
ಭಾರತೀಯ ಜನತಾ ಪಾರ್ಟಿಯು ಸೆ 17ರಿಂದ ಒಕ್ಟೋಬರ್ 2ರ ತನಕ ನಡೆಸುತ್ತಿರುವ ಸೇವಾ ಪಾಕ್ಷಿಕ ಅಂಗವಾಗಿ ಮಂಡಲ ಬಿಜೆಪಿ ಯುವಮೋರ್ಚ ವತಿಯಿಂದ ಸುಳ್ಯದ ಕೆವಿಜಿ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಶಿಬಿರ ನಡೆಯಿತು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ, ಆರ್ ದಿವಾಕರ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ನಿಖಿಲ್ ಮಡ್ತಿಲ, ಲತೀಶ್ ಗುಂಡ್ಯ, ಆಶೀಶ್ ರಾವ್, ರಂಜಿತ್ ಜಯನಗರ, ರಾಜೇಶ್ ಕಿರಿಭಾಗ ಮಹೇಶ್ ಮೆರ್ಕಜೆ ಮತ್ತಿತರರು ಭಾಗವಹಿಸಿದ್ದರು