ಪೆರುವಾಜೆ ಜಲದುರ್ಗಾದೇವಿ ಕ್ಷೇತ್ರದಲ್ಲಿ  ನವರಾತ್ರಿ ಉತ್ಸವ ಮೊದಲ ದಿನ ; ಮುಕ್ಕೂರು ಶ್ರೀ ಉಳ್ಳಾಲ್ತಿ ಭಕ್ತವೃಂದದ ವತಿಯಿಂದ ಬಂಟಿಂಗ್ಸ್ ಅಳವಡಿಕೆಗೆ ಕರಸೇವೆ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ‌ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವ ಸೆ.21 ರಿಂದ ಪ್ರಾರಂಭಗೊಂಡಿದ್ದು, ಶ್ರೀ ಉಳ್ಳಾಲ್ತಿ ಭಕ್ತವೃಂದ ಮುಕ್ಕೂರು ವತಿಯಿಂದ ಕರಸೇವೆ ನಡೆಯಿತು.ರವಿವಾರ ರಾತ್ರಿ ರಥಬೀದಿಯ ಒಂದು ಬದಿಯಲ್ಲಿ ಬಂಟಿಂಗ್ಸ್ ಅಳವಡಿಕೆ ನಡೆಯಿತು.

ನಡುಗಲ್ಲು ಜವಾಹರ್ ಯುವಕ ಮಂಡಲಕ್ಕೆ 2024-25ನೇ ಸಾಲಿನ “ಗಮನಾರ್ಹ ಸಾಧನೆ ಮಾಡಿದ ಯುವಕ ಮಂಡಲ ಪ್ರಶಸ್ತಿ”

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಮಹಾಸಭೆಯಲ್ಲಿ ಅತ್ಯುತ್ತಮ ಯುವಕ ಹಾಗೂ ಯುವತಿ ಮಂಡಲಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಕಾರ್ಯಕ್ರಮವು ಸೆ.20 ರಂದು ಯುವಜನ ಸಂಯುಕ್ತ ಮಂಡಳಿ ಸಭಾಭವನ ಯುವಸದನ ಸುಳ್ಯ ಇಲ್ಲಿ ನಡೆಯಿತು.ಈ ಸಂದರ್ಭದಲ್ಲಿ ನಡುಗಲ್ಲು ಜವಾಹರ್ ಯುವಕ ಮಂಡಲವು “2024-25ನೇ ಸಾಲಿನ ಗಮನಾರ್ಹ ಸಾಧನೆ ಮಾಡಿದ ಯುವಕ...
Ad Widget

ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ಸ. ಹಿ. ಪ್ರಾ. ಶಾಲೆ ಶೇಣಿ, ಚೊಕ್ಕಾಡಿಯಲ್ಲಿ ಹಸಿರು ಉಸಿರು ಕಾರ್ಯಕ್ರಮ

ಮಕ್ಕಳಿಗೆ ಪರಿಸರವನ್ನು ಪ್ರೀತಿಸುವ ಜೀವನ ಮೌಲ್ಯಗಳನ್ನು ಕಲಿಸಿ: ಅಶೋಕ್ ಚೂಂತಾರ್ ಶಾಲಾ ಆವರಣದಲ್ಲಿ ಹಣ್ಣಿನ ತೋಟ, ಔಷಧಿಯ ಸಸ್ಯೋದ್ಯಾನ ನಿರ್ಮಾಣ ಗಿಡಗಳ ಅತ್ಯುತ್ತಮ ಪೋಷಣೆಗೆ ಬಹುಮಾನ ಘೋಷಣೆ ಎನ್ನೆಂಸಿ, ಸೆ.22; ನೆಹರೂ ಸ್ಮಾರಕ ಪದವಿ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಶೇಣಿ ಶಾಲಾ ಅಭಿವೃದ್ಧಿ ಸಮಿತಿ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ...

ಸುಳ್ಯ: ಸೈಂಟ್ ಜೋಸೆಫ್ ಶಾಲಾ ಯೋಗ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಸೆಪ್ಟೆಂಬರ್ 19ರಂದು   ವಾಮಂಜೂರಿನ ಎಸ್.ಡಿ.ಎಮ್ ಮಂಗಳ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ನಡೆದ 14ರ ವಯೋಮಾನದ ಯೋಗ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಆರ್ಟಿಸ್ಟಿಕ್ ವೈಯಕ್ತಿಕ ವಿಭಾಗದಲ್ಲಿ ಹಾರ್ದಿಕ 7ನೇ ಪ್ರಥಮ, ಟ್ರೆಡಿಶನಲ್ ವಿಭಾಗ ಸೋನಾ ಅಡ್ಕರ್ 7ನೇ, ಆರ್ಟಿಸ್ಟಿಕ್ ಡಬಲ್ಸ್ ಹಾಗೂ ತಾಳಬದ್ದ ಡಬಲ್ಸ್ ವಿಭಾಗದಲ್ಲಿ  ಹಾರ್ದಿಕ...

ಬೊಮ್ಮಾರು ಗಜಾನನ ಯುವತಿ ಮಂಡಲಕ್ಕೆ “2024-25ನೇ ಸಾಲಿನ ಅತ್ಯುತ್ತಮ ಯುವತಿ ಮಂಡಲ ಪ್ರಶಸ್ತಿ”

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಮಹಾಸಭೆಯಲ್ಲಿ ತಾಲೂಕಿನ ಅತ್ಯುತ್ತಮ ಯುವಕ&ಯುವತಿ ಮಂಡಳಿಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಕಾರ್ಯಕ್ರಮವು ನಡೆಯಿತು.“2024-25ನೇ ಸಾಲಿನ ತಾಲೂಕಿನ ಅತ್ಯುತ್ತಮ ಯುವತಿ ಮಂಡಲ ಪ್ರಶಸ್ತಿ”ಯನ್ನು ಬೊಮ್ಮಾರು ಗಜಾನನ ಯುವತಿ ಮಂಡಲವು ಪಡೆದುಕೊಂಡಿತು.

ನೆಕ್ಸ್ಟ್ ಜನರೇಶನ್ ಜಿ.ಎಸ್.ಟಿ ಪ್ರಚಾರ ಅಭಿಯಾನದ ರಾಜ್ಯ ಸಂಚಾಲಕರಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇಮಕ

ನೆಕ್ಸ್ಟ್ ಜನರೇಶನ್  ಜಿ.ಎಸ್.ಟಿ ಪ್ರಚಾರ ಅಭಿಯಾನದ ರಾಜ್ಯ ಸಂಚಾಲಕರಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರನ್ನು ಪಕ್ಷ ನೇಮಕಗೊಳಿಸಿದೆ. ಜಿ.ಎಸ್.ಟಿ ಸ್ಲಾಬ್ ವಿಚಾರವಾಗಿ ರಾಜ್ಯದ್ಯಾಂತ ಜನಸಾಮಾನ್ಯರಿಗೆ ತಿಳಿಸಲು ಈ ಜವಾಬ್ದಾರಿ ನೀಡಲಾಗಿದ್ದು,ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ತಾಲೂಕು, ಜಿಲ್ಲಾ ಮಟ್ಟದಲ್ಲಿ  ಆಯೋಜಿಸಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.

ಜ್ಯೋತಿಷಿ, ಸಾಹಿತಿ, ಕಲಾವಿದ ಮತ್ತು ಸಂಘಟರಾದ ಎಚ್.ಭೀಮರಾವ್ ವಾಷ್ಠರ್ ಅವರಿಗೆ “ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ” ಪ್ರಧಾನ

ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ನವರು ಮಂಗಳೂರಿನ ದೇರಳಕಟ್ಟೆಯ ನವಾಜ್ ಸಂಕೀರ್ಣದಲ್ಲಿನ ಅಲ್ ಸಲಾಮ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಸಮಾರಂಭದಲ್ಲಿ ಸುಳ್ಯದ  ಕಲಾವಿದ, ಕವಿ, ಕಥೆಗಾರ, ಸಂಘಟಕ, ಗಾಯಕ, ನಟ, ಚಿತ್ರ ನಿರ್ದೇಶಕ, ಅಂಕಣಕಾರ ಮತ್ತು ಜ್ಯೋತಿಷಿಯಾದ ಎಚ್.ಭೀಮರಾವ್ ವಾಷ್ಠರ್ ಅವರಿಗೆ ಸಮಾರಂಭದ ವೇದಿಕೆಯಲ್ಲಿ ಗಣ್ಯರ ಸಮಕ್ಷಮ "ಸಮಾಜ ಸೇವಾ ರತ್ನ ರಾಜ್ಯ...

ಸುಳ್ಯ : ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಯುರ್ವೇದದಿಂದ ಅರೋಗ್ಯ ಮತ್ತು ಯೋಗ ಪ್ರಾತ್ಯಕ್ಷಿಕೆ

ಆಯುರ್ವೇದ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 19ರಂದು ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದಪಯಸ್ವಿನಿ ಪ್ರೌಢಶಾಲೆ ಜಾಲ್ಸೂರಿನಲ್ಲಿ ಆಯುರ್ವೇದ ದಲ್ಲಿ ಆರೋಗ್ಯ, ಆಹಾರ ಪದ್ಧತಿ ಹಾಗೂ ಯೋಗದ ಮಹತ್ವದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಕೆ.ವಿ.ಜಿ  ಆಯುರ್ವೇದ ಕಾಲೇಜಿನ ರಷಶಾಸ್ತ್ರ ಭೈಷಜ್ಯ ಕಲ್ಪನಾ ವಿಭಾಗದ ಪ್ರೊಫೆಸರ್ ಡಾ. ಹರ್ಷಿತ ಎಂ. ನಡೆಸಿಕೊಟ್ಟರು. ವಿದ್ಯಾರ್ಥಿಗಳಾದ ಪ್ರಸನ್ನ ಬಿ.ಎಸ್,...

ರವಿ ಪಾಂಬಾರ್ ಅವರಿಗೆ “ರಾಜ್ಯ ಮಟ್ಟದ ಭಾವೈಕ್ಯತಾ ಸಾಹಿತ್ಯರತ್ನ ಪ್ರಶಸ್ತಿ”

ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದಕ್ಷಿಣ ಕನ್ನಡ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಸೆ.14 ರಂದು ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾರತ್ನ ರವಿ ಪಾಂಬಾರ್ ಅವರಿಗೆ “ರಾಜ್ಯ ಮಟ್ಟದ ಭಾವೈಕ್ಯತಾ ಸಾಹಿತ್ಯರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಗುತ್ತಿಗಾರು: ಟೈಲರ್ ಅಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆ

ಸುಬ್ರಹ್ಮಣ್ಯ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಸುಳ್ಯ ಇದರ ಗುತ್ತಿಗಾರು ವಲಯದ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ನೆರವೇರಿತು.ವಲಯದ ನೂತನ ಅಧ್ಯಕ್ಷರಾಗಿ ಮಾಧವ ಶೆಟ್ಟಿಗಾರ್ ಸುಬ್ರಹ್ಮಣ್ಯ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನವೀನ್.ಕೆ, ಕಾರ್ಯದರ್ಶಿಯಾಗಿ ನೇತ್ರಾವತಿ, ಕೋಶಾಧಿಕಾರಿಯಾಗಿ ಕವಿತಾ ಗುತ್ತಿಗಾರು ನೇಮಕಗೊಂಡರು.
Loading posts...

All posts loaded

No more posts

error: Content is protected !!