- Sunday
- August 2nd, 2026
ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 01 ಆಗಸ್ಟ್ 2026ವಾರ : ಶನಿವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 01) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...
ಪಂಜ, ಆ.01: “ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಜೇಸಿಐ ಪಂಜ ಪಂಚಶ್ರೀ ಹಾಗೂ ಲಯನ್ಸ್ ಕ್ಲಬ್ ಪಂಜ ಸಹಯೋಗದಲ್ಲಿ “ಆಟಿ ನೆಂಪು-2026” ಕಾರ್ಯಕ್ರಮವು ಆಗಸ್ಟ್ 09ರಂದು ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ” ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ. ಸುಳ್ಯದ ಪತ್ರಿಕಾ ಭವನದಲ್ಲಿ ಆ....
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ದೇವಚಳ್ಳ ಗ್ರಾಮದ ಧರ್ಮಪಾಲ ಕರಂಗಲಡ್ಕ ಅವರು ಮರದ ಕೆತ್ತನೆಯ ಮೂಲಕ ರಚಿಸಿದ ಬಾಳೆಗೊನೆಯನ್ನು ಆ.01 ರಂದು ಕೊಡುಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ಹಾಗೂ ಸದಸ್ಯರಾದ ಬೆಳ್ಯಪ್ಪ ಗೌಡ ಖಂಡಿಗೆ ಉಪಸ್ಥಿತರಿದ್ದರು. (ವರದಿ : ಉಲ್ಲಾಸ್ ಕಜ್ಜೋಡಿ)
ಸುಬ್ರಹ್ಮಣ್ಯ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ, ಸುಬ್ರಹ್ಮಣ್ಯ ಉಪ ವಿಭಾಗ ಹಾಗೂ ಶಾಖೆಯ ಹಿರಿಯ ಮೆಕ್ಯಾನಿಕ್ ಪಾಲಾಕ್ಷರವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವು ಜು.31 ಶುಕ್ರವಾರ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ಜರಗಿತು. ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ ಸಪಲ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ವಿಭಾಗದ ಹಿರಿಯ ಲೆಕ್ಕಾಧಿಕಾರಿ...
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197ದಿನಾಂಕ:01-08-2026 ಶನಿವಾರ*01,🐏ಮೇಷರಾಶಿ🐏*📖,ಇಂದು ನೀವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವಿರಿ, ಅನವಶ್ಯಕವಾಗಿ ಮಾತನಾಡುವುದರಿಂದ ಸಮಸ್ಯೆಗೆ ಸಿಲುಕುವಿರಿ, ಮಾತನಾಡುವಾಗ ನಕಾರಾತ್ಮಕ ಪದಗಳನ್ನು ಬಳಸಬೇಡಿ, ನಿಮ್ಮ ಮಕ್ಕಳ ಕಡೆ ಸ್ವಲ್ಪ ಕಾಳಜಿ ವಹಿಸಿ, ಕುಟುಂಬದ ಜೊತೆ ಸಮಯವನ್ನು ಕಳೆಯುವುದು ಉತ್ತಮ, ಗಮನಿಸಿ:- ಇಂದು ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮವಾಗಿದೆ,ಪರಿಹಾರ:-ಹನುಮಾನ್ ಚಾಲೀಸ ಪಠಿಸಿ,*02,🐂ವೃಷಭರಾಶಿ🐂*📖,ಈ...
ಬೆಳ್ಳಾರೆಯ ದಾರುಲ್ ಹಿಖ್ಮಾ ವಿದ್ಯಾಸಂಸ್ಥೆಯಲ್ಲಿ ಎಸ್ಎಸ್ಎಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವವು ಜು 26 ರಂದು ಜರುಗಿತು.ಅಂದು ಬೆಳಿಗ್ಗೆ 8 ಘಂಟೆಗೆ ಸಯ್ಯಿದ್ ಮುಸ್ತಫಾ ಮಿಸ್ಬಾಹಿ ತಂಙಲ್ ಮುಂದಾಳತ್ವದಲ್ಲಿ ಬೆಳ್ಳಾರೆ ಮಖಾಂ ಝಿಯಾರತ್ ನಡೆಯಿತು.8-30 ಕ್ಕೆ ಧ್ವಜಾರೋಹಣ ನೆರವೇರಿತು.8-45ಕ್ಕೆ ನೋಂದಣಿ ಆರಂಭವಾಯಿತು.ಬೆಳಿಗ್ಗೆ ಘಂಟೆ 9 ಕ್ಕೆ ಸಾಹಿತ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು. ಎಸ್ಎಸ್ಎಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ...
ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಕಾಶ್.ಕೆ.ಎಸ್ ಕಟ್ಟೆಮನೆ ಅವರು ಜುಲೈ 30ರಂದು ನಿವೃತ್ತಿ ಹೊಂದಿದರು.ಬಾಳುಗೋಡು ಗ್ರಾಮದ ಪ್ರತಿಷ್ಠಿತ ಕೂಜುಗೋಡು-ಕಟ್ಟೆಮನೆ ದಿ. ಶೂರಪ್ಪ ಗೌಡ ಮತ್ತು ದಿ. ತಾರಾ ದಂಪತಿಯ ದ್ವಿತೀಯ ಪುತ್ರರಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಳುಗೋಡು ಹಾಗೂ ಹರಿಹರ ಪಳ್ಳತ್ತಡ್ಕ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸುಳ್ಯ...
“ನಿಸ್ವಾರ್ಥ ಪ್ರೀತಿ” ಎನ್ನುವುದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಇರುತ್ತದೆ. ಒಂದರ್ಥದಲ್ಲಿ ಹೇಳುವುದಾದರೆ ಪ್ರಾಣಿಗಳಲ್ಲಿ ಮನುಷ್ಯರಿಗಿಂತ ತುಸು ಹೆಚ್ಚೇ ಸ್ವಾರ್ಥರಹಿತ ಪ್ರೀತಿ ಹಾಗೂ ನಿಷ್ಠೆ ಇರುತ್ತದೆ. ಈಗ ಉದಾಹರಣೆಯಾಗಿ ನಾಯಿಗಳನ್ನು ಅಥವಾ ಶ್ವಾನಗಳನ್ನೇ ತೆಗೆದುಕೊಂಡರೂ ಅವುಗಳು ಒಂದು ಬಾರಿ ನಮ್ಮ ಮೇಲೆ ಪ್ರೀತಿ ಹಾಗೂ ನಿಷ್ಠೆಯನ್ನು ತೋರಿದರೆ ಕೊನೆಯವರೆಗೂ ಅವು ನಮ್ಮೊಂದಿಗೆ ಇರುತ್ತವೆ. ಎಂತಹುದೇ ಕಠಿಣ...
ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಇಂದು(ಜು.31) ಭಾರೀ ಮಳೆಯಾಗುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯ ಸ್ನಾನಘಟ್ಟ ಸಂಜೆ ಸಂಪೂರ್ಣ ಮುಳುಗಡೆಯಾಗಿದೆ. ಸ್ನಾನಘಟ್ಟದ ಸಮೀಪದಲ್ಲಿರುವ ಶೌಚಾಲಯ, ಡ್ರೆಸಿಂಗ್ ರೂಮ್ ಹಾಗೂ ಇತರೆ ಸ್ಥಳಗಳು ನೀರಿನಲ್ಲಿ ಮುಳುಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ಕೆಲವು ದಿನಗಳಿಂದ ಭಕ್ತಾಧಿಗಳಿಗೆ ಸ್ನಾನಘಟ್ಟದಲ್ಲಿ ತೀರ್ಥಸ್ನಾನ ಮಾಡುವುದನ್ನು ನಿಷೇಧಿಸಿ ಪರ್ಯಾಯವಾಗಿ ಡ್ರಮ್ ಗಳನ್ನು ಇರಿಸಿ ಸ್ನಾನಕ್ಕೆ ಅವಕಾಶ...
ಐನೆಕಿದು ಪ್ರಾಥಮಿಕ ಶಾಲೆಯಲ್ಲಿ ಜು.31ರಂದು ಎಸ್.ಡಿ.ಎಂ.ಸಿ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ “ನಾನು ಯಾರಿಗೂ ಏನನ್ನೂ ಭೋದಿಸಲಾರೆ, ನಾನು ಅವರನ್ನು ಯೋಚಿಸುವಂತೆ ಮಾಡಬಲ್ಲೆ” ಎಂಬ ವಿಷಯದ ಬಗ್ಗೆ ಸಾಮಾಜಿಕ ಅರಿವು ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಅಶೋಕ್ ಮೂಲೆಮಜಲು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ...
Loading posts...
All posts loaded
No more posts
