ಬಿಟ್ಟುಬಿಡಿ ಪ್ರಾಮಾಣಿಕತೆಯ ಕನಸು – ಇಲ್ಲಿ ನೆಗೆಟಿವ್‌ ಹರಡೋರೇ ಫೇಮಸ್ಸು!

ಇತ್ತೀಚೆಗಷ್ಟೇ ಗಂಡನನ್ನು ತ್ಯಜಿಸಿ ಬೇರೊಬ್ಬನೊಂದಿಗೆ ತೆರಳಿ, ಮರಳಿ ಗಂಡನನ್ನು ಸೇರಿದ ಮಹಿಳೆ ಮತ್ತು ಆಕೆಯೇ ಬೇಕೆಂದು ಅತ್ತೂ ಕರೆದ ಆಕೆಯ ಗಂಡ ಇಬ್ಬರೂ ಸಖತ್‌ ಸುದ್ದಿಯಾದರು. ಕೊನೆಗೂ ಸುದ್ದಿ ವಾಹಿನಿಯೊಂದರ ಮುಂದಾಳತ್ವದಲ್ಲಿ ಅವರಿಬ್ಬರು ಪರಸ್ಪರ ಹಾರ ಬದಲಾಯಿಸಿಕೊಂಡು ಮರು ಮದುವೆಯಾಗಿದ್ದು, ಆನಂತರ ಆಕೆ ಗಂಡನೊಂದಿಗೆ ತೆರಳಿದ್ದು ಎಲ್ಲವೂ ಈಗ ಹಳೆಯದು. ಇದೀಗ ಇದೇ ಜೋಡಿಗೆ ಟ್ರಾವೆಲ್‌...

ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಲ್ಲ ಖಾಯಂ ವೈದ್ಯಾಧಿಕಾರಿಗಳು – ಖಾಯಂ ವೈದ್ಯಾಧಿಕಾರಿಗಳನ್ನು ನೇಮಕಗೊಳಿಸದ ಸರ್ಕಾರ, ಸಮಸ್ಯೆ ಅನುಭವಿಸುತ್ತಿರುವ ಸಾರ್ವಜನಿಕರು ; ಸಮಾಲೋಚನಾ ಸಭೆ ನಡೆಸಲು ನಿರ್ಧರಿಸಿದ ಗ್ರಾಮಸ್ಥರು ; ✍️ಉಲ್ಲಾಸ್ ಕಜ್ಜೋಡಿ

“ಊರಿನಲ್ಲೊಂದು ಸರ್ಕಾರಿ ಆರೋಗ್ಯ ಕೇಂದ್ರವಿರಬೇಕು, ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವರಕ್ಷಣೆಗೆ ಅದು  ಸಹಕಾರಿಯಾಗಬೇಕು” ಆದರೆ ಕೊಲ್ಲಮೊಗ್ರದಲ್ಲಿ ಕಲ್ಮಕಾರು, ಹರಿಹರ ಪಳ್ಳತ್ತಡ್ಕ, ಬಾಳುಗೋಡು ಸೇರಿದಂತೆ ನಾಲ್ಕು ಗ್ರಾಮಗಳಿಗೆ ಸಹಕಾರಿಯಾಗುವಂತೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಅಲ್ಲಿ ಖಾಯಂ ಅಥವಾ ಪರ್ಮನೆಂಟ್ ವೈದ್ಯಾಧಿಕಾರಿಗಳಿಲ್ಲದೇ ಸಾರ್ವಜನಿಕರು ಹಾಗೂ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ...
Ad Widget

ಕವನ : ಹೊಸ ವರುಷದ ಹೊಸ್ತಿಲಲ್ಲಿ…✍️ಉಲ್ಲಾಸ್ ಕಜ್ಜೋಡಿ

ಈ ವರುಷದ ಕೊನೆಯಲ್ಲಿ, ಹೊಸ ವರುಷದ ಹೊಸ್ತಿಲಲ್ಲಿ ನಿಂತಿರುವೆವು ನಾವಿಂದು ಸಂತೋಷದಿಂದ, ಒಂದಿಷ್ಟು ಸಂತಾಪದಿಂದ...ಸಂತಾಪವಿದ್ದರೂ ಸಂತೋಷದಿಂದಲೇ ಈ ವರುಷಕೆ ಬೀಳ್ಕೊಟ್ಟು ಹೊಸ ವರುಷಕೆ ಮುಂದಡಿಯಿಟ್ಟು ಸಾಗಬೇಕಿದೆ ನಾವಿಂದು, ಕಾಲದ ನಿಯಮದಂತೆ ಮುನ್ನಡೆಯಬೇಕಿದೆ ನಾವಿಂದು, ಹೊಸ ಭರವಸೆಗಳ ಜೊತೆಗೆ ಹಳೆಯ ನೆನಪುಗಳ ಹೊತ್ತು...ಕಳೆದೋಗುವ ವರುಷದಲಿ ಕಳೆದಂತ ಕ್ಷಣಗಳನು ಕಳೆದೋಗದಂತೆ ನೆನಪಿನ ಬುತ್ತಿಯಲಿ ಜೋಪಾನವಾಗಿರಿಸಿ ಸಾಗೋಣ ನಾವಿಂದು ಹೊಸ...

“ಅಮರ ಸುದ್ದಿ ವಿಶೇಷ ವರದಿ” ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿದೆ ಅಡಿಕೆ ಫಸಲು – ಹಂತಹಂತವಾಗಿ ನಾಶವಾಗುತ್ತಿದೆ ಅಡಿಕೆ ಕೃಷಿ…!! ; ಭವಿಷ್ಯದಲ್ಲಿ ಸಂಪೂರ್ಣ ಅಡಿಕೆ ಕೃಷಿ ನಾಶವಾದರೆ ಜಿಲ್ಲೆಯ ಅರ್ಥವ್ಯವಸ್ಥೆಗೆ ಬೀಳಬಹುದೇ ಬಹುದೊಡ್ಡ ಹೊಡೆತ…!? ; ಅಪಾಯ ಸಂಭವಿಸುವ ಮೊದಲೇ ಎಲ್ಲರೂ ಒಂದಾಗಿ ಎಚ್ಚೆತ್ತುಕೊಂಡರೆ ಒಳಿತಲ್ಲವೇ…!? – ✍️ಉಲ್ಲಾಸ್ ಕಜ್ಜೋಡಿ

ನಮ್ಮ ಭಾರತ ದೇಶದಲ್ಲಿ ಸಾವಿರಾರು, ಲಕ್ಷಾಂತರ ಉದ್ಯಮ ಹಾಗೂ ಉದ್ಯೋಗಗಳಿವೆ. ಆದರೂ ದೇಶದ ಅಭಿವೃದ್ಧಿಗೆ ಉದ್ಯಮ ಹಾಗೂ ಉದ್ಯೋಗಗಳು ಎಷ್ಟು ಮುಖ್ಯವೋ ಕೃಷಿಯೂ ಕೂಡ ಅಷ್ಟೇ ಮುಖ್ಯ. ದೇಶದ ಗ್ರಾಮೀಣ ಭಾಗಗಳ ಬಹುತೇಕ ಜನರು ಇಂದಿಗೂ ಕೂಡ ಕೃಷಿಯನ್ನೇ ಅವಲಂಬಿಸಿ ಬದುಕು ನಡೆಸುತ್ತಿದ್ದಾರೆ ಹಾಗೂ ಇಂದು ದೇಶದಲ್ಲಿ ದೊಡ್ಡ ದೊಡ್ಡ ಉದ್ಯಮಗಳನ್ನು ನಡೆಸುತ್ತಿರುವವರೂ ಹಾಗೂ ಉದ್ಯೋಗಗಳನ್ನು...

ಲೇಖನ : ಬದುಕಿನ ಎಲ್ಲಾ ಕಷ್ಟಗಳಿಗೂ ಆತ್ಮಹತ್ಯೆಯೊಂದೇ ಪರಿಹಾರವೇ…!? – ಬದುಕಿನಲ್ಲಿ ಬರುವ ಕಷ್ಟಗಳಿಗೆ ಹೆದರಿ ಬದುಕನ್ನೇ ಅಂತ್ಯಗೊಳಿಸಿಕೊಳ್ಳುವುದು ಅದೆಷ್ಟು ಸರಿ…?? ; ✍️ಉಲ್ಲಾಸ್ ಕಜ್ಜೋಡಿ

ಕಳೆದ ಕೆಲವು ವರ್ಷಗಳಿಂದ ಕೆಲವರಿಗೆ ಈ ಆತ್ಮಹತ್ಯೆ ಎನ್ನುವುದು ತೀರಾ ಸರಳ-ಸಾಮಾನ್ಯ ವಿಷಯ ಎನಿಸಿಬಿಟ್ಟಂತಿದೆ ಎಂದೆನಿಸುತ್ತದೆ. ಏಕೆಂದರೆ ಈಗೀಗ ನಮಗೆ ಪ್ರತಿನಿತ್ಯ ಟಿ.ವಿ ಮಾಧ್ಯಮಗಳಲ್ಲಿ, ವಾರ್ತಾ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈ ಆತ್ಮಹತ್ಯೆಯ ಸುದ್ದಿಗಳು ಕಾಣಿಸದೇ ಇರುವುದಿಲ್ಲ. ಇದನ್ನೆಲ್ಲಾ ಗಮನಿಸಿದಾಗ ಈಗಿನ ಕಾಲದಲ್ಲಿ ಕೆಲವರ ಮನಸ್ಥಿತಿಯೇ ಹಾಗಿದೆ ಎಂದೆನಿಸುತ್ತದೆ. “ಬದುಕಿನಲ್ಲಿ ಏನಾದರೂ ಕಷ್ಟಗಳು ಬಂದಾಗ ಆ...

ಎಐ ಫೋಟೋ ಎಡಿಟಿಂಗ್‌ ಎಂಬ ಮಾರಕ ಕಾಯಿಲೆಗೆ ಬಲಿಯಾಗದಿರಿ! ; ✍️ಧನ್ಯಾ ಬಾಳೆಕಜೆ

ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಎಐ ಮುಖಾಂತರ ಎಡಿಟ್‌ ಮಾಡಿರುವುದು ಎನ್ನಲಾದ ಫೋಟೋಗಳು ಹರಿದಾಡುತ್ತಿದ್ದವು. ಬೆಳಗ್ಗೆ ಎದ್ದ ಕೂಡಲೇ ಫೇಸ್ಬುಕ್‌ ತೆರೆದಾಗ ಹರಿದಾಡುತ್ತಿದ್ದ ಇಂತಹ ಫೋಟೋಗಳು ನಿಜವೇ ಆಗಿರಬೇಕು ಎನ್ನುವಷ್ಟು ಸಹಜವಾಗಿದ್ದವು ಮತ್ತು ಈಗಲೂ ಅಂತಹ ಫೋಟೋಗಳು ನಿಜವೇ ಇರಬಹುದಲ್ಲವೇ ಎಂಬಷ್ಟು ಗೊಂದಲಗಳು ಮನಸ್ಸಿನೊಳಗೆ ಕೊರೆಯುವಷ್ಟು ಸಹಜವಾದ ಎಡಿಟ್‌ ಮಾಡಲಾದ ಫೋಟೋಗಳವು. ಆ...

ಕವನ : ಮಿಡಲ್ ಕ್ಲಾಸ್ ಜೀವನ ಇದು ಹಿಂಗೇನಾ…!? ; ✍️ಉಲ್ಲಾಸ್ ಕಜ್ಜೋಡಿ

ಈ ಮಿಡಲ್ ಕ್ಲಾಸ್ ಜೀವನ ಇದು ಹಿಂಗೇನಾ..!? ಇಲ್ಲಿ ಕಷ್ಟ ಮಾತ್ರ ಯಾವತ್ತಿಗೂ ಕಳೆಯೋದಿಲ್ಲ-ಸುಖವು ಮಾತ್ರ ಇಲ್ಲಿ ಎಂದೂ ಸಿಗೋದಿಲ್ಲ, ನೋವು ಅನ್ನೋದ್ಯಾವತ್ತಿಗೂ ನಿಲ್ಲೋದಿಲ್ಲ-ನಲಿವು ಅನ್ನೋದಂತೂ ಇಲ್ಲಿ ಉಳಿಯೋದಿಲ್ಲ, ಇದು ಯಾಕಿಂಗೆ ಅಂತ ಅರ್ಥ ಆಗೋದೇ ಇಲ್ಲ...ಒಳ್ಳೆದನ್ನೋದು ಇಲ್ಲಿ ಎಂದೂ ನಡೆಯೋದಿಲ್ಲ-ಕೆಟ್ಟದನ್ನೋದು ಮಾತ್ರ ಬೆನ್ನು ಬಿಡೋದಿಲ್ಲ, ಕಣ್ಣೀರಂತೂ ನಮಗೆ ಇಲ್ಲಿ ಎಂದೂ ತಪ್ಪಿದ್ದಲ್ಲ...ತಿಂಗಳ ಸಂಬಳಾನೂ ಕೈಯಲ್ಲುಳಿಯೋದಿಲ್ಲ-ಸಾಲ...

ಸಂವಿಧಾನ ದಿನ – ನವೆಂಬರ್ 26 : ಡಾ| ಮುರಲೀ ಮೋಹನ್ ಚೂಂತಾರು

ಪ್ರತಿ ವರ್ಷ ನವೆಂಬರ್ 26 ರಂದು ದೇಶಾದ್ಯಂತ ಸಂವಿಧಾನ ದಿವಸ ಅಥವಾ ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸಲಾಗುತ್ತದೆ. 1949ನೇ ನವೆಂಬರ್ 26 ರಂದು ಭಾರತ ಸರಕಾರದ ಸಂವಿಧಾನ ಸಮಿತಿ ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ಅನುಮೋದಿಸಿತ್ತು. ಇದರ ಸವಿನೆನಪಿಗಾಗಿ ಈ ದಿನವನ್ನು ಸಂವಿಧಾನ ದಿವಸ ಎಂದು ಆಚರಿಸಲಾಗುತ್ತದೆ. ಆದರೆ ನಮ್ಮ ಸಂವಿಧಾನ ಜನವರಿ 26,...

ರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ ನವಂಬರ್ 17 –  📝ಡಾ| ಮುರಲೀ ಮೋಹನ್ ಚೂಂತಾರು

ಪ್ರತಿ ವರ್ಷ ನವೆಂಬರ್ 17 ರಂದು ನಮ್ಮ ಭಾರತ ದೇಶದಲ್ಲಿ ಅಪಸ್ಮಾರ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಅಪಸ್ಮಾರ ದಿನ ಎಂದು ಆಚರಿಸಿ ರೋಗದ ಬಗ್ಗೆ ಇರುವ  ಮೂಢನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕುವ  ಕಾರ್ಯವನ್ನು ‘ರಾಷ್ಟ್ರೀಯ ಅಪಸ್ಮಾರ ಸಂಸ್ಥೆ’ ನಡೆಸುತ್ತಿದೆ. ನವೆಂಬರ್ ತಿಂಗಳನ್ನು ಅಪಸ್ಮಾರ ಜಾಗೃತಿ ತಿಂಗಳು ಎಂದೂ ಆಚರಿಸಲಾಗುತ್ತದೆ. ಆದರೆ...

ಕವನ : ಎಲುಬಿಲ್ಲದ ನಾಲಿಗೆ – ✍️ಉಲ್ಲಾಸ್ ಕಜ್ಜೋಡಿ

ಮಾತಿನಿಂದಲೇ ಗೆಲ್ಲಬಹುದು ಮನವ, ಆ ಮಾತಿನಿಂದಲೇ ಕೊಲ್ಲಬಹುದು ಮನವ...ಮಾತಿನಿಂದಲೇ ತರಿಸಬಹುದು ನಗುವ, ಆ ಮಾತಿನಿಂದಲೇ ನೀಡಬಹುದು ನೋವ...ಮಾತಿನಿಂದಲೇ ಉಳಿಸಬಹುದು ಸಂಬಂಧವ, ಆ ಮಾತಿನಿಂದಲೇ ಅಳಿಸಬಹುದು ಅನುಬಂಧವ...ಮಾತಿನಿಂದಲೇ ಕಲಿಸಬಹುದು ಒಳ್ಳೆಯ ಗುಣವ, ಆ ಮಾತಿನಿಂದಲೇ ತುಂಬಬಹುದು ಇತರರ ಮನದಲ್ಲಿ ವಿಷವ...ಎಲುಬಿಲ್ಲದ ನಾಲಿಗೆಯಿದು ನಮ್ಮಿಚ್ಛೆಯಂತೆ ಆಡುವುದು, ಒಳಿತು-ಕೆಡುಕು ನಮ್ಮಿಚ್ಛೆಯಲ್ಲೇ ಇರುವುದು, ನಾವಾಡಿಸಿದಂತೆ ನಮ್ಮ ನಾಲಿಗೆಯು ಆಡುವುದು, ಅಳಿವು-ಉಳಿವು ಎಲ್ಲವೂ...
Loading posts...

All posts loaded

No more posts

error: Content is protected !!