Ad Widget

ಕೆವಿಜಿ ಐಪಿಎಸ್‌ ನೂತನ ಪ್ರಾಂಶುಪಾಲರಾಗಿ ಅರುಣ್ ಕುಮಾರ್

ಸುಳ್ಯದ ಪ್ರತಿಷ್ಠಿತ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ನೂತನ ಪ್ರಾಂಶುಪಾಲರಾಗಿ ಅರುಣ್ ಕುಮಾರ್ ಎಸ್ . ಅಧಿಕಾರ ವಹಿಸಿಕೊಂಡರು . ಇಂಗ್ಲಿಷ್ ಎಂ.ಎ. , ಬಿ.ಎಡ್ ಪದವೀಧರರಾಗಿರುವ ಅವರು ಕರ್ನಾಟಕ , ಕೇರಳ ಹಾಗೂ ತಮಿಳುನಾಡು ರಾಜ್ಯಗಳ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ . ಮೈಸೂರಿನ ಪ್ರತಿಷ್ಠಿತ ಕೈಸ್ಟ್ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ ....

ಡಿಕೆಶಿ ಪದಗ್ರಹಣ ಮುಂದೂಡಿಕೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ಜೂ .07 ರಂದು ನಿಗದಿಪಡಿಸಲಾಗಿತ್ತು . ಲಾಕ್‌ಡೌನ್ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಧಿಸಿರುವ ಕೆಲವು ನಿರ್ಬಂಧಗಳ ಹಿನ್ನಲೆಯಲ್ಲಿ ಮುಂದೂಡಲಾಗಿದೆ. ಲಾಕ್ ಡೌನ್ ಸಡಿಲಿಕೆ ಬಳಿಕ ದಿನ ನಿಗದಿ ಆಗಲಿದೆ ಎಂದು ಕೆಪಿಸಿಸಿ ಪ್ರಕಟಣೆ ತಿಳಿಸಿದೆ .
Ad Widget

ಗೃಹರಕ್ಷಕದಳದ ಸಿಬ್ಬಂದಿಗಳ ಸೇವೆಯನ್ನು ಮುಂದುವರಿಸುವಂತೆ ರಾಜ್ಯ ಸರಕಾರಕ್ಕೆ ಕಾಂಗ್ರೆಸ್ ಆಗ್ರಹ

ರಾಜ್ಯ ಸರ್ಕಾರವು ಆರ್ಥಿಕ ಕಾರಣವೊಡ್ಡಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕರ್ತವ್ಯ ಮಾಡಿಕೊಂಡು ಬರುತ್ತಿರುವ ಗೃಹರಕ್ಷಕದಳದ ಸಿಬ್ಬಂದಿಗಳನ್ನು ಕೆಲಸದಿಂದ ಬಿಡುವ ಆದೇಶ ಜಾರಿ ಮಾಡಿದ್ದು ಈ ದಿಢೀರ್ ಘೋಷಣೆ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಲಿದೆ. ರಾಜ್ಯದಲ್ಲಿ ಸುಮಾರು 25 ಸಾವಿರ ಗೃಹರಕ್ಷಕ ಸಿಬ್ಬಂದಿ ಗಳು ಸೇವೆ ಸಲ್ಲಿಸುತ್ತಿದ್ದು ನೆರೆ ,ಪರಿಹಾರ, ಸಾರಿಗೆ ಸುವ್ಯವಸ್ಥೆ, ಬಂದೋಬಸ್ತು, ಗಣ್ಯರ ರಕ್ಷಣೆ, ಕಾನೂನು...

ಬಿಳಿಯಾರು ಬಳಿ ಪಾದಚಾರಿಗೆ ಕಾರು ಡಿಕ್ಕಿ ಆಸ್ಪತ್ರೆ ಸಾಗಿಸುವ ಮಧ್ಯೆ ಪಾದಾಚಾರಿ ಮೃತ್ಯು

ವರ್ಷದ ಪ್ರಥಮ ಮಳೆಯ ಆರಂಭದಲ್ಲಿ ಅನಾಹುತ ಸಂಭವಿಸಿ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಅರಂತೋಡು ಬಳಿ ಬಿಳಿಯಾರುನಲ್ಲಿ ನಡೆದಿದೆ. ಮಡಿಕೇರಿ ಕಡೆಯಿಂದ ಸುಳ್ಯ ಬರುತ್ತಿದ್ದ ಕಾರು ಅರಂತೋಡಿನ ಬಿಳಿಯಾರು ಎಂಬಲ್ಲಿ ಪಾದಚಾರಿಯೊಬ್ಬರಿಗೆ ಡಿಕ್ಕಿ ಸಂಭವಿಸಿದೆ.ಅಡ್ಕಾರ್ ನ ವ್ಯಕ್ತಿಯೊಬ್ಬರ ಕಾರು ಇದಾಗಿದ್ದು ಬಿಳಿಯಾರು ಬಳಿ ಬರುತ್ತಿದ್ದಂತೆ ಪಾದಚಾರಿ ರಸ್ತೆ ದಾಟುವಾಗ, ಮಳೆಯ ಕಾರಣದಿಂದಬ್ರೇಕ್ ಸಿಗದೇ ಕಾರು ಪಾದಚಾರಿಗೆ ಗುದ್ದಿ...

ಮಡಪ್ಪಾಡಿ ಐ ಇ ಸಿ ಮತ್ತು ಸ್ವಚ್ಛತಾ ಕಾರ್ಯಕ್ರಮ

ಮಡಪ್ಪಾಡಿ ಗ್ರಾ.ಪಂ ವತಿಯಿಂದ ಯುವಕ ಮಂಡಲ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಐ ಇ ಸಿ ಮತ್ತು ಸ್ವಚ್ಛತಾ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ಗ್ರಾ. ಪಂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪಿಡಿಒ ಸಿಬ್ಬಂದಿ ವರ್ಗದವರು ಯುವಕ ಮಂಡಲ ಸದಸ್ಯರು ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಭಾಗವಹಿಸಿದರು ಶಾಲಾ ಆವರಣ,ಪೇಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು

ಅರಂತೋಡು – ಕೊರೊನ ಬಗ್ಗೆ ಎಲ್ಲಾ ತಿಳಿದ ವೈದ್ಯರೇ ತಪ್ಪು ಮಾಡಿದರೆ ?!

ನಿನ್ನೆಯ ದಿನ ಅರಂತೋಡಿನಲ್ಲಿ ನಡೆದ ಘಟನೆ ಈ ವಿಷಯಕ್ಕೆ ಪುಷ್ಟಿ ನೀಡುವಂತಿದೆ. ಬೇಲಿಯೇ ಎದ್ದು ಹೊಲ ಮೇದಂತೆಯೇ ಅಲ್ಲವೇ? ಕೊರೊನಾ ವೈರಸ್ ಎಷ್ಟೊಂದು ಭಯಾನಕ ಹಾಗೂ ಎಷ್ಟೊಂದು ಸಾಂಕ್ರಾಮಿಕ ಎಂದು ತಿಳಿದ ವೈದ್ಯರೇ ಏನೂ ತಿಳಿಯದ ಒಬ್ಬ ಪುಟ್ಟ ಬಾಲಕನಂತೆ ವರ್ತಿಸಿರುವುದು ವಿಪರ್ಯಾಸದ ಪರಮಾವಧಿ.ಈ ಮಹಾಮಾರಿ ವೈರಸ್ಸಿನಿಂದ ದೇಶಕ್ಕೆ ದೇಶವೇ ತತ್ತರಿಸಿ ದಾರಿಕಾಣದೆ ನಿಂತಿರುವ ಸಂದರ್ಭದಲ್ಲಿ...

ಮೇದಿನಡ್ಕ : ಆಹಾರ ಸಾಮಗ್ರಿ ವಿತರಣೆ

ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ರವರ ನೇತೃತ್ವದಲ್ಲಿ ಅಜ್ಜಾವರ ಗ್ರಾಮದ ಮೇದಿನಡ್ಕ ತಮಿಳು ಪುನರ್ವಸತಿ ಕಾಲೊನಿಯಲ್ಲಿ 45 ಮನೆಗಳಿಗೆ ಆಹಾರ ಸಾಮಗ್ರಿಯ ಕಿಟ್ ಗಳನ್ನು ಮೇ 31 ರಂದು ವಿತರಿಸಲಾಯಿತು. ಪಂಚಾಯಿತಿಯ ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು.ಈ ಸಂದರ್ಭ ದಲ್ಲಿ ಅಜ್ಜಾವರ...

ಕನಕಮಜಲು ಯುವಕಮಂಡಲ ವತಿಯಿಂದ ದಿ.ಅಶ್ವಿತ್ ಮಳಿ ಶ್ರದ್ಧಾಂಜಲಿ ಸಭೆ

ಮೇ 9 ರಂದು ವಿಧಿಯ ಕ್ರೂರ ಆಟಕ್ಕೆ ಸಿಲುಕಿ ಅಡ್ಕಾರಿನ ಪಯಸ್ವಿನಿ ನದಿಯಲ್ಲಿ ಬಲಿಯಾದ ಕನಕಮಜಲಿನ ಅಶ್ವಿತ್ ಇವರ ಶ್ರದ್ಧಾಂಜಲಿ ಸಭೆಯು ಕನಕಮಜಲಿನ ಯುವಜನ ವಿಕಾಸ ಕೇಂದ್ರ ಯುವಕಮಂಡಲ ಇದರ ವತಿಯಿಂದ ಮೇ 31 ರಂದು ನಡೆಯಿತು. ಈ ಸಂದರ್ಭದಲ್ಲಿ ಯುವಜನ ವಿಕಾಸ ಕೇಂದ್ರ ಯುವಕಮಂಡಲದ ಪೂರ್ವ ಅಧ್ಯಕ್ಷರಾದ ದಾಮೋದರ ಕನಕಮಜಲು ಅವರ ಸ್ಮರಿಸಿ ಗುಣಗಾನ...

ಅರಂತೋಡಿಗೆ ಭೇಟಿ ನೀಡಿದ ಕಾರಂಟೈನ್ ನಲ್ಲಿದ್ದ ವೈಧ್ಯರಿಗೆ ಪಾಸಿಟಿವ್- ಆತಂಕದಲ್ಲಿ ಅರಂತೋಡು

ಮಲೇಷ್ಯಾ ದಿಂದ ಬಂದು ಮಂಗಳೂರಿನ ಕಾರಂಟೈನ್ ನಲ್ಲಿದ್ದ ವೈಧ್ಯರೊರ್ವರು ಅರಂತೋಡಿಗೆ ಮದುವೆ ಮಾಡಿಕೊಟ್ಟಿದ್ದ ತಮ್ಮ ಮಗಳ ಮನೆಗೆ ಬಂದಿದ್ದಾರೆನ್ನಲಾಗಿದ್ದು, ಇವರು ಅರಂತೋಡಿನ ಮಗಳ ಮನೆಗೆ ಬಂದು ೨ ಗಂಟೆ ಆಗುವ ವೇಳೆಗೆ ಮಂಗಳೂರಿನ ಆಸ್ಪತ್ರೆಯಿಂದ ಕರೆ ಬಂದು ನಿಮಗೆ ಪಾಸಿಟಿವ್ ವರದಿ ಬಂದಿದೆ ಎಂದು ತಿಳಿಸಿದ್ದಾರೆನ್ನಲಾಗಿದೆ. ನೀವು ಎಲ್ಲಿ ಇದ್ದೀರಿ. ಕೂಡಲೇ ಆಸ್ಪತ್ರೆಗೆ ಬನ್ನಿ ಎಂದ...

ಬಿಜೆಪಿ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ಆಯ್ಕೆ

ಭಾರತೀಯ ಜನತಾ ಪಾರ್ಟಿ- ಸುಳ್ಯ ಮಂಡಲದಲ್ಲಿ ಮುಂದಿನ ಮೂರು ವರುಷಗಳ ಅವಧಿಗೆ, ವಿವಿಧ ಮೋರ್ಚಾಗಳ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಸುಳ್ಯ ಮಂಡಲ ಅಧ್ಯಕ್ಷರಾದ ಶ್ರೀ ಹರೀಶ್ ಕಂಜಿಪಿಲಿಯವರು ಘೋಷಿಸಿದ್ದಾರೆ.ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಶ್ರೀಮತಿ ಶುಭದಾ ಎಸ್. ರೈ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಮತಿ ತೇಜಸ್ವಿನಿ ಕಟ್ಟಪುಣಿ, ಎಸ್. ಸಿ. ಮೋರ್ಚಾದ ಅಧ್ಯಕ್ಷರಾಗಿ ಶ್ರೀ ಅಚ್ಚುತ...
Loading posts...

All posts loaded

No more posts

error: Content is protected !!