ಅರಂತೋಡು ಸಹಕಾರಿ ಸಂಘದಿಂದ ಧನ ಸಹಾಯ

ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾದ ಕೇಪಣ್ಣಗೌಡ ಕಲ್ಲುಗದ್ದೆ ತೀವ್ರ ಅನಾರೋಗ್ಯಕ್ಕೊಳಗಾಗಿದ್ದು, ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಇವರಿಗೆ ಸಹಕಾರಿ ಸಂಘದ ಸಾರ್ವ ಜನಿಕೋಪಕಾರ ನಿಧಿಯಿಂದ ರೂಪಾಯಿ 5000 ಸಹಾಯಧನವನ್ನು ಚಿಕಿತ್ಸಾ ವೆಚ್ಚವಾಗಿ ನೀಡಲಾಯಿತು.ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ಸಹಾಯಧನದ ಚೆಕ್ಕನ್ನು ವಿತರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ದಯಾನಂದ ಕುರುಂಜಿ ನಿರ್ದೇಶಕರಾದ ಕುಸುಮಾಧರ...

ಸಜ್ಜನ ಸಿರಿ, ಮಲೆನಾಡ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ

ಮಲೆನಾಡ ಚಾರಿಚೇಬಲ್ ಟ್ರಸ್ಟ್ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಆಶ್ರಯದಲ್ಲಿ ಸಜ್ಜನ ಸಿರಿ ಮಲೆನಾಡ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭವು ಸೆ.೧೮ರಂದು ಸುಳ್ಯದ ಸಂಧ್ಯಾರಶ್ಮಿ ಸಭಾಭವನದಲ್ಲಿ ನಡೆಯಿತು. ಮಲೆನಾಡ ಚಾರಿಟೇಬಲ್ ಟ್ರಸ್ಟ್ ಇದರ ಗೌರವಾಧ್ಯಕ್ಷ ಕೆ.ಎಂ ಮುಸ್ತಾಫ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆ.ವಿ.ಜಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಎನ್.ಎ ಜ್ಞಾನೇಶ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು....
Ad Widget

ಅಡ್ಕಾರು ಅಪಘಾತ ತಿರುವಿನಲ್ಲಿ ಬ್ಯಾರಿಕೇಡ್ ಅಳವಡಿಕೆ

ಮಾಣಿ-ಮೈಸೂರು ಹೆದ್ದಾರಿ ಸುಳ್ಯ ಅಡ್ಕಾರು ಪರಿಸರದ ತಿರುವಿನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ನಿರಂತರವಾಗಿ ಅಪಘಾತಗಳು ಸಂಭವಿಸಿ ಹಲವು ಜೀವಹಾನಿ ಉಂಟಾಗಿದ್ದವು. ಆ ಸಂದರ್ಭದಲ್ಲಿ ಸುಳ್ಯ ಪೊಲೀಸ್ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಎರಡು ಕಡೆಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ವಾಹನಗಳು ನಿಧಾನವಾಗಿ ಚಲಾಯಿಸಲು ಕ್ರಮವನ್ನು ವಹಿಸಲಾಗಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ...

ಪ್ರೇಮನಾಥ ರೈಗಳ ಬದುಕಿನ ರೀತಿಯೇ ನಮಗೆ ಆದರ್ಶ: ಪದ್ಮನಾಭ ನೆಟ್ಟಾರು

“ಸಮಾಜದ ಏಳಿಗೆಗೆ ತನ್ನನ್ನು ತಾನೇ ಸಮರ್ಪಿಸಿಕೊಂಡು , ತನ್ನ ವ್ಯವಹಾರದ ಒತ್ತಡದ ನಡುವೆಯೂ ಸಮಾಜಕ್ಕಾಗಿ ಮಿಡಿತ-ತುಡಿತಗಳನ್ನು ಕೇಂದ್ರೀಕರಿಸಿದ ವ್ಯಕ್ತಿತ್ವ ಶ್ರೀ ಪ್ರೇಮನಾಥ ರೈಯವರದ್ದು. ನಿಷ್ಕಲ್ಮಶ ಮನಸ್ಸಿನ, ನಿಷ್ಕಂಳಕ ನಡತೆಯ, ಓರ್ವ ಪ್ರಾಮಾಣಿಕ, ಸಜ್ಜನ ವ್ಯಕ್ತಿಯ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಪಾದರಸವನ್ನು ಮೀರಿ ನಿಂತ ಅವರ ಕ್ರಿಯಾಶೀಲತೆಗೆ ಮನಸೋಲದವರು ವಿರಳ”. ಎಂದು ಬೆಳಂದೂರು ಕಾಲೇಜಿನ ಪ್ರಾಂಶುಪಾಲರಾದ...

ಚೆಂಡೆ ಬಾರಿಸುವುದನ್ನು ಕಲಿಯಲು ನಿಮಗೆ ಆಸಕ್ತಿಯೇ…..! ಇಲ್ಲಿದೇ ಸುವರ್ಣಾವಕಾಶ

ಜಾತ್ರೆ, ಸಭೆ,ಸಮಾರಂಭ,ಮೆರವಣಿಗೆ ಗಳಲ್ಲಿ ಆಕರ್ಷಕವಾದ ಚಂಡೆವಾದನ ಕೇಳಿರಬಹುದು. ಚಂಡೆ ಪೆಟ್ಟಿಗೆ ತಾವು ಒಂದು ಹೆಜ್ಜೆ ಹಾಕುವ ಅನ್ನಿಸಿರಬಹುದು, ಕೆಲವರಿಗೆ ಚಂಡೆವಾದನ ಕಲಿಯಬೇಕು ಎನ್ನಿಸಿರಬಹುದು. ಮನೆಯಲ್ಲಿ ಹೋಗಿ ಅದೇ ತರ ಬಾರಿಸಲು ಪ್ರಯತ್ನಿಸಿರಬಹುದು. ಈ ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ರಾಜೇಶ್ ಪಣಿಕ್ಕರ್ ಅವರು ನಿಮಗೆ ಸುವರ್ಣಾವಕಾಶ ಒದಗಿಸಿದ್ದಾರೆ. ಅವರು ಮಾವಿನಕಟ್ಟೆ ಮತ್ತು ವಿವಿಧೆಡೆ ಶ್ರೀ...

ನಮ್ಮ ಪ್ರಧಾನಿ ನಮ್ಮ ಹೆಮ್ಮೆ 70 ರ ಸಂಭ್ರಮ

ಹತ್ತು ವರ್ಷದ ಹಿಂದೆ ಕೆಲವರ ಹತ್ತಿರ ನಮ್ಮ ದೇಶದ ಪ್ರಧಾನಿ ಯಾರು ಅಂತ ಪ್ರಶ್ನೆ ಕೇಳಿದರೆ ಸರಿಯಾದ ಉತ್ತರಕ್ಕೆ ಹತ್ತು ನಿಮಿಷ ಕಾಯುವ ಕಷ್ಟದ ಕಾಲ. ಕೆಲವರಂತು ದಿಗ್ವಿಜಯ್ ಸಿಂಗ್ ಆಗಿರಬಹುದು ಅಂದವರಿದ್ದಾರೆ ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಇಟ್ಟು ಪ್ರಣಬ್ ಮುಖರ್ಜಿ ಅಂದವರು ಇದ್ದಾರೆ. ಇವತ್ತು ನನ್ನ 8 ವರ್ಷದ ಮಾವನ ಮಗಳು...

ಪ್ರಧಾನಿ ಮೋದಿ ಜನ್ಮದಿನ : ಬಿಜೆಪಿಯಿಂದ ಸರಕಾರಿ ಆಸ್ಪತ್ರೆಯಲ್ಲಿ ಹಣ್ಣು- ಹಂಪಲು ವಿತರಣೆ

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70 ನೇ ಹುಟ್ಟು ಹಬ್ಬದ ಪ್ರಯುಕ್ತ ಸುಳ್ಯ ಬಿಜೆಪಿ ಮಂಡಲ ವತಿಯಿಂದ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ದಾಖಲಾದವರಿಗೆ ಹಣ್ಣು ಹಂಪಲು ವಿತರಣೆ ನಡೆಯಿತು.ಶಾಸಕ ಎಸ್.ಅಂಗಾರ ಹಣ್ಣು ಹಂಪಲು ವಿತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿಜೆಪಿ ಪ್ರ.ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ,...

ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

ಸುಳ್ಯ ನಗರ ಪಂಚಾಯತ್ ಕಚೇರಿ ಬಳಿ ಜೂನಿಯರ್ ಕಾಲೇಜ್ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಅಪಾಯದ ಸ್ಥಿತಿಯಲ್ಲಿ ನಿಂತಿದ್ದು ಮುಂದೊಂದು ದಿನ ಜೀವಹಾನಿಗೆ ಕಾರಣವಾಗಬಹುದು. ಜನಪ್ರತಿನಿಧಿಗಳು ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯ ಸಾರ್ವಜನಿಕರು ದೂರಿ ಕೊಳ್ಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭವಾಗಲಿದ್ದು ಈ ರಸ್ತೆಯಲ್ಲಿ ವಿದ್ಯಾರ್ಥಿಗಳ...

ಬಾಳಿಲ : ನಿಲ್ಲಿಸಿದ್ದ ಬೈಕ್ ಗೆ ಆಕಸ್ಮಿಕ ಬೆಂಕಿ

ನಿಲ್ಲಿಸಿದ್ದ ಬೈಕ್‌ನಲ್ಲಿ ವಯರಿಂಗ್ ಶಾರ್ಟ್ ಸರ್ಕ್ಯೂಟ್‌ಗೊಂಡು ಬೈಕ್ ಸಂಪೂರ್ಣ ಹೊತ್ತಿ ಉರಿದ ಘಟನೆ ಸೆ.16 ಮಧ್ಯಾಹ್ನ ಬಾಳಿಲದಿಂದ ವರದಿಯಾಗಿದೆ . ಬಾಳಿಲ ಭಾರತ ಕಾಂಪ್ಲೆಕ್ಸ್ ಸಮೀಪ ಸೆಡ್‌ನಲ್ಲಿ ರಾಕೇಶ್ ಎಂಬವರು ತಮ್ಮ ಬಜಾಜ್ ಪಲ್ಸರ್ ಬೈಕ್‌ನ್ನು ನಿಲ್ಲಿಸಿದ್ದರು . ಬೈಕ್ ಹೊತ್ತಿ ಉರಿಯುತ್ತಿರುವುದನ್ನು ಕಂಡು ಸ್ಥಳಿಯರು ನೀರು ಹಾಯಿಸಿ ನಂದಿಸಲು ಸಹಕರಿಸಿದರು . ಈ ವೇಳೆ...

ಗಾಂಧಿನಗರ ಬೋರುಗುಡ್ಡೆ ವಾರ್ಡಿನಲ್ಲಿ ಚರಂಡಿ ಕಾಮಗಾರಿಗೆ ಚಾಲನೆ

ಸುಳ್ಯ ನಗರ ಪಂಚಾಯತ್ ಅನುದಾನದಲ್ಲಿ ಸುಮಾರು ಐದು ಲಕ್ಷ ರೂಪಾಯಿಗಳ ವೆಚ್ಚದ ಚರಂಡಿ ಕಾಮಗಾರಿಯ ಕಾರ್ಯ ನಡೆಯುತ್ತಿದೆ. ಗಾಂಧಿನಗರ ಸಂತೋಷ್ ಚಿತ್ರಮಂದಿರದ ಬಳಿಯಿಂದ ಮುಖ್ಯರಸ್ತೆಯ ವರೆಗೆ ಈ ಕಾಮಗಾರಿಯ ಪ್ರಗತಿಯಲ್ಲಿ ನಡೆಯುತ್ತಿದೆ. ಸ್ಥಳೀಯ ವಾರ್ಡ್ ಸದಸ್ಯ ಕೆ ಎಸ್ ಉಮ್ಮರ್ ಭೇಟಿ ನೀಡಿ ಕಾಮಗಾರಿಯ ವೀಕ್ಷಣೆ ನಡೆಸಿದರು.
Loading posts...

All posts loaded

No more posts

error: Content is protected !!