ಧ.ಗ್ರಾ.ಯೋಜನೆಯ ವಿಪತ್ತು ನಿರ್ವಹಣಾ ಸಮಿತಿಯ ತಾ. ಸಂಯೋಜಕರಾಗಿ ಸತೀಶ್ ಬಂಬುಳಿ ಆಯ್ಕೆ

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿನೂತನ ಕಾರ್ಯಕ್ರಮ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯ ಸುಳ್ಯ ತಾಲ್ಲೂಕು ಸಮಿತಿಯ ಸಂಯೋಜಕರಾಗಿ ಗುತ್ತಿಗಾರು ವಲಯದ ನಾಲ್ಕೂರು ಹಾಲೆಮಜಲು ಒಕ್ಕೂಟ ಅಧ್ಯಕ್ಷರಾದ ಸತೀಶ್ ಬಂಬುಳಿ ಇವರು ಆಯ್ಕೆಯಾಗಿರುತ್ತಾರೆ.

ವಿ ಹೆಚ್ ಪಿ ವತಿಯಿಂದ ಬೆಳ್ಳಾರೆ ಠಾಣೆಯಲ್ಲಿ ರಕ್ಷಾಬಂಧನ

ವಿಶ್ವ ಹಿಂದೂ ಪರಿಷತ್ ಭಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ವತಿಯಿಂದ, ಬೆಳ್ಳಾರೆ ಆರಕ್ಷಕ ಠಾಣೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ಅಧ್ಯಕ್ಷರಾದ ಪ್ರಸಾದ್ ಕೆ ಬಿ , ಕಾರ್ಯದರ್ಶಿ ಮನು ಬಾಯಂಬಾಡಿ ಮತ್ತು ಪದಾಧಿಕಾರಿಗಳು ಹಾಗೂ ಬೆಳ್ಳಾರೆ ಆರಕ್ಷಕ ಠಾಣೆಯ ಸಬ್ಇನ್ ಸ್ಪೆಕ್ಟರ್ ಆಂಜನೇಯ ರೆಡ್ಡಿ ಜಿ...
Ad Widget

“ಕರ್ನಾಟಕ ಕೇರಳ ಗಡಿ ಭಾಗದ ರಸ್ತೆಯನ್ನು ತೆರವುಗೊಳಿಸುವಂತೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ತಹಶೀಲ್ದಾರ್ ಗೆ ಮನವಿ “

ಕೊರೊನ ಮಹಾಮಾರಿ ಖಾಯಿಲೆಯಿಂದ ಹಾಗೂ ಲಾಕ್ ಡೌನ್ ಜಾರಿಯಲ್ಲಿದ್ದುದರಿಂದ ಕರ್ನಾಟಕ ಕೇರಳ ಗಡಿ ಭಾಗದ ರಸ್ತೆಗಳು ಸಂಪೂರ್ಣ ಬಂದ್ ಆಗಿರುವುದರಿಂದ ಸಾರ್ವಜನಿಕರಿಗೆ ಸಂಚರಿಸಲು ಸಮಸ್ಯೆಯಾಗುತ್ತಿದ್ದು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು, ಹಾಕಿರುವ ಮಣ್ಣನ್ನೂ , ಗೇಟ್ ತೆರೆದು ಸಾರ್ವಜನಿಕರಿಗೆ ಸಂಚರಿಸಲು ಅವಕಾಶ ಮಾಡಿಕೊಡಬೇಕೆಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತಾಲೂಕು ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಉಪ ತಹಶೀಲ್ದಾರ್...

*ಆ 9 : ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ವಾರ್ಷಿಕ ಮಹಾಸಭೆ*

ಹಲವಾರು ವರ್ಷಗಳಿಂದ ಸುಳ್ಯ ಪೈಚಾರು ಭಾಗದಲ್ಲಿ ಸಾಮಾಜಿಕ, ಕ್ರೀಡಾ  ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪರಿಸರದ ಬಡವರ ಆಶಾ ಕೇಂದ್ರವಾಗಿ ಕಾರ್ಯಚರಿಸುತ್ತಿರುವ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ರಿ. ಪೈಚಾರ್ ಇದರ ವಾರ್ಷಿಕ ಮಹಾಸಭೆಯು ಆಗಸ್ಟ್ 9ರಂದು ಸಂಜೆ 4:30 ಕ್ಕೆ ನಡೆಯಲಿದೆ. ಮಹಾಸಭೆಯ ಉದ್ಘಾಟನೆಯನ್ನು ಅಮರ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ ನೇರವೆರಿಸಲಿದ್ದಾರೆ. ಸಭೆಯ‌ ಅಧ್ಯಕ್ಷತೆಯನ್ನು...

*ಸುಳ್ಯ ಕಾರು ಚಾಲಕ ಮಾಲಕ ಸಂಘದ ಸಭೆ*

ಸುಳ್ಯ ಕಾರು ಚಾಲಕ ಮಾಲಕ ಸಂಘದ ಸಭೆಯು ಸುಳ್ಯದ ದ್ವಾರಕಾ ಹೋಟೆಲ್ ಕಟ್ಟಡದಲ್ಲಿ ಅಗಸ್ಟ್ 3ರಂದು ನಡೆಯಿತು . ಸಭೆಯ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷರಾದ ಯಂ ಬಿ ಸದಾಶಿವ ವಹಿಸಿದ್ದರು . ಸಂಘದ ಕಾನೂನು ಸಲಹೆಗಾರರಾದ ವಕೀಲರಾದ ಯಂ ವೆಂಕಪ್ಪ ಗೌಡ , ಸಮಿತಿಯ ಅಧ್ಯಕ್ಷ  ಜಯಂತ ಹರ್ಲಡ್ಕ ಜೊತೆ ಕಾರ್ಯದರ್ಶಿ ದಾಮೋದರ್ ಅಡ್ಕರ್ ಹಾಗು...

ದೇವ ಗೆಳೆಯರ ಬಳಗದಿಂದ ರಕ್ಷಾಬಂಧನ

ದೇವ ಗೆಳೆಯರ ಬಳಗದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಆ. 3ರಂದು ನಡೆಯಿತು. ರಕ್ಷಾಬಂಧನದ ಮಹತ್ವದ ಬಗ್ಗೆ ಗೆಳೆಯರ ಬಳಗದ ಅಧ್ಯಕ್ಷ ಯೋಗೀಶ್ ದೇವ, ಪೂರ್ವಧ್ಯಕ್ಷ ತೀರ್ಥೇಶ್ ಪಾರೆಪ್ಪಾಡಿ ಮಾತನಾಡಿದರು.

ಐವರ್ನಾಡು ದೇವಸ್ಥಾನದಲ್ಲಿ ರಕ್ಷಾಬಂಧನ

ವಿಶ್ವ ಹಿಂದೂ ಪರಿಷತ್- ಬಜರಂಗದಳ ಪಂಚಾಕ್ಷರಿ ಶಾಖೆ ದೇರಾಜೆ, ಐವರ್ನಾಡು ಇದರ ಕಾರ್ಯಕರ್ತರಿಂದ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೋದರತೆಯ ಬೆಸೆಯುವ, ಸಮರತೆ ಸಾರುವ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು. ಅಜಿತ್ ಗುತ್ತಿಗಾರುಮೂಲೆ ಇವರು ರಕ್ಷಾಬಂಧನದ ಮಹತ್ವದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶಾಖೆಯ ಅಧ್ಯಕ್ಷರು, ಸಂಚಾಲಕರು ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಬೂಬಕ್ಕರ್ ಉಸ್ತಾದ್ ಕನಕಮಜಲು ನಿಧನ

ಕನಕಮಜಲಿನ ಅಬೂಬಕ್ಕರ್ ಉಸ್ತಾದ್ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಸಮಸ್ತದ ಹಿರಿಯ ಗುರುಗಳಾಗಿದ್ದು ಅಪಾರ ಅನುಯಾಯಿಗಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.

ಆರ್ ಟಿ ಇ ಮೂಲಕ ದಾಖಲಾತಿ ಪಡೆದ ವಿದ್ಯಾರ್ಥಿಗಳಿಂದ ಹಣ ವಸೂಲಿಗಿಳಿದ ಶಿಕ್ಷಣಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ

ಸುಳ್ಯ ತಾಲೂಕಿನ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಯು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಬಡಕುಟುಂಬದ ಉತ್ತಮ ಶಿಕ್ಷಣಕ್ಕಾಗಿ ಜಾರಿಗೊಳಿಸಿದ ಆರ್.ಟಿ.ಇ(ಕಡ್ಡಾಯ ಶಿಕ್ಷಣ ಕಾಯ್ದೆ)ಯೋಜನೆ ಮೂಲಕ ದಾಖಲಾದ ವಿದ್ಯಾರ್ಥಿಗಳ ಪೋಷಕರಿಂದ ಪುಸ್ತಕದ ಶುಲ್ಕವು ವಸೂಲಿ ಮಾಡುತ್ತಿದೆ.ಸರಕಾರದ ಆದೇಶದಂತೆ ಯಾವುದೇ ಶುಲ್ಕವು ಪಾವತಿಸಬೇಕಾಗಿಲ್ಲ.ಆದರೆ ಪಠ್ಯಪುಸ್ತಕಕ್ಕೆ ಶುಲ್ಕ ಪಾವತಿಸದೇ ಪುಸ್ತಕವು ನೀಡುವುದಿಲ್ಲ.ಇದೀಗ 'ಆನ್ ಲೈನ್'ಮೂಲಕ ತರಗತಿ ಆರಂಭಗೊಂಡಿದೆ. ಪಠ್ಯಪುಸ್ತಕ ಖರೀದಿಸಲಾಗದ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಂ.ಎಲ್.ಸಿ ಪ್ರತಾಪ್ ಸಿಂಹ ನಾಯಕ್ ಭೇಟಿ

ಕಡಬ ತಾಲೂಕಿನ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಆ. 3 ರಂದು ಭೇಟಿ ನೀಡಿ ದೇವರ ದರ್ಶನ ಪಡೆದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್ ಅವರು ಪ್ರತಾಪ್ ಸಿಂಹರನ್ನು ಬರಮಾಡಿಕೊಂಡರು.
Loading posts...

All posts loaded

No more posts

error: Content is protected !!