Ad Widget

ಹಿಂದೂ ಧರ್ಮದ ರಕ್ಷಣೆಗಾಗಿ ಮತ್ತೆ ಮೇಲು ಕೀಳು ಭೇದ ತೊರೆದು ಜಾಗೃತ ಸಮಾಜ ನಿರ್ಮಿಸಬೇಕಿದೆ – ಶಿವಪ್ರಸಾದ್ ಮಲೆಬೆಟ್ಟು

ಬ್ರಿಟಿಷರ ಒಡೆದು ಆಳುವ ನೀತಿಯ ವಿರುದ್ಧ ಹಿಂದೂ ಸಮಾಜ ಸಂಘಟಿತವಾಗಲೂ ಗಣೇಶೋತ್ಸವ ಆಚರಣೆಯನ್ನು ತಿಲಕ್ ರವರು ಆರಂಭಿಸಿದಂತೆ ಇಂದು ನಾವೆಲ್ಲರೂ ಒಗ್ಗಟ್ಟಾಗಿ ಹಿಂದೂ ಧರ್ಮದ ರಕ್ಷಣೆಗಾಗಿ ಜಾಗೃತ ಸಮಾಜ ನಿರ್ಮಿಸಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಸಾಮರಸ್ಯ ಸಹ ಸಂಯೋಜಕರಾದ ಶಿವಪ್ರಸಾದ್ ಮಲೆಬೆಟ್ಟು ಹೇಳಿದರು.

ಅವರು ವಳಲಂಬೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಸಮಾಜದಲ್ಲಿ ಮೇಲು ಕೀಳು ಎಂಬ ‌ಭೇಧ ಕಳೆದು ನಾವೆಲ್ಲ ಹಿಂದು ನಾವೆಲ್ಲ ಬಂಧು ಎನ್ನುವ ಭಾವನೆ ಜಾಗೃತವಾಗಬೇಕಾಗಿದೆ. ಬ್ರಿಟಿಷರ ಒಡೆದು ಆಳುವ ನೀತಿಯಿಂದ ಸಮಾಜವನ್ನು ಒಗ್ಗೂಡಿಸುವ ಸಲುವಾಗಿ ಗಣೇಶ ಚತುರ್ಥಿ ಆಚರಣೆ ತಿಲಕರು ಪ್ರಾರಂಭಿಸಿದರು. ಅವರ ದೂರದೃಷ್ಟಿ ಸಾಕಾರವಾಗಬೇಕಾದರೆ ನಾವೆಲ್ಲ ಒಗ್ಗಟ್ಟಾಗಿ ಸಮಾಜವನ್ನು ಒಗ್ಗೂಡಿಸುವ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಪರಿವಾರ ಸಂಘಟನೆಗಳು ಅಹರ್ನಿಶಿ ಕೆಲಸ ಮಾಡುತ್ತಿವೆ.
ಭಾರತೀಯ ಸಂಸ್ಕೃತಿ ಅನೇಕ ದಾಳಿಗಳ ಬಳಿಕವೂ ಜೀವಂತವಾಗಿ ಉಳಿಯಲು ಕಾರಣ ನಮ್ಮ ಧಾರ್ಮಿಕ ತಳಹದಿ. ಆದರೆ ಇಂದು ನಮ್ಮ ಮನೆಗಳಲ್ಲಿ ಸಂಸ್ಕಾರದ ಕೊರತೆಯಾಗುತ್ತಿದೆ ಅದರಿಂದಾಗಿ ಲವ್ ಜಿಹಾದ್, ಮುಖಾಂತರ ಮುಂತಾದ ದಾಳಿಗಳಾಗುತ್ತಿವೆ. ನಮ್ಮ ಹಬ್ಬಗಳ ಆಚರಣೆಯ ಮೌಲ್ಯಗಳ ಬಗ್ಗೆ ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿದೆ ಅದಕ್ಕೆ ಈ ಗಣೇಶ ಚತುರ್ಥಿ ಮುನ್ನುಡಿಯಾಗಲಿ ಎಂದರು.

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ಚಂದ್ರ ಕೇಪಳಕಜೆ ವಹಿಸಿದ್ದರು.
ಸಭೆಯಲ್ಲಿ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಗೌಡ, ಗಣೇಶೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷ ವೆಂಕಟ್ ದಂಬೆಕೋಡಿ, ಗಣೇಶೋತ್ಸವ ಸಮಿತಿಯ ಮಾಜಿ ಆಧ್ಯಕ್ಷರಾದ ವೆಂಕಟ್ ವಳಲಂಬೆ, ಗೌರವಾಧ್ಯಕ್ಷ ದುರ್ಗೇಶ್ ಪಾರೆಪ್ಪಾಡಿ, ಪ್ರ.ಕಾರ್ಯದರ್ಶಿ ದಿಗಂತ್ ಕಡ್ತಲ್ ಕಜೆ ಉಪಸ್ಥಿತರಿದ್ದರು.

ದುರ್ಗೆಶ್ ಪಾರೆಪ್ಪಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಚಿನ್ ಮೊಟ್ಟೆಮನೆ ವಂದಿಸಿದರು. ಕಿಶೋರ್ ಕುಮಾರ್ ಪೈಕ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!