ಶುಭವಿವಾಹ : ಜಯಕರ – ಪ್ರಮೀಳಾ

ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ಕಡಂಬುಕಾನ ದಿ. ಕೃಷ್ಣ ನಾಯ್ಕರ ದ್ವಿತೀಯ ಪುತ್ರ ಜಯಕರ ಆರ್.ಕೆ.ರವರ ವಿವಾಹವು ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ನೆಲ್ಲಿತ್ತಡ್ಕ ದಿ. ಗಂಗಾಧರ ನಾಯ್ಕರ ಪುತ್ರಿ ಪ್ರಮೀಳಾರೊಂದಿಗೆ ಡಿ. 09 ರಂದು ಪೆರುವಾಜೆಯ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನಡೆಯಿತು. ಅತಿಥಿ ಸತ್ಕಾರ ಕಾರ್ಯಕ್ರಮವು ಕಲ್ಮಡ್ಕದ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಸಭಾಭವನದಲ್ಲಿ...

ಶುಭವಿವಾಹ : ಯಶವಂತಿ – ಲವಿನ್ ಅಮೀನ್

ಸುಳ್ಯ ತಾಲೂಕು ಕಳಂಜ ಗ್ರಾಮದ ಕಳಂಜ ಶ್ರೀ ಆನಂದ ಪೂಜಾರಿಯವರ ಪುತ್ರಿ ಯಶವಂತಿಯವರ ವಿವಾಹವು ಸುಳ್ಯ ತಾಲೂಕು ಕೆರೆಮೂಲೆ ಮನೆ ದಿ. ಸುಂದರಿ ಸುಕುಮಾರವರ ಪುತ್ರ ಲವಿನ್ ಅಮೀನ್ ರೊಂದಿಗೆ ಡಿ. 09 ರಂದು ಪೆರುವಾಜೆಯ ಜೆ.ಡಿ. ಅಡಿಟೋರಿಯಂನಲ್ಲಿ ನಡೆಯಿತು.
Ad Widget

ಶುಭವಿವಾಹ : ಜಯರಾಜ್ – ಪ್ರಿಯಾ

ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ಕಡಂಬುಕಾನ ದಿ. ಕೃಷ್ಣ ನಾಯ್ಕರ ಪುತ್ರ ಜಯರಾಜ್ ರವರ ವಿವಾಹವು ಕಡಬ ತಾಲೂಕು ಎಣ್ಮೂರು ಗ್ರಾಮದ ಅಲೆಂಗಾರ ಶ್ರೀ ಗೋಪಾಲ ನಾಯ್ಕರ ಪುತ್ರಿ ಪ್ರಿಯಾರೊಂದಿಗೆ ಡಿ. 07 ರಂದು ಅಲೆಂಗಾರ ವಧುವಿನ ಮನೆಯಲ್ಲಿ ನಡೆಯಿತು. ಅತಿಥಿ ಸತ್ಕಾರ ಕಾರ್ಯಕ್ರಮವು ಡಿ. 09 ರಂದು ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸಭಾಭವನ ಕಲ್ಮಡ್ಕದಲ್ಲಿ...

ಪಂಜ : ಮತದಾನ ಜಾಗೃತಿಗಾಗಿ ಬೀದಿ ನಾಟಕ

ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತದಾನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮತದಾನ ಅರಿವು ಮೂಡಿಸಸುವ ಸಲುವಾಗಿ ಬೀದಿನಾಟಕ ಪಂಜ ಪೇಟೆಯಲ್ಲಿ ನಡೆಯಿತು.

ಸುಬ್ರಹ್ಮಣ್ಯ : ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷ ಮಂಜುನಾಥ ರಾವ್ – ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ

Rathnakara ಸುಬ್ರಹ್ಮಣ್ಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ ರಾವ್, ಕಾರ್ಯದರ್ಶಿಯಾಗಿ ರತ್ನಾಕರ ಸುಬ್ರಹ್ಮಣ್ಯ ಅವಿರೋಧ ಆಯ್ಕೆಯಾಗಿದ್ದಾರೆ. ಸುಬ್ರಹ್ಮಣ್ಯ ದಲ್ಲಿ ಡಿ.8 ರಂದು ನಡೆದ ವಾರ್ಷಿಕ ಸಭೆಯಲ್ಲಿ ಆಯ್ಕೆ ನಡೆಯಿತು. ಕೋಶಾಧಿಕಾರಿಯಾಗಿ ಭರತ್ ನೆಕ್ರಾಜೆ, ಗೌರವಾಧ್ಯಕ್ಷರಾಗಿ ನಿಕಟಪೂರ್ವಾಧ್ಯಕ್ಷ ದಿನೇಶ್ ಹಾಲೆಮಜಲು ಉಪಾಧ್ಯಕ್ಷ ರಾಗಿ ಲೋಕೇಶ್ ಬಿ.ಎನ್, ಸಂಚಾಲಕರಾಗಿ ವಿಶ್ವನಾಥ ನಡುತೋಟ, ಜತೆಕಾರ್ಯದರ್ಶಿಯಾಗಿ ಪ್ರಕಾಶ್ ಸುಬ್ರಹ್ಮಣ್ಯ,...

ಡಿ.11 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2020 ನೇ ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವ ಸಂಬಂಧ ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯಕ್ರಮ ಡಿ.11 ರಂದು ನಡೆಯಲಿದೆ. ಈ ಪ್ರಯುಕ್ತ ಭಕ್ತಾದಿಗಳ ಸೇವೆಗಳು ಮತ್ತು ದರ್ಶನ ಅಪರಾಹ್ನ ಗಂಟೆ 02 ರ ನಂತರ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಸುಳ್ಯ : ಜೆಡಿಎಸ್ ಕಾರ್ಯಕರ್ತರ ಸಭೆ – ಗ್ರಾ.ಪಂ.ಚುನಾವಣೆಯಲ್ಲಿ ಜೆ.ಡಿ.ಎಸ್. ಸ್ಪರ್ಧೆ ನಿರ್ಧಾರ

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು ಆ ಪ್ರಯುಕ್ತ ಚರ್ಚಿಸಲು ಕಾರ್ಯಕರ್ತರ ಸಭೆ ಇಂದು ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷ ತೆಯನ್ನು ಜೆಡಿಎಸ್ ಅಧ್ಯಕ್ಷ ದಯಾಕರ ಆಳ್ವ ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಆಯ್ದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ...

ಎಲಿಮಲೆ : ಆರ್ ಪಿ ಎಸ್ ವತಿಯಿಂದ ರಬ್ಬರ್ ಟ್ಯಾಪಿಂಗ್ ತರಬೇತಿ

ಆರ್ ಪಿ ಎಸ್ ( ರಬ್ಬರ್ ಪ್ರೊಸೆಸಿಂಗ್ ಸೆಂಟರ್) ವತಿಯಿಂದ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಕ್ರಮ ಡಿ.7 ರಿಂದ ಡಿ.15 ರವರೆಗೆ 8 ದಿನಗಳ ಟ್ಯಾಪರ್ಸ್ ತರಬೇತಿ ಕಾರ್ಯಕ್ರಮ ಎಲಿಮಲೆಯ ಪಾಪಚ್ಚ ರವರ ರಬ್ಬರ್ ತೋಟದಲ್ಲಿ ಆರಂಭಗೊಂಡಿದೆ. ಕಾರ್ಯಕ್ರಮವನ್ನು ರಬ್ಬರ್ ಬೋರ್ಡ್ ನ ಪುತ್ತೂರು ಡಿವಿಶನ್ ನ ಉಪ ರಬ್ಬರ್ ಉತ್ಪಾದಕರ ಕಮಿಷನರ್ ಚಂದ್ರನ್ ಕರಾಥ...

ಸುಳ್ಯ : ನವೋದಯ ಸ್ವ ಸಹಾಯ ಸಂಘಗಳ ಪ್ರೇರಕರ ಪ್ರಗತಿ ಪರಿಶೀಲನಾ ಸಭೆ

ಸುಳ್ಯ ತಾಲೂಕು ನವೋದಯ ಸ್ವ ಸಹಾಯ ಸಂಘಗಳ ಪ್ರೇರಕರ ಪ್ರಗತಿ ಪರಿಶೀಲನಾ ಸಭೆಯು ಸುಳ್ಯದ ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ಡಿ.8 ರಂದು ನಡೆಯಿತು.ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ಬಾಲ್ಯೊಟ್ಟು ಉಪಸ್ಥಿತರಿದ್ದು ಪ್ರಗತಿ ಪರಿಶೀಲನೆ ನಡೆಸಿ ಸ್ವ ಸಹಾಯ ಸಂಘಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ...

ವ್ಯವಸ್ಥೆಗಳಲ್ಲಿ ಲೋಪವಿರುವಾಗ ಕಾಯಿದೆಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ರೈತರ ಅಭಿವೃದ್ಧಿಗಾಗಿ ತಿದ್ದುಪಡಿ ಮಾಡಲಾಗಿದೆ ವಿನಃ ತೊಂದರೆ ನೀಡಲು ಅಲ್ಲ – ಎ.ವಿ. ತೀರ್ಥರಾಮ

ಪ್ರಸ್ತುತ ದೇಶದಾದ್ಯಂತ ರೈತರ ಕೃಷಿ ಮಸೂದೆ ಜಾರಿಗೊಳಿಸಿದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಇದರ ಅಂಗವಾಗಿ ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾ ಸಂಘದ ವತಿಯಿಂದ ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ವಿ ತೀರ್ಥರಾಮ ಈ ಬಗ್ಗೆ ಮಾತನಾಡಿದರು. ಭಾರತೀಯ ಜನತಾ ಪಾರ್ಟಿಯ ರೈತಪರ ನಿಲುವಿನ ವಿರುದ್ಧ...
Loading posts...

All posts loaded

No more posts

error: Content is protected !!