- Saturday
- March 7th, 2026
ಮುದುಡಿ ಹೋದ ಮನದ ಮೌನಕೆ ಮಾತುಗಳೇ ಉತ್ತರ, ಆದರೂ ಅನಿಸುವುದು ಕೆಲವೊಮ್ಮೆ ಇಲ್ಲಿ ಮಾತಿಗಿಂತಲೂ ಮೌನವೇ ಉತ್ತಮ...ಕದಡಿ ಹೋದ ಮನದ ಭಾವನೆಗಳಿಗೆ ಇಲ್ಲದ ಭರವಸೆಗಳ ತುಂಬುವುದಕ್ಕಿಂತ, ಕಾಣದಾದ ಬದುಕ ದಾರಿಗೆ ಸಿಗದ ಕನಸುಗಳ ಹೊಸೆಯುವುದಕ್ಕಿಂತ ಮೌನವಾಗಿ ಇರುವುದೇ ಉತ್ತಮ, ಬದುಕಿನಲ್ಲಿ ಕೆಲವೊಮ್ಮೆ ಮೌನವಾಗಿ ಉಳಿಯುವುದೇ ಉತ್ತಮ...ಮನದಲ್ಲೊಂದು ನಿರ್ಧಾರವಿಲ್ಲದೇ, ಬದುಕಿಗೊಂದು ಗುರಿಯು ಇಲ್ಲದೇ ನೂರು ತಿರುವುಗಳ ಬದುಕ...
“ಜೀವನಯಾನ” ಕವನ ಸಂಕಲನದ ಮೂಲಕ ಸಾರಸ್ವತ ಲೋಕಕ್ಕೆ ಬರುತ್ತಿರುವ ‘ಉಲ್ಲಾಸ್ ಕಜ್ಜೋಡಿ’ ತುಂಬು ಜೀವನೋತ್ಸಾಹದ ಯುವಕ. ದಿವ್ಯಾಂಗಚೇತನರಾದ ಉಲ್ಲಾಸ್ ಈಗ ನಮಗೆಲ್ಲಾ ಆದರ್ಶವಾಗಿ ತಮ್ಮ ಸಂವೇದನಾಶೀಲ ಕವಿತೆಗಳ ಮೂಲಕ ಎಲ್ಲರನ್ನೂ ಎದುರಾಗಿದ್ದಾರೆ. “ಜೀವನಯಾನ” ಎಂಬ ಶೀರ್ಷಿಕೆಗೆ ತಕ್ಕಂತೆ ತನ್ನ ಜೀವನಪಯಣದ ತಲ್ಲಣಗಳನ್ನೇ ಕವಿತೆಗಳನ್ನಾಗಿಸಿ ನಮ್ಮನ್ನೆಲ್ಲ ಬೆರಗುಗೊಳಿಸಿದ್ದಾರೆ. “ಕ್ಷಣಿಕ ಬದುಕುವ ಹೂವಿಗಿರದ ಸ್ವಾರ್ಥ ಅದೆಷ್ಟೋ ವರ್ಷ ಬದುಕುವ...
ಕಳೆದ ಫೆಬ್ರವರಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡ ಕೃತಿ "ಪ್ರಭಾಕರ ಶಿಶಿಲರ ವಿಶಿಷ್ಟ ಕತೆಗಳು". ಇದು ಶಿಶಿಲರ ಆಯ್ದ ಕತೆಗಳ ಸಂಪಾದಿತ ಕೃತಿ. ಸಂಪಾದಕರು ಶಿಶಿಲ ಅಭಿಮಾನಿ ಕನ್ನಡ ಪ್ರಾಧ್ಯಾಪಕರಾದ ಡಾ ಎಂ.ಪಿ. ಶ್ರೀನಾಥ್. ಇವರು ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು.ರಾವು...
ಡಾ|| ಮುರಲೀ ಮೋಹನ್ ಚೂಂತಾರುಜೂನ್ 26 ರಂದು ವಿಶ್ವದಾದ್ಯಂತ “ಮಾದಕವಸ್ತು ವಿರೋಧಿ ದಿನ” ಎಂದು ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು ಜಾಗೃತಗೊಳಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ ಎಂದರೂ ತಪ್ಪಲ್ಲ.ಇಂದು ನಾವು ಜೀವಿಸುತ್ತಿರುವ ಈ ಕಾಲಘಟ್ಟ ಎನ್ನುವುದು, ಬಹಳ ಸ್ಪರ್ಧಾತ್ಮಕ ಜಗತ್ತು. ಎಲ್ಲವೂ ಬಹಳ ವೇಗದಲ್ಲಿ...
ಮುಗಿಲನ್ನೇ ಮುರಿಯುತ್ತಾ ಆ ಮಳೆಯ ಹನಿಗಳು ಇಳೆಸೇರ ಬರುತಿವೆ ಕಾತುರದಿಂದ, ಆತುರಾತುರದಿಂದ...ಸುಡು ಬಿಸಿಲ ಶಾಖಕ್ಕೆ ಕೆಂಪಾದ ಭೂಮಿಯದು ಕಾಯುತ್ತಾ ಕುಳಿತಿತ್ತು ತನ್ನ ಸ್ನೇಹಿತನ ಆಗಮನಕೆ, ತನ್ನೊಳಗಿನ ಬಿಸಿಯನ್ನು ತಣಿಸುವ ಆ ಮಳೆರಾಯನ ಆಗಮನಕೆ...ಮಳೆಯು-ಇಳೆಯು ಜೊತೆ ಸೇರಿದಾಗ ಉಂಟಾದ ಸಂಭ್ರಮದ ಸೊಬಗಿಗೆ ಸಾಕ್ಷಿಯಾಗಿತ್ತು ಜೀವಸಂಕುಲ, ಮನವ ತಣಿಸಿತ್ತು ಸೃಷ್ಟಿ ಇಂಚರ...✍️ ಉಲ್ಲಾಸ್ ಕಜ್ಜೋಡಿ
✍️ಡಾ|| ಮುರಲೀ ಮೋಹನ್ ಚೂಂತಾರುಲೀಚ್ ಎಂದು ಆಂಗ್ಲಭಾಷೆಯಲ್ಲಿ ಕರೆಸಿಕೊಳ್ಳುವ ‘ಜಿಗಣೆ’ ಅಥವಾ ‘ಇಂಬಳ’ ಸಾಮಾನ್ಯವಾಗಿ ತೇವವಿರುವ ಜಾಗಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ. ಈ ಜೀವಿಯ ಆಹಾರ ಮತ್ತು ವಾಸಸ್ಥಳ ಎಲ್ಲವೂ ಜಲವೇ ಆಗಿರುವುದರಿಂದ ಇವುಗಳಿಗೆ ‘ಜಲೌಕ’ ಎಂದೂ ಕರೆಯುತ್ತಾರೆ. ವಿಷಕಾರಕ ಜಿಗಣೆ ಮತ್ತು ವಿಷರಹಿತ ಜಿಗಣೆ ಎಂದು ಎರಡು ವಿಧಗಳಿದ್ದು, ವಿಷರಹಿತ ಜಿಗಣೆಗಳನ್ನು ಚಿಕಿತ್ಸೆಗಾಗಿ...
ತನ್ನ ಮನದ ನೋವುಗಳ ಇತರರಿಂದ ಮುಚ್ಚಿಡುವ ಆ ವ್ಯಕ್ತಿಯು ತನ್ನ ಕನಸಿನಲ್ಲೂ ಕೂಡ ಕಣ್ಣೀರ ಸುರಿಸುವನು, ನಾಲ್ಕು ಜನರ ಮಧ್ಯೆ ಮಾತ್ರ ನಗುನಗುತ್ತಾ ಬದುಕುವನು…ನಿದ್ರೆಯಿಲ್ಲದೇ ಅದೆಷ್ಟೋ ರಾತ್ರಿಗಳ ಕಳೆದಿರುವನು ಅವನು, ನಾಳೆಗಳ ಯೋಚನೆಯಲ್ಲಿ ಕೊರಗಿ ಕರಗಿರುವನು ಅವನು, ಏಕಾಂಗಿಯಾಗಿ ಅತ್ತು ತನ್ನ ಮನದ ನೋವುಗಳಿಗೆ ತಾನೇ ಔಷಧಿಯ ನೀಡುವನು ಅವನು…ಎಲ್ಲರ ಮನಸ್ಸಿನ ನೋವುಗಳೇ ಅವನಲ್ಲೂ, ಎಲ್ಲರ...
ಬರಹ : ಡಾ| ಮುರಲೀ ಮೋಹನ್ ಚೂಂತಾರ್ ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಎಂದು ಆಚರಿಸಿ ಹೃದಯ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 2000ನೇ ಇಸವಿಯಲ್ಲಿ ಈ ಆಚರಣೆ “ದೈಹಿಕ ಚಟುವಟಿಕೆ ಮತ್ತು ಹೃದಯದ ಆರೋಗ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ ಈ ಆಚರಣೆ ಆರಂಭವಾಗಿತ್ತು. 2021ರಲ್ಲಿ ‘ಹೃದಯವನ್ನು ಜೋಡಿಸಿ’...
ಯಕ್ಷಪ್ರತಿಮೆ ಲೋಕಾರ್ಪಣೆ- ಪ್ರಶಸ್ತಿ ಪ್ರದಾನ- ಮಹಿರಾವಣ ಯಕ್ಷಗಾನ ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಯೋಗದೊಂದಿಗೆ ಅ.06 ರಂದು ಸಂಜೆ 5.45 ರಿಂದ ರಾತ್ರಿ 9.30 ರ ವರೆಗೆ ಯಕ್ಷ ಸಂಭ್ರಮವನ್ನು ಏರ್ಪಡಿಸಲಾಗಿದೆ. ಯಕ್ಷಪ್ರತಿಮೆ ಲೋಕಾರ್ಪಣೆ- ಚೆಂಡೆ ನಿನಾದ ಸಂಜೆ 5.45 ಕ್ಕೆ ಹಿಮ್ಮೇಳ ಗುರು...
ನೇತ್ರದಾನ ಬಹಳ ಪವಿತ್ರವಾದ ದಾನ. ನಾವು ಸತ್ತ ಬಳಿಕವೂ ಜಗತ್ತನ್ನು ಆನಂದಿಸಬೇಕಿದ್ದಲ್ಲಿ ನಮ್ಮ ಕಣ್ಣುಗಳನ್ನು ಇನ್ನೊಬ್ಬರಿಗೆ ನಮ್ಮ ಮರಣಾನಂತರ ದಾನ ಮಾಡಬೇಕು. ನಮ್ಮ ಕಣ್ಣುಗಳ ಮುಖಾಂತರ ಮತ್ತೊಬ್ಬ ಅಂಧ ವ್ಯಕ್ತಿಯ ಬಾಳಿಗೆ ಬೆಳಕು ನೀಡಿದಾಗ ಸಿಗುವ ಸಾರ್ಥಕತೆ ಇನ್ನಾವುದೇ ದಾನದಲ್ಲಿ ದೊರಕಲಿಕ್ಕಿಲ್ಲ. ಭಾರತದಲ್ಲಿ ಸರಿ ಸುಮಾರು 10 ಮಿಲಿಯನ್ ಮಂದಿ ದೃಷ್ಟಿಹೀನತೆಯಿಂದ ಬಳಲುತ್ತಿದ್ದು 3ರಿಂದ 4...
Loading posts...
All posts loaded
No more posts
