Ad Widget

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:24-02-2026 ಮಂಗಳವಾರ

*01,🐏ಮೇಷರಾಶಿ🐏*
📖,ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲಾ ಕೆಲಸಗಳನ್ನು ನಿಭಾಯಿಸುವಿರಿ. ತಾಯಿಯ ಆರೋಗ್ಯ ಇಂದು ಸುಧಾರಿಸುತ್ತದೆ. ಭವಿಷ್ಯದಲ್ಲಿ ನಿಮಗೆ ಪ್ರಯೋಜನವನ್ನು ತರುವಂತಹ ಕೆಲವು ಹೊಸ ಕೆಲಸವನ್ನು ನೀವು ಕಲಿಯುವಿರಿ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಿರ ಪ್ರದರ್ಶನ ಸ್ಥಾನಮಾನ ಗೌರವಾದಿ ವೃದ್ಧಿ ಉತ್ತಮ ಧನಲಾಭ,
ಗಮನಿಸಿ:-ಸಹೋದರ ವರ್ಗದವರಿಂದ ಮಾನಸಿಕ ನೆಮ್ಮದಿ ಗೃಹದಲ್ಲಿ ಸಂತಸದ ವಾತಾವರಣ
ಪರಿಹಾರ:-ಶ್ರೀ ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ,
*02,🐂ವೃಷಭರಾಶಿ🐂*
📖,ಶಾರೀರಿಕ ಮಾನಸಿಕ ಆರೋಗ್ಯ ವೃದ್ಧಿ, ದೂರದ ವ್ಯವಹಾರಗಳಲ್ಲಿ ಅನಿರೀಕ್ಷಿತ ಬೆಳವಣಿಗೆ ಹಣಕಾಸಿನ ವಿಚಾರದಲ್ಲಿ ಶಿಸ್ತಿನ ನಿಯಮ ಅಗತ್ಯ, ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ, ಆಸ್ತಿ ವಿಚಾರದಲ್ಲಿ ಪಾರದರ್ಶಕತೆಗೆ ಆದ್ಯತೆ ಇರಲಿ. ನಿಮ್ಮ ಆತ್ಮವಿಶ್ವಾಸದ ಮಟ್ಟ ಇಂದು ಉತ್ತಮವಾಗಿರುತ್ತದೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ,
ಗಮನಿಸಿ:-ಮನೆಯಲ್ಲಿ ಕೆಲವು ಶುಭ ಕಾರ್ಯಕ್ರಮಗಳನ್ನು ಮಾಡುವ ಸಾಧ್ಯತೆ ಇದೆ,
ಪರಿಹಾರ:-ಶ್ರೀ ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ,
*03,👥ಮಿಥುನ ರಾಶಿ👥*
📖,ಇಂದು ನಿಮ್ಮ ದಿನವು ತಾಜಾತನದಿಂದ ಕೂಡಿರುತ್ತದೆ. ಸಾಲ ನೀಡಿರುವ ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಈ ರಾಶಿಚಕ್ರದ ಕಲಾ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಶಿಕ್ಷಕರಿಂದ ಹೆಚ್ಚಿನ ಬೆಂಬಲವನ್ನು ಪಡೆಯುತ್ತಾರೆ. ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯುತ್ತವೆ. ಆರೋಗ್ಯದಲ್ಲಿ ಗಣನೀಯ ವೃದ್ಧಿ ಸ್ವಾಭಿಮಾನದಿಂದ ಕಾರ್ಯದಕ್ಷತೆ ಗೌರವ ಹೆಚ್ಚುವುದು, ಸಂಗಾತಿಯೊಂದಿಗೆ ಸಣ್ಣ ಪ್ರಮಾಣದಿಂದ ಸಂತೋಷ, ಗಮನಿಸಿ:-ಹಿರಿಯರ ಆರೋಗ್ಯ ಸದೃಢ,
ಪರಿಹಾರ:-ತಾಯಿ ಶ್ರೀ ಲಲಿತಾ ತ್ರಿಪುರ ಸುಂದರಿಯನ್ನು ಪ್ರಾರ್ಥಿಸಿ,
*04,🦀ಕಟಕ ರಾಶಿ🦀*
📖,ಈ ದಿನ ಹೆಚ್ಚಿದ ಕೆಲಸದ ಒತ್ತಡದಿಂದ ದೇಹ ಆಯಾಸವಾಗುತ್ತದೆ, ಆರೋಗ್ಯ ವೃದ್ಧಿ, ಧನಪ್ರಾಪ್ತಿ ಸಂಪತ್ತಿನ ವೃದ್ಧಿ, ಸಹಾಯಕ ವರ್ಗದವರಿಂದ ಜವಾಬ್ದಾರಿಯುತ ನಡೆ, ಅನ್ಯರ ಆಸ್ತಿ ವಿಚಾರದಲ್ಲಿ ಭಾಗಿಯಾಗುವ ಸಂಭವ, ಮಕ್ಕಳ ಪ್ರಗತಿ ನಿಮಿತ್ತ ಧನವ್ಯಯ ನೀವು ಮಾಡು ಕೆಲಸಗಳಲ್ಲಿ ಶ್ರದ್ಧೆ ಇರಲಿ. ಇದರಿಂದ ನಿಮ್ಮ ವೃತ್ತಿಯಲ್ಲಿ ಅಭಿವೃದ್ಧಿ ಕಾಣುವಿರಿ. ಅನಾಥರಿಗೆ ಅನ್ನ ನೀಡಿ,
ಗಮನಿಸಿ:-ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.
ಪರಿಹಾರ:-ದೇವಸ್ಥಾನಕ್ಕೆ ಎಳ್ಳು ಎಣ್ಣೆಯನ್ನು ದಾನ ಮಾಡಿ,
*05,🦁ಸಿಂಹ ರಾಶಿ🦁*
📖,ಸರಿಯಾದ ನಿಯಮ ಪಾಲಿಸುವುದರಿಂದ ದೈಹಿಕ ಆರೋಗ್ಯ ವೃದ್ಧಿ, ದೀರ್ಘ ಪ್ರಯಾಣದಿಂದ ಧನ ಲಾಭವಾದರೂ ದೇಹಯಾಸ ಸಂಭವ; ಉದ್ಯೋಗ ವ್ಯವಹಾರಗಳಲ್ಲಿ ಗಣ್ಯರ ಸಹಾಯ ಸಹಕಾರ ಪಡೆಯಿರಿ, ಹಿರಿಯರ ವಿಚಾರದಲ್ಲಿ ದ್ವಂದ್ವ ನೀಲುವು ಸಲ್ಲದು, ದಂಪತಿಗಳ ನಡುವಿನ ಬಿರುಕು ಇಂದು ಕೊನೆಗೊಳ್ಳುತ್ತದೆ, ನಿಮ್ಮ ಸಂಗಾತಿ ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ,
ಗಮನಿಸಿ:-ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ,
ಪರಿಹಾರ:-ಗುರು ಮಂತ್ರವನ್ನು ಪಠಿಸಿ,
*06,👩‍🦳ಕನ್ಯಾ ರಾಶಿ👩‍🦳*
📖,ವ್ಯವಹಾರಕ್ಕೆ ಸಂಬಂಧಿಸಿದಂತೆ ಜನರೊಂದಿಗೆ ಸಂಪರ್ಕ ಬೆಳೆಸುವುದು ಉತ್ತಮ. ನೀವು ಇಂದು ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಆರೋಗ್ಯ ಗಮನಿಸಿ, ಪಾಲುದಾರಿಕೆ ವ್ಯವಹಾರ ಉದ್ಯೋಗದಲ್ಲಿ ಅಭಿವೃದ್ಧಿ ತೋರಿದರು ತಾಳ್ಮೆಯಿಂದ ವ್ಯವಹರಿಸಿ, ದೂರ ಪ್ರಯಾಣ ಸಂಭವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸುವ ಕಾಲ, ಗಮನಿಸಿ:-ಮಹಿಳಾ ಕಾರ್ಮಿಕರಿಗೆ ಹೆಚ್ಚು ಲಾಭ ಸಿಗಲಿದೆ,
ಪರಿಹಾರ:-ಆಂಜನೇಯ ಸ್ವಾಮಿಯನ್ನು ಪೂಜಿಸಿ,
*07,⚖️ತುಲಾ ರಾಶಿ⚖️*
📖,ಇಂದು ನಿಮ್ಮ ದಿನ ಉತ್ತಮವಾಗಿರುತ್ತದೆ, ಪರೋಪಕಾರದಿಂದ ಗೌರವದ ಪೂಜ್ಯತೆಗೆ ಬಾಜನಾಗುವಿರಿ, ಉತ್ತಮ ಧನಾಗಮನ ದೂರ ಪ್ರಯಾಣದಿಂದ ಲಾಭ ಗುರು ಹಿರಿಯರಿಂದ ಸುಖ ಸಂತೋಷ ವೃದ್ಧಿ, ದಾಂಪತ್ಯ ಸುಖ ತೃಪ್ತಿದಾಯಕವಾಗಿರುವುದು, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ವಿವಾಹ ಯೋಗ, ಸಮಾಜದಲ್ಲಿ ನಿಮ್ಮ ಒಳ್ಳೆಯ ಕಾರ್ಯಗಳಿಂದಾಗಿ ನಿಮ್ಮ ಗೌರವ ಹೆಚ್ಚಾಗುತ್ತದೆ, ಗಮನಿಸಿ:-ಸ್ನೇಹಿತರಿಂದ ಸಹಾಯ ಸಿಗಲಿದೆ,
ಪರಿಹಾರ:-ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿ,
*08,🦂ವೃಶ್ಚಿಕ ರಾಶಿ🦂*
📖,ಆರೋಗ್ಯ ಗಮನಿಸಿ ಅನಿರೀಕ್ಷಿತ ದನಾಗಮನವಿದ್ದರೂ ಹಲವು ವಿಧದ ಖರ್ಚಿಗೆ ಮಾರ್ಗಗಳು ತೋರಿ ಬಂದಾವು ದೂರ ಪ್ರಯಾಣ ಸಂಭವ, ಪಾಲುದಾರಿಕೆ ವ್ಯವಹಾರಗಳಲ್ಲಿ ನಷ್ಟ, ಉದ್ಯೋಗದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ, ಹಿರಿಯರ ಆರೋಗ್ಯ ಗಮನಿಸಿ, ವೈದ್ಯರ ಸಲಹೆ ಪಡೆಯಿರಿ, ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ,
ಗಮನಿಸಿ:-ಅಪರಿಚಿತ ವ್ಯಕ್ತಿಯನ್ನು ನಂಬುವುದು ಬೇಡ,
ಪರಿಹಾರ:- ತಾಯಿದುರ್ಗಾ ಕವಚ ಪಠಿಸಿ,
*09,🏹ಧನಸ್ಸು ರಾಶಿ🏹*
📖,ಈ ದಿನ ಉತ್ತಮ ಧನಾರ್ಜನೆಯಾಗಲಿದೆ, ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆಗೆ ಅವಕಾಶ ಹೆಚ್ಚುವುದು, ಆರೋಗ್ಯದಲ್ಲಿ ಸುಧಾರಣೆ ಮಿತ್ರರಿಂದ ಸಹಾಯ ದೊರೆಯುವುದು, ದಾಂಪತ್ಯ ಜೀವನ ಸಮಾಧಾನಕರವಾಗಿರುತ್ತದೆ, ಗುರು ಹಿರಿಯರ ಮಾರ್ಗದರ್ಶನದಿಂದ ಯಶಸ್ಸು ಲಭಿಸಲಿದೆ, ಗಮನಿಸಿ:-ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಶೀಘ್ರದಲ್ಲೇ ಯಶಸ್ಸನ್ನು ಪಡೆಯುತ್ತಾರೆ,
ಪರಿಹಾರ:-ಪಂಚಮುಖಿ ಗಣಪತಿಗೆ ಗರಿಕೆ ನೀಡಿ ಪ್ರಾರ್ಥಿಸಿ,
*10,🐊ಮಕರ ರಾಶಿ🐊*
📖,ಜನಸಂಪರ್ಕದಲ್ಲಿ ವೃದ್ಧಿ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ, ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ, ನೂತನ ಮಿತ್ರರ ಭೇಟಿ, ದೂರ ಪ್ರಯಾಣ ಸಂಭವ, ದಂಪತಿಗಳಲ್ಲಿ ಅನುರಾಗ ವೃದ್ಧಿ, ಗುರು ಹಿರಿಯರಿಂದ ಮಾರ್ಗದರ್ಶನ ಪಡೆಯುವಿರಿ, ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಇಂದು ಅನುಕೂಲಕರ ದಿನವಾಗಿದೆ,
ಗಮನಿಸಿ:-ಬಹುರಾಷ್ಟ್ರೀಯ ಕಂಪನಿಯಿಂದ ಉದ್ಯೋಗಕ್ಕಾಗಿ ಕರೆ ಬರಬಹುದು,
ಪರಿಹಾರ:-ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ಸ್ಮರಿಸಿ,
*11,⚱️ಕುಂಭ ರಾಶಿ⚱️*
📖,ಈ ದಿನ ನಿಮಗೆ ಮಾತೃ ಸಮಾನರಿಂದ ಮನಸ್ಸಿಗೆ ಸಂತೋಷ, ಮಿತ್ರರ ಸಹಕಾರ ನಿಮಗೆ ಸದಾ ಇರಲಿದೆ, ಭೂಮಿ, ವಾಹನ ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ , ಸಾಂಸಾರಿಕ ಸುಖ ವೃದ್ಧಿಯಾಗುವುದು. ಗೃಹಪಯೋಗಿ ವಸ್ತುಗಳ ಸಂಗ್ರಹ ಮಾಡುವಿರಿ, ಉದ್ದೇಶಿತ ಕಾರ್ಯದಲ್ಲಿ ಯಶಸ್ಸು ಕಾಣುವಿರಿ, ವ್ಯಾಪಾರದಲ್ಲಿ ಹೆಚ್ಚು ಲಾಭ ಗಳಿಸಿವಿರಿ,
ಗಮನಿಸಿ:-ಕುಟುಂಬದಲ್ಲಿ ಸಂಭ್ರಮದ ವಾತಾವರಣ
ಪರಿಹಾರ:-ತಾಯಿ ಕಾಳಿಕಾ ದೇವಿಯನ್ನುಪ್ರಾರ್ಥಿಸಿ,
*12,🐋ಮೀನ ರಾಶಿ🐋*
📖,ನೀವು ಇಂದು ಕೆಲವು ತಾಂತ್ರಿಕ ಕೆಲಸವನ್ನು ಕಲಿಯಬಹುದು. ಅದು ಭವಿಷ್ಯದಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ. ವ್ಯವಹಾರ ಉದ್ಯೋಗ ನಿಮಿತ್ತ ದೂರ ಪ್ರಯಾಣ ಸಂಭವ ಆರೋಗ್ಯವನ್ನು ಕಡೆಗಣಿಸದಿರೆ ಸ್ವಂತ ನಿರ್ಣಯದಿಂದ ಮಾಡುವ ವೃತ್ತಿಯಲ್ಲಿ ಗೌರವ ಹೆಚ್ಚುವುದು, ಧನ, ಸಂಪತ್ತು ವೃದ್ಧಿಯಾಗುವುದು,ಧಾರ್ಮಿಕ ಚಟುವಟಿಕೆಗಳಿಗೆ ಸತ್ಕರ್ಮಕ್ಕೆ ಧನ ನೀಡುವಿರಿ, ಗಮನಿಸಿ:-ಸಂಶೋಧಕರಿಗೆ ಅಧ್ಯಯನ ಪ್ರವೃತ್ತರಿಗೆ ಮನ್ನಣೆ ಸೌಕರ್ಯಾದಿ ಸೌಲಭ್ಯ ಪ್ರಾಪ್ತಿ
ಪರಿಹಾರ:-ಗ್ರಾಮ ದೇವತೆಗೆ ಪೂಜೆ ಸಲ್ಲಿಸಿ,.
📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading