ಬಳ್ಪ : ವಿದ್ಯುತ್ ಶಾಕ್ ಲೈನ್ ಮ್ಯಾನ್ ಗಂಭೀರ

ಮೆಸ್ಕಾಂ ನ ಪಂಜ ಶಾಖೆಯ ಲೈನ್ ಮ್ಯಾನ್ ಗೆ ಬಳ್ಪದಲ್ಲಿ ವಿದ್ಯುತ್ ಶಾಕ್ ಹೊಡೆದು ಗಂಭೀರ ಗಾಯಗೊಂಡ ಘಟನೆ ಇದೀಗ ವರದಿಯಾಗಿದ್ದು, ಗಾಯಗೊಂಡು ಲೈನ್ ಮ್ಯಾನ್ ನನ್ನು ರಘು ಎಂದು ಗುರುತಿಸಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಸುಳ್ಯ ಪಯಸ್ವಿನಿ ಜೆಸಿಐ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಜೆಸಿ ಗುರುಪ್ರಸಾದ್ ನಾಯಕ್, ಕಾರ್ಯದರ್ಶಿಯಾಗಿ ಜೆಸಿ ಪ್ರಕಾಶ್ಚಂದ್ರ

ಸುಳ್ಯ ಪಯಸ್ವಿನಿ ಜೆಸಿಐ 2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಜ.3 ರಂದು ನಡೆಸಲಾಯಿತು. ಘಟಕದ ನೂತನ ಅಧ್ಯಕ್ಷರಾಗಿ ಜೆಸಿ ಹೆಚ್ ಫ್ ಗುರುಪ್ರಸಾದ್ ನಾಯಕ್ ಹಾಗೂ ಪ್ರದಾನ ಕಾರ್ಯದರ್ಶಿಯಾಗಿ ಜೆಸಿ ಪ್ರಕಾಶ್ಚಂದ್ರ , ಕೋಶಾಧಿಕಾರಿಯಾಗಿ ಜೆಸಿ ಶೋಭ ಅಶೋಕ್ ಚೂಂತಾರ್ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಿಕಟಪೂರ್ವಾದ್ಯಕ್ಷರಾಗಿ ಜೆಸಿ ನವೀನ್ ಕುಮಾರ್ ಅಜ್ಜಾವರ ಉಪಾಧ್ಯಕ್ಷರಾಗಿ(...
Ad Widget

ಮಡಪ್ಪಾಡಿ : ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ವಿತರಣೆ

ಶ್ರೀರಾಮ ಭಜನಾ ಮಂಡಳಿ ಮಡಪ್ಪಾಡಿ ಹಾಗೂ ಯುವಕ ಮಂಡಲ ಮಡಪ್ಪಾಡಿ ವತಿಯಿಂದ ಪುಣ್ಯಭೂಮಿ ಅಯೋಧ್ಯೆಯಿಂದ ಬಂದ ಪವಿತ್ರ ಮಂತ್ರಾಕ್ಷತೆಯ ವಿತರಿಸುವ ಕಾರ್ಯಕ್ರಮ ಜ.1 ರಿಂದ ಪ್ರಾರಂಭಗೊಂಡಿತು. ಗ್ರಾಮದ ಪ್ರತಿ ಮನೆಗೆ ವಿತರಿಸುವ ಈ ಕಾರ್ಯದಲ್ಲಿ ಭಜನಾ ಮಂಡಳಿ ಹಾಗೂ ಯುವಕ ಮಂಡಲದ ಸದಸ್ಯರು ಹಾಗೂ ಎಲ್ಲಾ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪಿಂಡಿಮನೆ ; ಚಿರತೆ ಪ್ರತ್ಯಕ್ಷ

ಅರಂತೋಡು ಮರ್ಕಂಜ ರಸ್ತೆಯ ಪಿಂಡಿಮನೆ ಬಳಿ ವಾಹನ ಸವಾರರಿಗೆ ಜ.4 ರಂದು ರಾತ್ರಿ 9 ಗಂಟೆ ವೇಳೆಗೆ ರಸ್ತೆ ಬದಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ವಾಹನ‌ ಸವಾರರು ತಿಳಿಸಿದ್ದಾರೆ. ವಾಹನ ಸವಾರರು ಜಾಗರೂಕತೆಯಿಂದ ಸಂಚರಿಸಬೇಕಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಸವಾದ್ ಸುಳ್ಯ ನೇಮಕ

ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಸುಳ್ಯ ಮೂಲದ NSUI ರಾಜ್ಯ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಅವರನ್ನು ಸರಕಾರ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದ್ದಾರೆ. ಇವರು ಸುಳ್ಯ ನಗರದ ಗಾಂಧಿನಗರ ನಿವಾಸಿಯಾಗಿದ್ದಾರೆ.

ಪೆರಾಜೆ ಪಾಲಡ್ಕ ಬಳಿ ಕಾರು ಬೈಕ್ ನಡುವೆ ಡಿಕ್ಕಿ !

ಮಾಣಿ ಮೈಸೂರು ರಸ್ತೆಯ ಪೆರಾಜೆ ಪಾಲಡ್ಕ ಎಂಬಲ್ಲಿ ಕಾರು ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಇದೀಗ ವದಿಯಾಗಿದೆ, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕುತ್ಯಾಡಿ ಕುಟುಂಬದ ಧರ್ಮದೈವ ಹಾಗೂ ಉಪದೈವಗಳ ನಡಾವಳಿ

ಮಂಡೆಕೋಲು ಗ್ರಾಮದ ಪೇರಾಲು ಕುತ್ಯಾಡಿ ಕುಟುಂಬದ ಕುತ್ಯಾಡಿ ಶ್ರೀ ಧರ್ಮದೈವಸ್ಥಾನದಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ನಾಗತಂಬಿಲ ಮತ್ತು ಶ್ರೀ ಧರ್ಮದೈವ ಹಾಗೂ ಉಪದೈವಗಳ ನಡಾವಳಿ ಜ.01 ರಿಂದ ಜ.03 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ಜತ್ತಪ್ಪ ಗೌಡ ಶೆಟ್ಟಿಮಜಲು, ಕುಟುಂಬದ ಹಿರಿಯರಾದ ಶಿವಪ್ಪ ಗೌಡ,...

ಸುಳ್ಯ: ರೋಟರಿ ಸಮುದಾಯ ಭವನದ ಮೇಲ್ಛಾವಣಿ ಜ.13ರಂದು ಉದ್ಘಾಟನೆ ಮತ್ತು ಕೊಡುಗೆಗಳ ಹಸ್ತಾಂತರ

ರೋಟರಿ ಕ್ಲಬ್ ಸುಳ್ಯ, ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ 2023-24 ನೇ ಸಾಲಿನ ಸೇವಾ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ರೋಟರಿ ಸಮುದಾಯ ಭವನದ ಮೇಲ್ಛಾವಣಿಯ ಉದ್ಘಾಟನೆ ಜ.13ರಂದು ನಡೆಯಲಿದೆ ಎಂದು ಯೋಜನಾ ಸಮಿತಿ ಅಧ್ಯಕ್ಷರಾದ ಸಹಕಾರ ರತ್ನ ರೊ.ಸೀತಾರಾಮ ರೈ ಸವಣೂರು ಹೇಳಿದರು.ಜ.4ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರೋಟರಿ ಸಮುದಾಯ...

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ವತಿಯಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಶಾಲೆಗಳಿಗೆ ವಿತರಣೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ವತಿಯಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗಳನ್ನು, ಸಭಾಪತಿಗಳಾದ ಸುಧಾಕರ್ ರೈ ಇವರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ ಈ ಇವರಿಗೆ ಹಸ್ತಾಂತರಿಸಿ ಸುಳ್ಯ ತಾಲೂಕಿನ ಆಯ್ದ ಶಾಲೆಗಳಿಗೆ ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಮತ್ತು ಭಾ.ರೆ.ಕ್ರಾ. ನಿರ್ದೇಶಕರಾದ ಪೃಥ್ವಿ ಕುಮಾರ್...

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ ಮತ್ತುಯುವ ರೆಡ್‌ಕ್ರಾಸ್ ಘಟಕದ ಉದ್ಘಾಟನೆ

ಜ.3ರಂದು ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ. ಬಿ ವಹಿಸಿದ್ದರು. ಉದ್ಘಾಟಕರಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸುಳ್ಯ ಇದರ ಅಧ್ಯಕ್ಷರಾದ ಪಿ.ಬಿ. ಸುಧಾಕರ ರೈ, ಮುಖ್ಯ ಅತಿಥಿಗಳಾಗಿ ಜಿಲ್ಲಾ ರೆಡ್ ಕ್ರಾಸ್ ಪ್ರತಿನಿಧಿ ಗಣೇಶ್ ಭಟ್...
Loading posts...

All posts loaded

No more posts

error: Content is protected !!