- Sunday
- June 7th, 2026
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಜೂ .05ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾಲೇಜಿನ ಮೂಲಿಕಾ ಉದ್ಯಾನವನದಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಕುರಿತು ಕಾಲೇಜಿನ ಭೋದಕ ಬೋಧಕೇತರ ವೃಂದದವರಿಗೆ ಹಾಗೂ ರಾಷ್ಟ್ರೀಯ ಸೇವಾ ಯೋಜನಾ...
ಜೂ.06 ರ ಗುರುವಾರದಂದು ಸ.ಕಿ.ಪ್ರಾ ಶಾಲೆ ದೊಡ್ಡೇರಿ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ಲೇಖನಿ ಹಾಗೂ ಕೊಡೆ ಸಲಕರಣೆಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯ ಗುರುಗಳಾದ ಕೃಷ್ಣಾನಂತ ಶರಳಾಯ ಇವರು ಶಾಲೆಯಲ್ಲಿ ದಾಖಲಾಗಿರುವಂತಹ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಖರ್ಚಿನಿಂದ ಉಚಿತವಾಗಿ ಪುಸ್ತಕ ಲೇಖನಿ ಹಾಗೂ ಕೊಡೆ ಸಲಕರಣೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ.ಇ,...
ಸ್ಟೇಟಸ್ ನಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಹಾಗೂ ಕಾಂಗ್ರೆಸ್ ಮತದಾರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಹಾಕಿಕೊಂಡ ಅಂಗಡಿ ಮಾಲಕರೊಬ್ಬರ ವಿರುದ್ಧ ಕಾಂಗ್ರೆಸ್ ಮುಖಂಡರು ದೂರು ನೀಡಿದ ಘಟನೆ ಜೂ.05 ರಂದು ನಡೆದಿದೆ. ಕಾಂಗ್ರೆಸ್ ಮುಖಂಡರ ಮುಂದೆ ಕ್ಷಮೆ ಕೋರಿದ್ದಲ್ಲದೆ, ತಪ್ಪಿಗೆ ಪ್ರಾಯಶ್ಚಿತ್ತವಾಗಿ ಮೂರು ದಿನಗಳ ಕಾಲ ತನ್ನ ಅಂಗಡಿ ಮುಚ್ಚಲು ಒಪ್ಪಿದ ಮೇರೆಗೆ ಪ್ರಕರಣ ರಾಜಿಯಲ್ಲಿ...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ ಇದರ ನೂತನ ಎಸ್. ಡಿ.ಎಂ.ಸಿ ಅಧ್ಯಕ್ಷರಾಗಿ ಲೋಹಿತ್ ಮೇಲಡ್ತಲೆ, ಉಪಾಧ್ಯಕ್ಷರಾಗಿ ಸುಜಾತ ಪಿ., ಸದಸ್ಯರಾಗಿ ಸೌಮ್ಯ ಯು.ಆರ್. , ಗಿರಿಪ್ರಕಾಶ್ ಕೆ., ಚಂದ್ರಶೇಖರ ಎ., ಜಲಜಾಕ್ಷಿ ಬಿ.ಕೆ., ಸವಿತ ಬಿ.ಕೆ., ಪವಿತ್ರ ಎಂ., ಮೀನಾಕ್ಷಿ ಎ., ಜಯಂತಿ ಕೆ., ಚೆನ್ನಕೇಶವ ಕೆ., ಮುತ್ತಪ್ಪ ಕೆ., ಸವಿತಾ ಎಂ.ಎಸ್., ಪ್ರತಿಭಾ...
ಜ್ಞಾನದ ಜಗತ್ತನ್ನು ಏರುವ ಮೊದಲ ಮೆಟ್ಟಿಲು ಪೂರ್ವ ಪ್ರಾಥಮಿಕ ಶಿಕ್ಷಣ, ಮನೆಗಳಿಂದ ಶಿಕ್ಷಣ ಪ್ರಪಂಚದೆಡೆ ಹೊರ ಬರುತ್ತಿರುವ ಪುಟಾಣಿಗಳಿಗೆ ಶಿಕ್ಷಣ ನೀಡುವ ಕಾಯಕವನ್ನು ಮೊಂಟೆಸ್ಸರಿ/ನರ್ಸರಿ ಶಿಕ್ಷಕೀಯರೇ ಮಾಡಬೇಕಿದೆ. ಸದ್ದಿಲ್ಲದೇ ನಡೆಯುತ್ತಿರುವ ಶಿಕ್ಷಣ ಸೇವೆಯ ಜೊತೆಗೆ ತನ್ನ ಉತ್ಕೃಷ್ಟ ತರಬೇತಿಯೊಂದಿಗೆ ಇಂತಹ ಅನೇಕ ಮೊಂಟೆಸ್ಸರಿ ಶಿಕ್ಷಕಿಯರನ್ನು ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಸಮಾಜಕ್ಕೆ ಕೊಡುಗೆಯಾಗಿ...
https://youtu.be/i_jR9KAywes?si=TR0PWSqlyzBm-NON ಕಡಬ: ಬ್ಯಾಂಕ್ ಲೋನ್ ಪಡೆದು ಮನೆ ಕಟ್ಟುವ ಸಲುವಾಗಿ ಅಗತ್ಯ ದಾಖಲೆ ಪತ್ರಕ್ಕಾಗಿ ಬಂದ ವ್ಯಕ್ತಿಯ ಬಳಿ ಪಟ್ಟಣ ಪಂಚಾಯತ್ ಸಿಬ್ಬಂದಿ ಲಂಚದ ಆಸೆಗಾಗಿ ಎರಡು ದಿನ ಅಲೆದಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ವಿಡಿಯೋ ವೈರಲ್ ಆಗಿದೆ. ಎರಡು ದಿನದಲ್ಲಿ ಬರೋಬ್ಬರಿ ಒಂಭತ್ತು ಬಾರಿ ವ್ಯಕ್ತಿಯೊಬ್ಬರನ್ನು ಅಲೆದಾಡಿಸಿದ ಪಟ್ಟಣ ಪಂಚಾಯತ್ ...
ಸುಳ್ಯ ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಗೆ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಮರುಮೌಲ್ಯ ಮಾಪನದಲ್ಲಿ ಶೇ.100 ಫಲಿತಾಂಶ ಬಂದಿದೆ.ಪರೀಕ್ಷೆಗೆ ಹಾಜರಾದ 111 ವಿದ್ಯಾರ್ಥಿಗಳಲ್ಲಿ ಒಬ್ಬರು ಅನುತ್ತೀರ್ಣರಾಗಿ ಶೇ.99.9 ಫಲಿತಾಂಶ ಬಂದಿತ್ತು.ಬಳಿಕ ಮರುಮೌಲ್ಯಮಾಪನದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿ ಉತ್ತೀರ್ಣರಾಗಿ ಶಾಲೆಗೆ ಶೇ.100 ಫಲಿತಾಂಶ ಬಂದಿದೆ.
