Ad Widget

ಸುಳ್ಯ ಸಿ ಎ ಬ್ಯಾಂಕ್ ಆಂತರಿಕ ಲೆಕ್ಕಪರಿಶೋಧಕ ಶಿವಪ್ರಸಾದ್ ಎಸ್ ನಿವೃತ್ತಿ


ಜೂ. 29ರಂದು ಸುಳ್ಯ ಸಿ ಎ ಬ್ಯಾಂಕ್ ಆಂತರಿಕ ಲೆಕ್ಕಪರಿಶೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ  ಶಿವಪ್ರಸಾದ್ ಎಸ್ ಇವರ ನಿವೃತ್ತಿ ಪ್ರಯುಕ್ತ ಬೀಳ್ಕೊಡುಗೆ ಕಾರ್ಯಕ್ರಮ ಸುಳ್ಯ ಸಿ ಎ ಬ್ಯಾಂಕ್ ನ ಶ್ರೀ ಎ ಎಸ್ ವಿಜಯಕುಮಾರ್ ಸಭಾಭವನದಲ್ಲಿ ಇಂದು ನಡೆಯಿತು. ಶಿವಪ್ರಸಾದ್ ಎಸ್ ಇವರು 1991 ರಲ್ಲಿ ಸಿ ಎ ಬ್ಯಾಂಕ್ ನಲ್ಲಿ ಗುಮಾಸ್ತನಾಗಿ ಸೇರ್ಪಡೆಗೊಂಡು ಆಂತರಿಕ ಲೆಕ್ಕ ಪರಿಶೋಧಕ ಹುದ್ದೆಯವರೆಗೆ ವಿವಿಧ ಹುದ್ದೆಗಳನ್ನು ನಿಭಾಯಿಸಿ 33 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ  ಜೂ.29ರಂದು ನಿವೃತ್ತರಾದರು.  ವಿಕ್ರಮ್ ಎ ವಿ, ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು. ಡಿಸಿಸಿ ಬ್ಯಾಂಕ್  ವಲಯ ಮೇಲ್ವಿಚಾರಕರಾದ  ಬಾಲಕೃಷ್ಣ ಪುತ್ಯ, ಸಿ.ಎ.ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷರಾದ   ಬಾಲಗೋಪಾಲ ಎಂ, , ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿಗಳು ಉಪಸ್ತಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಸೂರ್ತಿಲ ಸ್ವಾಗತ ಮತ್ತು ಪ್ರಸ್ತಾವನೆಗೈದರು. ಹೇಮಂತ್ ಕುಮಾರ್ ಕಂದಡ್ಕ ಧನ್ಯವಾದ ಸಮರ್ಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!