Ad Widget

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಗೆ ಸಂಸದ ಕ್ಯಾ ಬ್ರಿಜೇಶ್ ಚೌಟ ಭೇಟಿ,
ಭೇಟಿ ನೆನಪಿಗಾಗಿ ಗಿಡ ನೆಟ್ಟು ವಿದ್ಯಾರ್ಥಿಗಳೊಂದಿಗೆ ಬೆರೆತು – ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದ ಸಂಸದರು



ಸಂಸದ ಕ್ಯಾ ಬ್ರಿಜೇಶ್ ಚೌಟ ಅವರು ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಗೆ ಬುಧವಾರ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಬೆರೆತು, ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು.
ಪ್ರಥಮ ಬಾರಿಗೆ ಭೇಟಿ ನೀಡಿದ ಸಂಸದರನ್ನು ವಿದ್ಯಾರ್ಥಿಗಳು   ಬ್ಯಾಂಡ್  ಸೆಟ್ ನೊಂದಿಗೆ ಸ್ವಾಗತಿಸಿದರು. ಭೇಟಿಯ ನೆನಪಿಗಾಗಿ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡರು ಸಂಸದರ ಮೂಲಕ ಹಲಸಿನ ಗಿಡವನ್ನು ನೆಡಲಾಯಿತು.
ಬಳಿಕ ಶಾಲಾ ಅಭಿವೃದ್ಧಿ ಮತ್ತು ಶಾಲಾ ಜಾಗದ ಮಂಜೂರಾತಿ ಮಾಡಿಸುವಂತೆ ಅಧ್ಯಕ್ಷ ದೇರಣ್ಣ ಗೌಡರು ಮನವಿ ಮಾಡಿದರು. ಇದೇ  ವೇಳೆ ಅಧ್ಯಕ್ಷರು ಶಾಲು ಹೊದಿಸಿ ಗೌರವಿಸಿದರು. ಬಳಿಕ ಶಾಲಾ ಅಭಿವೃದ್ಧಿ ಬಗ್ಗೆ ಕೈಜೋಡಿಸುವುದಾಗಿ ಸಂಸದರು  ಭರವಸೆ ನೀಡಿದರು.
ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ವೆಂಕಟ್ ವಳಲಂಬೆ, ಜಯರಾಮ ರೈ, ಬಾಬು ಕೆ.ಎಂ, ಹೇಮಂತ್ ಮಠ, ಶಾಲಾ ಮುಖ್ಯ ಶಿಕ್ಷಕಿ ಜಯಲತಾ ಕೆ.ಆರ್ , ಶಿಕ್ಷಕ ವೃಂದ ಇದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!