕಟ ; ಸೆ.27 ರಂದು ಬಹುಮಾನ ವಿತರಣೆ ಕಾರ್ಯಕ್ರಮ ; ಬಹುಮಾನಿತರ ವಿವರ ಇಲ್ಲಿದೆ

ಚೆಂಬು ಸಾಹಿತ್ಯ ವೇದಿಕೆಯ ವತಿಯಿಂದ ಏರ್ಪಡಿಸಲಾಗಿದ್ದ 7ನೇ ವರ್ಷದ “ಎಂ.ಜಿ ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆ”ಯ ಫಲಿತಾಂಶವು ಪ್ರಕಟಗೊಂಡಿದ್ದು, ಸ್ಪರ್ಧೆಗೆ ಬಂದಂತಹ 35 ಕವಿತೆಗಳಲ್ಲಿ 3 ಕವಿತೆಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಸ್ಪರ್ಧೆಗೆ ಬಂದಂತಹ ಉಳಿದೆಲ್ಲಾ ಕವಿತೆಗಳನ್ನು ಬರೆದವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು ಎಂದು ಸ್ಪರ್ಧೆಯ ಆಯೋಜಕರು ತಿಳಿಸಿದ್ದಾರೆ.ಕವಿತೆಗಳ ಮೌಲ್ಯಮಾಪಕರಾಗಿ ಕವಯಿತ್ರಿ...

ಸುಬ್ರಹ್ಮಣ್ಯ : ಕಸ ಬಿಸಾಡಿದವರಿಗೆ ದಂಡ – ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕ್ರಮ ಕೈಗೊಂಡ ಪಂಚಾಯತ್

ಸುಬ್ರಹ್ಮಣ್ಯದಲ್ಲಿ ನೈರ್ಮಲ್ಯ ಕಾಪಾಡುವ ಪ್ರಯತ್ನಕ್ಕೆ ಪೂರಕವಾಗಿ ಕಸ ಬಿಸಾಡಿದ ವ್ಯಕ್ತಿಗೆ ದಂಡ ವಿಧಿಸಿರುವ ಘಟನೆ ವರದಿಯಾಗಿದೆ.ಸೆಪ್ಟೆಂಬರ್ 8ರಂದು ಕುಮಾರಧಾರ ನದಿಯ ಸೇತುವೆ ಮೇಲಿಂದ ಕಾರ್ಕಳದ ವೇದವ್ಯಾಸ ತಂತ್ರಿ ಎಂಬವರು ಕಸ ಬಿಸಾಡಿದ ದೃಶ್ಯವನ್ನು ಸ್ಥಳೀಯ ಯುವಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದರು. ಈ ಮಾಹಿತಿ ತಕ್ಷಣವೇ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನೀಡಲಾಗಿತ್ತು.ಗ್ರಾಮ ಪಂಚಾಯತ್ ಅಧಿಕಾರಿಗಳು...

“ನ.ಪಂ. ಮಾಜಿ ಆಧ್ಯಕ್ಷ ವಿನಯ ಕಂದಡ್ಕರವರ ನಡೆ ಪಕ್ಷ ವಿರೋಧಿ ಚಟುವಟಿಕೆಯಲ್ಲವೇ?”  – ಸುಪ್ರೀತ್ ಮೋಂಟಡ್ಕ ಪ್ರಶ್ನೆ

“ಇತ್ತೀಚೆಗೆ ನಡೆದ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕಸದ ವಿಚಾರವಾಗಿ ಭಾರಿ ಚರ್ಚೆ ನಡೆದಿದ್ದು, ಈ ಬಗ್ಗೆ ನನ್ನ ಹೆಸರನ್ನು ಉಲ್ಲೇಖ ಮಾಡಿರುವ ಬಿ.ಜೆ.ಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮತ್ತು ನಗರ ಪಂಚಾಯತ್ ಮಾಜಿ ಅಧ್ಯಕ್ಷರು ವಿನಯ ಕಂದಡ್ಕ ರವರು ಇವತ್ತು ಪಕ್ಷದ ಉನ್ನತ ಹುದ್ದೆಯಲ್ಲಿ ಇದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದು ಕಾರ್ಯಕರ್ತರಿಗೆ ಮಾಡಿದ...

ಹೈನುಗಾರಿಕೆ ವಿಭಾಗದಲ್ಲಿ “ಶ್ರೇಷ್ಠ ಕೃಷಿಕ” ಪ್ರಶಸ್ತಿ ಪಡೆದ ಶಿವರಾಮ್ ಮಡಪ್ಪಾಡಿ

ಕೃಷಿ ಇಲಾಖೆ ಸುಳ್ಯ ಇದರ ವತಿಯಿಂದ ಎಡಮಂಗಲ ಹಾಲು ಉತ್ಪಾದಕರ ಸಹಯೋಗದೊಂದಿಗೆ 2025-26ನೇ ಸಾಲಿನ ATMA ಯೋಜನೆಯಡಿ ಕಿಸಾನ್ ಗೋಷ್ಠಿ ಹಾಗೂ ಸಾಧಕ ರೈತರಿಗೆ ಕಾರ್ಯಕ್ರಮವು ನಡೆಯಿತು.ಈ ಕಾರ್ಯಕ್ರಮದಲ್ಲಿ ಶಿವರಾಮ್ ಮಡಪ್ಪಾಡಿ ಇವರು ಹೈನುಗಾರಿಕೆ ವಿಭಾಗದಲ್ಲಿ “ಶ್ರೇಷ್ಠ ಕೃಷಿಕ” ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಪ್ರಶಸ್ತಿ ನೀಡಿ ಸನ್ಮಾನಿಸಿದರು.
Loading posts...

All posts loaded

No more posts

error: Content is protected !!