ಪ್ಲಾಸ್ಮಾ ಥೆರಪಿ ಮಾಡಿ ಮಾನವೀಯತೆ ಮೆರೆದ ಯುವ ನ್ಯಾಯವಾದಿ ಧರ್ಮಪಾಲ ಕೊಯಿಂಗಾಜೆ

ನೆರೆಯ ಕೇರಳ ರಾಜ್ಯದ ಬಂದಡ್ಕದ ಮಕ್ಕಟ್ಟಿ ಹರೀಶ ಎಂ ಕೆ ಎಂಬವರು ಕೊರೊನ ಪಾಸಿಟಿವ್ ಗೆ ಒಳಗಾಗಿದ್ದು ಮಂಗಳೂರಿನ ಇಂಡಿಯಾನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಇವರಿಗೆ ಅತಿ ಅಗತ್ಯವಾಗಿ ಎ ಬಿ ಪಾಸಿಟಿವ್ ಬಂದಂತಹ ವ್ಯಕ್ತಿಯಿಂದ ರಕ್ತದ ಪ್ಲಾಸ್ಮ ತೆರಪಿ ಬೇಕಾಗಿದ್ದು , ಇತ್ತೀಚಿಗೆ ಕೊರೊನ ರೋಗಕ್ಕೆ ಒಳಗಾಗಿ ಗುಣಮುಖರಾಗಿದ್ದ ಸುಳ್ಯದ ನ್ಯಾಯವಾದಿ ಹಾಗು...

ತೊಡಿಕಾನ ದೇವರಗುಂಡಿ ಪಾವಿತ್ರ್ಯತೆ ಉಳಿಸುವ ಬಗ್ಗೆ ಶಾಸಕ ಬೋಪಯ್ಯರಿಗೆ ವಿ.ಎಚ್.ಪಿ ಮನವಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ವತಿಯಿಂದ ತೊಡಿಕಾನ ದೇವರಗುಂಡಿ ಪುಣ್ಯಕ್ಷೇತ್ರದ ಪಾವಿತ್ರ್ಯತೆ ಉಳಿಯುವ ದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕೆಂದು ವಿರಾಜಪೇಟೆ ಶಾಸಕರಾದ ಕೆ ಜಿ ಬೋಪಯ್ಯ ರಿಗೆ ಮನವಿ ನೀಡಲಾಯಿತು. ದೇವರಗುಂಡಿ ಪ್ರದೇಶದಲ್ಲಿ ಅಶ್ಲೀಲ ಚಿತ್ರೀಕರಣ ವಿಚಾರಕ್ಕೆ ಸಂಬಂಧಪಟ್ಟು, ತೊಡಿಕಾನ ದೇವಸ್ಥಾನ ಪರಿಸರದಲ್ಲಿ ಇನ್ನೂ ಮುಂದೆ ಈ ರೀತಿಯ ಪ್ರಕರಣ ಗಳು ನಡೆಯಬಾರದು ಈ...
Ad Widget

ಕೊಲ್ಲಮೊಗ್ರು ಗ್ರಾ.ಪಂ.ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮ

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಾರ್ವಜನಿಕ ಗ್ರಾಮ ಪಂಚಾಯತು ಗ್ರಂಥಾಲಯಗಳನ್ನು ಗ್ರಾಮೀಣ ಪ್ರದೇಶಗಳ ಜ್ಞಾನಕೇಂದ್ರಗಳಾಗಿ ಅಭಿವೃದ್ಧಿ ಪಡಿಸಿ, ಮಕ್ಕಳ ಕಲಿಕೆಗೆ ಆಶಾಕಿರಣವಾಗುವ ಉದ್ದೇಶದಿಂದ ಕೊಲ್ಲಮೊಗ್ರು ಗ್ರಾ.ಪಂ.ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮ ಕ್ಕೆ ದಿನಾಂಕ ನ.14 ರಂದು ಚಾಲನೆ ನೀಡಲಾಯಿತು.

ಹರಿಹರಪಲ್ಲತ್ತಡ್ಕ : ಬಿದ್ದು ಸಿಕ್ಕಿದ ಉಂಗುರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಿಶನ್ ಖಂಡಿಗೆ

ನ 13 ರಂದು ಗುತ್ತಿಗಾರಿನಿಂದ ಹರಿಹರಕ್ಕೆ ಬರುತ್ತಿರುವ ವೇಳೆ ರಾಕೇಶ್ ಮುಳ್ಳುಬಾಗಿಲು ರವರ ಚಿನ್ನದ ಉಂಗುರ ಕಳೆದು ಹೋಗಿತ್ತು. ಈ ಉಂಗುರ ಹರಿಹರಪಲ್ಲತ್ತಡ್ಕ ದ ಖಂಡಿಗೆ ಸ್ಟೋರ್ ಮಾಲಕ ಕೃಷ್ಣಪ್ಪ ರವರ ಪುತ್ರ ಕಿಶನ್ ಗೆ ಸಿಕ್ಕಿತ್ತು. ರಾಕೇಶ್ ಮುಳ್ಳುಬಾಗಿಲು ರವರ ಉಂಗುರ ಕಳೆದು ಹೋಗಿರುವ ವಿಷಯ ತಿಳಿದು ಅವರಿಗೆ ಹಿಂತಿರುಗಿಸಿ ಕಿಶನ್ ಖಂಡಿಗೆ ಪ್ರಾಮಾಣಿಕತೆ...

ಸುಳ್ಯದಲ್ಲಿ ಪ್ರಥಮವಾಗಿ ಸೌರಶಕ್ತಿ ಚಾಲಿತ ಹೊಲಿಗೆ ಯಂತ್ರಕ್ಕೆ ಎಲಿಮಲೆ ಉದಯ ಟೈಲರಿಂಗ್ ನಲ್ಲಿ ಚಾಲನೆ – ಸೆಲ್ಕೋ ಫೌಂಡೇಶನ್‌ ನೆರವು

ಸುಳ್ಯದಲ್ಲಿ ಪ್ರಥಮ ಬಾರಿಗೆ ಸೌರಶಕ್ತಿ ಚಾಲಿತ ಹೊಲಿಗೆ ಯಂತ್ರ ಅಳವಡಿಸಿದ ಸುಸಜ್ಜಿತ ಮಳಿಗೆಯ ಉದ್ಘಾಟನಾ ಸಮಾರಂಭವು ಎಲಿಮಲೆ ಉದಯ ಟೈಲರಿಂಗ್ ಮತ್ತು ಗಣೇಶ ಕ್ಲೋತ್ ಸೆಂಟರ್ ಕೇಪಳಕಜೆ ಕಾಂಪ್ಲೆಕ್ಸ್ ಎಲಿಮಲೆ ಯಲ್ಲಿ ಇಂದು ನಡೆಯಿತು. ಶಾಸಕರಾದ ಎಸ್.ಅಂಗಾರ ಉದ್ಘಾಟನೆಯನ್ನು ನೆರವೇರಿಸಿ ಸ್ವ-ಉದ್ಯೋಗದಿಂದ ದೇಶದ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದರು. ಸೆಲ್ಕೋ ಫೌಂಡೇಶನ್ ಬೆಂಗಳೂರು ಇದರ ಎ.ಜಿ.ಓ.ಜಯಪ್ರಕಾಶ್...

ಅರಂತೋಡು : ಓದುವ ಬೆಳಕು ಕಾರ್ಯಕ್ರಮಕ್ಕೆ ಚಾಲನೆ

ಗ್ರಂಥಾಲಯಗಳನ್ನು ಗ್ರಾಮೀಣ ಪ್ರದೇಶಗಳ ಜ್ಞಾನಕೇಂದ್ರಗಳಾಗಿ ಅಭಿವೃದ್ಧಿ ಪಡಿಸಿ, ಮಕ್ಕಳ ಕಲಿಕೆಗೆ ಆಶಾಕಿರಣವಾಗುವ ಉದ್ದೇಶದಿಂದ ಅರಂತೋಡು ಗ್ರಾ.ಪಂ.ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು. ತಾ.ಪಂ.ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಮಾಜಿ ಅಧ್ಯಕ್ಷ ಶಿವಾನಂದ ಕುಕ್ಕುಂಬಳ, ಮಾಜಿ ಸದಸ್ಯ ಕೇಶವ ಅಡ್ತಲೆ, ಅಂಗನವಾಡಿ ಕಾರ್ಯಕರ್ತೆ ಹೊನ್ನಮ್ಮ ಗ್ರಾ.ಪಂ‌.ಪಿಡಿಓ ಜಯಪ್ರಕಾಶ್ ಎಂ‌.ಆರ್.,...

ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಧನ್ವಂತರಿ ಪೂಜೆ ಹಾಗೂ ಹೋಮ

ರಾಷ್ಟ್ರೀಯ ಆಯರ್ವೇದ ದಿನದ ಅಂಗವಾಗಿ ಬೆಳ್ಳಾರೆಯ ನೆಟ್ಟಾರು ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಧನ್ವಂತರಿ ಪೂಜೆ ಹಾಗೂ ಹೋಮ ನ.13 ರಂದು ಆಚರಿಸಲಾಯಿತು. ಡಾ| ತಿರುಮಲೇಶ್ವರ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.

ಎಸ್ ವೈ ಎಸ್, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ನಗರ ಸಮಿತಿ ವತಿಯಿಂದ ಸ್ನೇಹ ಸಮ್ಮಿಲನ ಮತ್ತು ಮೌಲಿದ್ ಮಜ್ಲಿಸ್ ಕಾರ್ಯಕ್ರಮ

ಪುಣ್ಯ ಪ್ರವಾದಿ ಜೀವನ: ಸಮಗ್ರ, ಸಂಪೂರ್ಣ ಶೀರ್ಷಿಕೆಯಲ್ಲಿ ನಡೆಯುವ ಮಿಲಾದ್ ಅಭಿಯಾನ ಅಂಗವಾಗಿ ಎಸ್ ವೈ ಎಸ್, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ನಗರ ಸಮಿತಿಯ ವತಿಯಿಂದ ಸ್ನೇಹ ಸಮ್ಮಿಲನ ಹಾಗೂ ಮೌಲಿದ್ ಮಜ್ಲಿಸ್ ಕಾರ್ಯಕ್ರಮವು ನ. 13 ರಂದು ಸುಳ್ಯದ ಆಲೆಟ್ಟಿ ರಸ್ತೆಯಲ್ಲಿರುವ ಸುಪ್ರೀಂ ಹಾಲ್ ನಲ್ಲಿ ಜರಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್...

ಕಮಿಲ : ಭಾರಿ ಗಾಳಿ-ಮಳೆ ರಸ್ತೆಗೆ ಬಿದ್ದ ಮರ ತೆರವುಗೊಳಿಸಿದ ನಾಗರಿಕರು

ಕಮಿಲದಲ್ಲಿ ನ.13 ರಂದು ಸಂಜೆ ಸುರಿದ ಭಾರಿ ಗಾಳಿ ಮಳೆ ಗುತ್ತಿಗಾರು ಕಮಿಲ ಬಳ್ಪ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ತಕ್ಷಣವೇ ಸ್ಪಂದಿಸಿದ ಕಮಿಲದ ನಾಗರಿಕ ಹೋರಾಟ ಕ್ರಿಯಾ ಸಮಿತಿ ಸದಸ್ಯರು ಸ್ಥಳೀಯ ಹಿಟಾಚಿ ಯಂತ್ರ ಬಳಸಿ ಮರ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಈ ಸಂದರ್ಭ ನಾಗರಿಕ...

ಅಮರ ಸುಳ್ಯ ಸುದ್ದಿ ದೀಪಾವಳಿ ವಿಶೇಷಾಂಕ ಬಿಡುಗಡೆ

ಕಳೆದ ಹತ್ತು ವರ್ಷಗಳಿಂದ ಸುಳ್ಯ ತಾಲೂಕಿನ ಜನತೆಯ ಜನಪರ ಕನ್ನಡ ವಾರಪತ್ರಿಕೆ ಕಳೆದ ನಾಲ್ಕು ವರ್ಷಗಳಿಂದ ದೀಪಾವಳಿ ಸಂಚಿಕೆ ಮಾರುಕಟ್ಟೆಗೆ ನೀಡುತ್ತಿದ್ದು ಇದರ ಅಂಗವಾಗಿ ಈ ಬಾರಿಯು ಅಮರ ಸುಳ್ಯ ಸುದ್ದಿ ಬಳಗ ದೀಪಾವಳಿ ವಿಶೇಷಾಂಕ ಹೊರತರುವಲ್ಲಿ ಯಶಸ್ವಿ ಯಾಗಿದೆ. ನವೆಂಬರ್ 12ರಂದು ಅಮರ ಸುಳ್ಯ ಸುದ್ದಿ ಪತ್ರಿಕೆಯ ಕಚೇರಿಯಲ್ಲಿ ನೂತನ ದೀಪಾವಳಿ ವಿಶೇಷಾಂಕ ಬಿಡುಗಡೆಗೊಳಿಸಲಾಯಿತು....
Loading posts...

All posts loaded

No more posts

error: Content is protected !!