Ad Widget

ಸಂಪಾಜೆ : ಅನಾಥೆಯಾಗಿದ್ದ ಒಂಟಿ ಜೀವಕ್ಕೆ ಪುನರ್ವಸತಿ ಕೇಂದ್ರದ ಆಸರೆ 

ಸಂಪಾಜೆಯ ಗಡಿಕಲ್ಲು ದಿ. ಸೋಮಪ್ಪ ಗೌಡ ಇವರ ಪತ್ನಿ ವಿಮಲ ಕೆ ಎಮ್ (74) ವಯೋ ಸಹಜ ಅನಾರೋಗ್ಯ ಪೀಡಿತರಾಗಿದ್ದು ಇವರಿಗೆ ಮಕ್ಕಳು ಇಲ್ಲದೆ ಅನಾಥೆಯಾಗಿ ಜೀವನ ನಡೆಸುತ್ತಿದ್ದರು. ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಹೃದಯಿಗಳ ಸಹಕಾರದಿಂದ ಇವರನ್ನು ಹೆಚ್ಚಿನ ಆರೈಕೆಗಾಗಿ ಮತ್ತು ಪುನರ್ವಸತಿಗಾಗಿ ಕೇಂದ್ರಕ್ಕೆ ಕಳುಹಿಸುವ ಬಗ್ಗೆ ಪ್ರಯತ್ನಿಸಲಾಗಿತ್ತು. ಇದೀಗ ಜಿಲ್ಲಾ ವಿಕಲಚೇತನ ಕಲ್ಯಾಣ ಅಧಿಕಾರಿ ದ.ಕ ಜಿಲ್ಲಾ ಪಂಚಾಯತ್ ಮಂಗಳೂರು ಇವರ ಸೂಚನೆಯ ಮೇರೆಗೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಹೋಬಳಿ ಅರಂಬೋಡಿ ಪಂಚಾಯತ್ ವ್ಯಾಪ್ತಿ ಗುಂಡೋರಿ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಸೇವಾ ಆಶ್ರಮಕ್ಕೆ ದಾಖಲಿಸಲು ಅವರನ್ನು ಕಳುಹಿಸಿ ಕೊಡಲಾಯಿತು. ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತ ಓಲ್ಗ ಡಿಸೋಜ , ಉಪಾಧ್ಯಕ್ಷ ಎಸ್ .ಕೆ ಹನೀಫ್, ವಿಆರ್ ಡಬ್ಲ್ಯು ಹರ್ಷಿತ್, ಸೇವಾ ಆಶ್ರಮದ ಸಣ್ಣಯ್ಯ, ಎಸ್ ಜೆ ಫಾರ್ಮ್ ವೇಣುಗೋಪಾಲ್ ಇವರು ಹಾಜರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!