- Monday
- June 8th, 2026
ಇತ್ತೀಚಿನ ದಿನಗಳಲ್ಲಿ ಕೆಮ್ಮಿನ ಸಿರಪ್ ಬಳಕೆ ಬಹಳ ಜಾಸ್ತಿಯಾಗುತ್ತಿದೆ. ವೈದ್ಯರ ಚೀಟಿ ಇಲ್ಲದೆ ಬಹಳ ಸುಲಭವಾಗಿ ಸಿಗುವ ಕಾರಣದಿಂದ ಅನಗತ್ಯವಾಗಿ ಬಳಕೆಯಾಗುತ್ತಿದ್ದು, ಜನರು ಟಾನಿಕ್ನಂತೆ ಎರ್ರಾಬಿರ್ರಿ ಕುಡಿಯುತ್ತಿದ್ದಾರೆ. ವಿಷಾಂಶಯುಕ್ತ ಮತ್ತು ಕೆಟ್ಟು ಹೋದ ಕೆಮ್ಮಿನ ಸಿರಪ್ ಬಳಸಿ ಕೆಲವು ಮಂದಿ ಮಕ್ಕಳು ಸತ್ತು ಹೋಗಿರುವುದು ಕಳೆದೆರಡು ತಿಂಗಳುಗಳಿಂದ ರಾಷ್ಟ್ರೀಯ ಸುದ್ದಿಯಾಗಿ ಜನರಲ್ಲಿ ಆತಂಕ ಮೂಡಿಸಿದೆ. ಈ...
ಕರ್ನಾಟಕ ಬರಿಯ ನಾಡಲ್ಲ. ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ಅದು ನಮ್ಮಂತರಂಗದ ಮಾತು. ಇಂದು ನವೆಂಬರ್ ೧ ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡದ ದಿನ .ಕರ್ನಾಟಕ ರಚನೆಯ ದಿನ. 1947 ಆಗಸ್ಟ್ 15ರಂದು ಭಾರತ ಬ್ರಿಟಿಷರ ಕಪಿಮುಷ್ಟಿಯಿಂದ ಮುಕ್ತಿ ಹೊಂದಿತು.1950ರಲ್ಲಿ ಭಾರತವು ಗಣರಾಜ್ಯವಾಯಿತು. ಇದಾದ ನಂತರ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಾಜ್ಯಗಳ...
ಕಾಲವದು ತಲೆಕೆಳಗಾಗಿದೆ, ಚಳಿಗಾಲ ಮಳೆಗಾಲವಾಗಿದೆ...ದೀಪಾವಳಿ ಹಬ್ಬವು ಕಳೆದಿತ್ತು, ಇನ್ನೇನು ಚಳಿಗಾಲ ಶುರುವಾಗಲೆಬೇಕಿತ್ತು, ಆದರೆ ಮಳೆಗಾಲ ಹೊರಟು ಹೋಗಲು ಒಲ್ಲೇ ಎನ್ನುತ್ತಿತ್ತು, ಚಳಿಗಾಲವದು ಯಾಕೋ ದೂರವೇ ಉಳಿದಿತ್ತು...ಸಮಯವದು ಸೂತ್ರವ ತಪ್ಪಿದೆ, ಕಾಲವದು ತಲೆಕೆಳಗಾಗಿದೆ...ಮನುಷ್ಯನ ಬದುಕಿನ ದುರಾಸೆಯು ಈಗ ಮಿತಿಯನ್ನು ಮೀರಿದೆ, ಪರಿಸರದ ನಿಯಮವ ಮೀರಿ ಮನುಜನ ಯೋಚನೆಯು ಸಾಗಿದೆ, ದೂರಾಲೋಚನೆಯು ಸಾಗಿದೆ...ಕಾಲ-ಕಾಲಕ್ಕೆ ಮಳೆ-ಬೆಳೆಯಾಗುವ ಕಾಲವು ಇಂದು ಕಾಣೆಯಾಗಿದೆ,...
ನಗುವಾಗಲೇ ಅಳುವನ್ನು ನೀಡುವುದು ಬದುಕು, ಅಳುವಿನಿಂದಲೇ ನಗುವಿನ ಬೆಲೆಯನ್ನು ತಿಳಿಸುವುದು ಬದುಕು...ಖುಷಿಯ ಕ್ಷಣದಲ್ಲೇ ದುಃಖವನ್ನು ನೀಡುವುದು ಬದುಕು, ದುಃಖದಿಂದಲೇ ಸಂತೋಷದ ಬೆಲೆಯನ್ನು ಕಲಿಸುವುದು ಬದುಕು...ಜೊತೆಗಿದ್ದಾಗಲೇ ನಮ್ಮವರನ್ನು ನಮ್ಮಿಂದ ದೂರ ಮಾಡುವುದು ಬದುಕು, ಮತ್ತೆ ಮರಳಿ ಅವರಿಗೆ ಪ್ರೀತಿಯನ್ನು ನೀಡಬೇಕೆಂದರೂ-ಅವರಿಂದ ಪ್ರೀತಿಯನ್ನು ಪಡೆಯಬೇಕೆಂದರೂ ಅವರು ಮತ್ತೆ ಎಂದೂ ನಮ್ಮ ಬಳಿ ಹಿಂತಿರುಗಿ ಬಾರದಂತೆ ಮಾಡುವುದು ಬದುಕು, ಇಲ್ಲಿ...
“ನೆಟ್ ವರ್ಕ್ ಸಮಸ್ಯೆ” ಇದು ಕೇವಲ ನಮ್ಮ-ನಿಮ್ಮ ಸಮಸ್ಯೆ ಅಷ್ಟೇ ಅಲ್ಲ. ಇದು ರಾಜ್ಯದ ಹಾಗೂ ದೇಶದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಸಿಗುವಂತಹ ಒಂದು ಭೀಕರ ಸಮಸ್ಯೆ...ಈಗ ನಾನು ಒಬ್ಬ ಗ್ರಾಮೀಣ ಪ್ರದೇಶದ ನಿವಾಸಿಯಾಗಿ ಹೇಳುವುದಾದರೆ ನಮ್ಮ ಗ್ರಾಮೀಣ ಭಾಗಗಳ ಅಥವಾ ಗ್ರಾಮೀಣ ಪ್ರದೇಶಗಳ ಜನರ ಪರಿಸ್ಥಿತಿ ಹೇಗಿದೆ ಎಂದರೆ ಹತ್ತಾರು ವರ್ಷಗಳಿಂದಲೂ ನಿರಂತರವಾಗಿ...
ಕಡಲ ಸೇರುವ ಆ ನದಿಯ ಹಣೆಯಲ್ಲಿ ಬರೆದಿರುವುದು “ನಿನ್ನ ಅಸ್ತಿತ್ವವೇ ಆ ಕಡಲು-ನೀ ಹೋಗಿ ಸೇರು ಅದರ ಒಡಲು” ಎಂದು...ಹಾಗೆಯೇ ನದಿಯಂತೆ ಸಾಗುವ ಈ ನಮ್ಮ ಬದುಕಿಗೂ ಇಹುದು ಅಂತಹುದೇ ಒಂದು ಕಡಲು, ಕೊನೆಗೊಂದು ದಿನ ನಾವೂ ಕೂಡ ಸೇರಲೇಬೇಕು ಅದರ ಒಡಲು...ಹಣೆಯ ಬರಹದಲ್ಲಿ ಬರೆದಂತೆ ಸಾಗುವ ಈ ನಮ್ಮ ಬದುಕಿನಲ್ಲಿ ಸುಖಾಸುಮ್ಮನೆ ಏತಕೆ ಈ...
ಇಂದು ವಿದ್ಯಾರ್ಥಿಗಳ ಕೊರತೆಯಿಂದ ನಮ್ಮ ಕಣ್ಣೆದುರೇ ಮುಚ್ಚಿ ಹೋಗುತ್ತಿರುವ ಸರ್ಕಾರಿ ಶಾಲೆಗಳನ್ನು ನೋಡಿಯೂ ನೋಡದಂತೆ ಕಣ್ಮುಚ್ಚಿ ಬೆಚ್ಚಗೆ ಕುಳಿತಿರುವೆವು ನಾವು ಪ್ರಬುದ್ಧ ಮನಸ್ಸಿನ ಬುದ್ಧಿಜೀವಿಗಳು...ಒಂದೇ ಒಂದು ಸಲ ಬದುಕಿನಲ್ಲಿ ಸ್ವಲ್ಪ ಹಿಂದೆ ಹೋಗಿ ನೆನಪಿಸಿಕೊಳ್ಳೋಣ, ಹತ್ತು-ಹದಿನೈದು-ಇಪ್ಪತ್ತು ವರ್ಷಗಳ ಹಿಂದೆ ನಾವೂ ಕೂಡ ಅಂತಹುದೇ ಒಂದು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು...ನಾವಿಂದು ಬದುಕಿನಲ್ಲಿ ಇಷ್ಟೊಂದು ಪ್ರಬುದ್ಧರಾಗಲು, ಸಮಾಜದಲ್ಲಿ ಇಷ್ಟೊಂದು...
ಯಾವುದೇ ರೀತಿಯ ಗಾಯ ಅಥವಾ ಅಪಘಾತಗಳಾದಾಗ ತಕ್ಷಣವೇ ಘಾಸಿಗೊಳಗಾದವರಿಗೆ ನೀಡುವ ಪ್ರಾಥಮಿಕವಾದ ಸಹಾಯವನ್ನು ಪ್ರಥಮ ಚಿಕಿತ್ಸೆ ಎನ್ನಲಾಗುತ್ತದೆ. ಇದಕ್ಕೆ ವಿಶೇಷವಾದ ತರಬೇತಿ ಅಥವಾ ಪೂರ್ವ ತಯಾರಿ ಅಗತ್ಯವಿಲ್ಲ. ಸಾಮಾನ್ಯ ಜ್ಞಾನವನ್ನು ಬಳಸಿಕೊಂಡು ಆ ಕ್ಷಣದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ರೋಗಿಯ ಪ್ರಾಣವನ್ನು ರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತದೆ. ವೈದ್ಯರ ಲಭ್ಯತೆ ಸಿಗುವವರೆಗೆ ಅಥವಾ ಸುಸಜ್ಜಿತವಾದ ಆಸ್ಪತ್ರೆ ತಲುಪುವವರೆಗೆ...
ಪ್ರತಿ ವರ್ಷ ಸೆಪ್ಟಂಬರ್ 10ರಂದು ವಿಶ್ವ ಆತ್ಯಹತ್ಯಾ ತಡೆದಿನ ಎಂದು ಆಚರಿಸಿ, ಯುವಜನರಲ್ಲಿ ಆತ್ಮಹತ್ಯೆಯನ್ನು ಮಾಡದಿರುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ವಿಶ್ವದಲ್ಲಿ ಪ್ರತಿ 60 ಸೆಂಕೆಂಡ್ಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮತ್ತು ವರ್ಷವೊಂದರಲ್ಲಿ ಏನಿಲ್ಲವೆಂದರೂ 10ರಿಂದ 12 ಲಕ್ಷ ಮಂದಿ ಆತ್ಮಹತ್ಯೆ ಮಾಡುತ್ತಿದ್ದಾರೆ. ಜೀವನದಲ್ಲಿ ಜಿಗುಪ್ಸೆ, ಬದುಕಿನಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ನಷ್ಟ, ವಿದ್ಯಾಭ್ಯಾಸದಲ್ಲಿ ಅನುತೀರ್ಣ, ಕೆಲಸದಲ್ಲಿ ಒತ್ತಡ...
ನಮ್ಮ ದೇಶ ಕಂಡಂತಹ ಅತ್ಯಂತ ಸಂಭಾವಿತ, ಸರಳ, ಸಜ್ಜನ ತತ್ವಜ್ಞಾನಿ ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು ದೇಶದೆಲ್ಲೆಡೆ ‘ಶಿಕ್ಷಕರ ದಿನಾಚರಣೆ’ ಆಚರಿಸಲಾಗುತ್ತಿದೆ. 1962 ರಲ್ಲಿ ಅವರು ನಮ್ಮ ದೇಶದ ಎರಡನೇ ರಾಷ್ಟ್ರಪತಿಯಾದಾಗ ಅವರ ಹಿತೈಷಿಗಳು, ಸ್ನೇಹಿತರು ಮತ್ತು ಶಿಷ್ಯಂದಿರು ಅವರಲ್ಲಿ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಭಿನ್ನವಿಸಿಕೊಂಡಾಗ ನಯವಾಗಿ ತಿರಸ್ಕರಿಸಿ,...
Loading posts...
All posts loaded
No more posts
