- Wednesday
- August 5th, 2026
“ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರಿಗೆ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿರುವುದು ನಾಡಿನ ಜನತೆಗೆ ಸಂತಸ ತಂದಿದೆ. ಅಲ್ಲದೆ ಮಾನ್ಯ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಡೆದುಕೊಂಡು ಬಂದಿರುವ ಕ್ರಮ ಇಡೀ ದೇಶಕ್ಕೆ ಮಾದರಿ ಮತ್ತು ಕಾಂಗ್ರೆಸ್ ಪಕ್ಷದ ಗೌರವ ವನ್ನು ಅತ್ಯಂತ ಎತ್ತರಕ್ಕೆ ತಂದಿದ್ದು ದೇಶದ ರಾಜಕಾರಣಕ್ಕೆ ಮಾದರಿ ಆಗಿದೆ, ಆದುದರಿಂದ ಕಾಂಗ್ರೆಸ್ ಪಕ್ಷದ ಬೆಳವಣಿಗೆಯ...
ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬೆಳ್ಯಪ್ಪ ಗೌಡ ಮಣಿಯಾನಮನೆ ರವರಿಗೆ ಬೀಳ್ಕೊಡುಗೆ ಸಮಾರಂಭವು ಮೇ.30 ರಂದು ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬೆಳ್ಯಪ್ಪ ಗೌಡ ಮಣಿಯಾನಮನೆ ಹಾಗೂ ಶ್ರೀಮತಿ ಪುಷ್ಪಾವತಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಸಂಘದ ಅಧ್ಯಕ್ಷರಾದ ಡಾ.ಸೋಮಶೇಖರ್ ಕಟ್ಟೆಮನೆ, ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ, ನಿರ್ದೇಶಕರುಗಳಾದ ಶೇಷಪ್ಪ...
ಸುಳ್ಯ ಮಂಡಲದ ವತಿಯಿಂದ ಪ್ರಧಾನಮಂತ್ರಿಯವರ134 ನೇ ಮನ್ ಕೀ ಬಾತ್ ಮತ್ತು ಕಾರ್ಯಕರ್ತರ ಸಭೆಯು ಮೇ.31 ರಂದು ಶಾಸಕರ ನಿವಾಸ ಮುರುಳ್ಯದಲ್ಲಿ ನಡೆಯಿತು. ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಅಧ್ಯಕ್ಷರಾದ ಶ ಸತೀಶ್ ಕುಂಪಲ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಸುಳ್ಯ ಮಂಡಲ ಕಳೆದ ಅವೃತಿಯ ಮನ್ ಕೀ ಬಾತ್ ಕಾರ್ಯಕ್ರಮ 100% ವೀಕ್ಷಣೆ ಮಾಡಿ...
ಗುತ್ತಿಗಾರು ಪ್ರಾ.ಕೃ ಪ.ಸ.ಸಂಘದ ಉಪ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಾಲಕೃಷ್ಣ ದೇರಪ್ಪಜ್ಜನ ಮನೆ ಮೇ.30 ರಂದು ಸೇವಾ ನಿವೃತ್ತರಾಗಿದ್ದು, ಸಹಕಾರಿ ಸಂಘ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಬಾಲಕೃಷ್ಣ ದೇರಪ್ಪಜ್ಜನ ಮನೆ ಮತ್ತು ಮಂಜುಳಾ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ಉಪಾಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಮಾಜಿ ಆಧ್ಯಕ್ಷರುಗಳಾದ ವೆಂಕಟ್...
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಎ.ಜಿ.ಎಂ(ಬ್ರಾಂಚ್ ಇನ್ಸೆಕ್ಟರ್) ಹುದ್ದೆಯಲ್ಲಿದ್ದ ಚಂದ್ರಪ್ರಕಾಶ್ ಕಂಬಳ ಮೇ.30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.1993ರಲ್ಲಿ ಡಿಸಿಸಿ ಬ್ಯಾಂಕ್ ನ ಬೆಳ್ತಂಗಡಿ ಶಾಖೆಗೆ ಸೂಪರ್ ವೈಸರ್/ಕ್ಲರ್ಕ್ ಹುದ್ದೆಗೆ ನೇಮಕಗೊಂಡ ಇವರು 1994 ರಲ್ಲಿ ಸುಳ್ಯ ಶಾಖೆಗೆ ವರ್ಗಾವಣೆಗೊಂಡರು. 1998 ರಿಂದ ಗುತ್ತಿಗಾರು ವಲಯದ ಸಹಕಾರಿ ಸಂಘಗಳ ವಲಯ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿದರು. 2002 ರಿಂದ...
ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದ ವತಿಯಿಂದ ಸುಳ್ಯದ ವಿಷ್ಣುಸರ್ಕಲ್ ಬಳಿಯಲ್ಲಿ ನವೀಕೃತಗೊಂಡ ಸಮುದಾಯ ಭವನದ ಉದ್ಘಾಟನೆ, 27ನೇ ವಾರ್ಷಿಕ ಮಹಾಸಭೆ ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮವು ಮೇ.31ರಂದು ನಡೆಯಿತು. ನವೀಕೃತ ಸಮುದಾಯ ಭವನ ಕಟ್ಟಡವನ್ನು ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್ ಅವರು ಉದ್ಘಾಟಿಸಿ ಶುಭಹಾರೈಸಿದರು.ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದ ಅಧ್ಯಕ್ಷ ಎಂ....
ಉಬರಡ್ಕ ಮಿತ್ತೂರು ಗ್ರಾಮದ ಉರುಂಡೆ ನಾರಾಯಣ ಗೌಡರು ಮೇ 30 ರಂದು ಅಲ್ಪಕಾಲ ಅಸೌಖ್ಯ ದಿಂದ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸೀತಮ್ಮ, ಪುತ್ರ ವಸಂತ, ಪುತ್ರಿಯರಾದ ದಮಯಂತಿ ಮತ್ತು ಗಿರಿಜಾ, ಸೊಸೆ ನಳಿನಿ ಹಾಗೂ ಮೊಮ್ಮಮ್ಮಕ್ಕಳನ್ನು ಅಗಲಿದ್ದಾರೆ..
ಗುತ್ತಿಗಾರು ಪ್ರಾ. ಆರೋಗ್ಯ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಆಶಾ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಗೊಳ್ಳುತ್ತಿರುವ ಸರಸ್ವತಿ ಕಾಜಿಮಡ್ಕ ಹಾಗೂ ದೇವಮ್ಮರಿಗೆ ಬೀಳ್ಕೋಡುಗೆ ಕಾರ್ಯಕ್ರಮ ಮೇ 30 ರಂದು ನಡೆಯಿತು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಅಮಿಷಾ ಬಿ.ಸೋಮಯಾಗಿ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 9591969197 ದಿನಾಂಕ:31-05-2026 ಭಾನುವಾರ *01,🐏ಮೇಷರಾಶಿ🐏*📃,ಇಂದು ನೀವು ಹಣ ಸಂಪಾದಿಸಲು ಅನೇಕ ಅವಕಾಶಗಳನ್ನು ಹಾಗು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಹಣವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಬರುವ ತೊಂದರೆಗಳಿಂದ ಸ್ವಲ್ಪ ಮುಕ್ತರಾಗುತ್ತೀರಿ ಮತ್ತು ಕೆಲಸವೂ ಚೆನ್ನಾಗಿ ನಡೆಯುತ್ತದೆ. ಆದಾಯದ ವಿವಿಧ ಮೂಲಗಳನ್ನು ಪಡೆಯುವ ಮೂಲಕ, ನಿಮ್ಮ ಕೆಲವು ಸ್ಥಗಿತಗೊಂಡ...
ಎಸ್.ಎಸ್.ಎಲ್.ಸಿ ಮರು ಮೌಲ್ಯ ಮಾಪನ ಮತ್ತು ಮರು ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆಯುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಸುಶ್ಮಿತಾ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಆ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ಗ್ರಾಮೀಣ ಭಾಗದ ಶಾಲೆಯಲ್ಲಿ ಓದಿ ಉತ್ತಮ ಸಾಧನೆ ಮಾಡಿದ್ದಾರೆ. ಆರಂಭದಲ್ಲಿ ಸುಶ್ಮಿತಾ ಒಟ್ಟು 613 ಅಂಕ ಪಡೆದಿದ್ದರು. ಸಮಾಜ...
Loading posts...
All posts loaded
No more posts
