Ad Widget

ಅರಂತೋಡು : ಸಿರಿ ಸಂಸ್ಥೆಯ ಉತ್ಪನ್ನಗಳ ದರ ಕಡಿತ ಮಾರಾಟ ಆರಂಭ

ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳ ದರ ಕಡಿತ ಮಾರಾಟ ಅರಂತೋಡು ಕಚೇರಿಯಲ್ಲಿ ಜೂ.20 ರಂದು ಆರಂಭಗೊಂಡಿತು. ನಿವೃತ್ತ ಶಿಕ್ಷಕರಾದ ಜತ್ತಪ್ಪ ಶಿಕ್ಷಕರು ಉದ್ವಾಟಿಸಿ, ಶುಭಹಾರೈಸಿದರು. ಅರಂತೋಡು ಗ್ರಾಮ ಪಂಚಾಯತ್ ಪಿಡಿಓ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ಜನಜಾಗೃತಿ ವಲಯ ಅಧ್ಯಕ್ಷರಾದ ಸೋಮಶೇಖರ ಪೈಕ, ಕಚೇರಿಯ ಕಟ್ಟಡ ಮಾಲಕರಾದ ಗೋಪಾಲ ಗೌಡ, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ರತ್ನಾವತಿ ಅಳಿಕೆ ವಲಯ ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ, ನಿವೃತ್ತ ದೈಹಿಕ ಶಿಕ್ಷಕರಾದ ಎವಿ ತೀರ್ಥರಾಮ ಅಡ್ಕಬಳೆ ಉಪಸ್ಥಿತರಿದ್ದರು. ವಲಯದ ಸೇವಾಪ್ರತಿನಿಧಿ ಶ್ರೀಮತಿ ತಾರಾ ಸ್ವಾಗತಿಸಿ ಸೇವಾ ಪ್ರತಿನಿಧಿ ರೋಹಿಣಿ ವಂದಿಸಿದರು. ಸೇವಾ ಪ್ರತಿನಿಧಿ ನಿತ್ಯಾನಂದ ಭೀಮಗುಳಿ ನಿರೂಪಿಸಿದರು ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಗುಂಪಿನ ಸದಸ್ಯರು, ವಿ ಎಲ್ ಈ ಪುನೀತ್ ಭಾಗವಹಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!