Ad Widget

ಜನಸಾಮಾನ್ಯರ ಸೇವೆ ಮಾಡಬೇಕಾದ ಶಾಸಕರು ಕೇವಲ ಕಾರ್ಯಕರ್ತರ ಸೇವೆ ಮಾಡುತ್ತಿದ್ದಾರೆ – ಪಿ.ಸಿ ಜಯರಾಮ

ಜನಸಾಮಾನ್ಯರ ಸೇವೆ ಮಾಡಬೇಕಾದ ಶಾಸಕರು ಕೇವಲ ಕಾರ್ಯಕರ್ತರ ಸೇವೆ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದರು. ಅವರು ಜು. 21 ರಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆದು ಶಾಸಕರಾಗಿ ಹಾಗೂ ಸಚಿವರಾಗಿ ಸುಳ್ಯದಲ್ಲಿ ಎಸ್ ಅಂಗಾರ ಆಯ್ಕೆಯಾಗಿದ್ದಾರೆ. ಇವರು ಪಕ್ಷದ ಸೇವೆ ಮಾಡುವುದು ಮಾತ್ರವಲ್ಲದೆ ಜನಸಾಮಾನ್ಯರ ಸೇವೆ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವ ನಾವು ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ . ಪಕ್ಷದಲ್ಲಿ ಗೆದ್ದ ನಂತರ ಪಕ್ಷಕ್ಕೆ ಸೀಮಿತವಾಗದೆ ಇರುವುದು ಉತ್ತಮ. ಇತ್ತೀಚೆಗೆ ಮಾಧ್ಯಮದಲ್ಲಿ ವರದಿಯಾದಂತೆ ಆಲೆಟ್ಟಿ ಗ್ರಾಮದ ರಾಮಚಂದ್ರ ನಾಯ್ಕ್ ಎಂಬವರು ಅಂಗವಿಕಲರಾಗಿದ್ದರಿಂದ ಪರಿಶಿಷ್ಟ ವರ್ಗದ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಅವಕಾಶ ಕೊಟ್ಟಿದ್ದು ಅದರ ಅನುಮತಿ ಕೇಳಲು ಸಚಿವ ಅಂಗಾರ ಹತ್ತಿರ ಹೋದಾಗ ಒಪ್ಪದೆ ಇದ್ದಾಗ ಸುಂದರ ಪಾಟಾಜೆ ಮುಖೇನ ಕಛೇರಿಗೆ ಕರೆ ಮಾಡಿ ಮಾತಾಡಿದಾಗ ಗ್ರಾಮಸ್ಥರು ಇದಕ್ಕೆ ಒಪ್ಪುವುದಿಲ್ಲ ಹಾಗೂ ರಾಮಚಂದ್ರ ಕಾಂಗ್ರೆಸ್ ಪಕ್ಷದವರು ಎಂದು ಹೇಳಿದ್ದರು. ಇದರಿಂದ ಯೋಜನೆಗೆ ಅನುಮೋದನೆ ಸಿಗದೆ ಇನ್ನು ಹಲವು ವರ್ಷಗಳ ಕಾಲ ಗಂಗಾ ಕಲ್ಯಾಣ ಯೋಜನೆಗೆ ಕಾಯಬೇಕಾಗಿ ಬಂದಿದೆ. ಜನಸಾಮಾನ್ಯರಿಗೆ ಸಹಾಯ ಮಾಡಬೇಕಾದವರು ಕೇವಲ ಬಿಜೆಪಿ ಗೆ ಸಹಾಯ ಮಾಡುತ್ತಿದ್ದಾರೆ ಹಾಗೂ ಸರ್ಕಾರದ ಹಣವನ್ನು ಪಕ್ಷದ ಜನರಿಗೆ ಮಾತ್ರ ಕೊಡುವುದನ್ನು ಖಂಡಿಸುತ್ತೇವೆ ಎಂದರು. ಕಸ್ತೂರಿ ರಂಗನ್ ವರದಿ ಪ್ರಕಾರ ಸುಳ್ಯದ 12 ಗ್ರಾಮಗಳು ಒಳಪಟ್ಟಿದ್ದು ಮುಂದಿನ ದಿನಗಳಲ್ಲಿ ಕೃಷಿ ಅಭಿವೃದ್ಧಿಗೆ ಹಾಗೂ ಮುಂದಿನ ಕೆಲಸಗಳಿಗೆ ಸಮಸ್ಯೆ ಆಗಬಹುದು ಹಾಗಾಗಿ ಇದರ ಬಗ್ಗೆ ಗಮನ ಹರಿಸಬೇಕು ಎಂದರು.

ಸಾಧನಾ ಸಮಾವೇಶ ಮಾಡುವ ಬದಲು ಕ್ಷಮಾಪಣೆ ಸಮಾವೇಶ ಮಾಡಿ – ಭರತ್ ಮುಂಡೋಡಿ

ಸಾಧನಾ ಸಮಾವೇಶ ಮಾಡುವ ಬದಲು ಕರ್ನಾಟಕ ರಾಜ್ಯದ ಕ್ಷಮಾಪಣೆ ಸಮಾವೇಶ ಮಾಡುವುದು ಉತ್ತಮ. ಈ ಜಿಲ್ಲೆ ಎಲ್ಲಾ ಧರ್ಮದವರು ಶೈಕ್ಷಣಿಕವಾಗಿ ಮುಂದಿದ್ದಾರೆ ಆದರೆ ಇತ್ತೀಚೆಗೆ ಶಾಲೆ ಕಾಲೇಜುಗಳಲ್ಲಿ ದ್ವೇಷ ಉಂಟು ಮಾಡುವಲ್ಲಿ ಪಕ್ಷ ಮಾಡುತ್ತಿದೆ, ಹಾಗೂ ಸಮಾಜದಲ್ಲಿ ಅಶಾಂತಿಯನ್ನು ಮೂಡಿಸಿದೆ ಹೊರತು ಬೇರೇನೂ ಮಾಡಲಿಲ್ಲ. ಪಠ್ಯದ ಪುಸ್ತಕ ಬದಲಾವಣೆ ಮಾಡುವುದರಲ್ಲಿ ಅನೇಕ ಸಾಧಕ ವ್ಯಕ್ತಿಗಳಿಗೆ ಅವಮಾನ ಮಾಡಿದ್ದು ಸಾಧನೆ ಅಲ್ಲ ಹಾಗೂ ಸರ್ಕಾರಿ ಕಛೇರಿಯಲ್ಲಿ ಪೋಟೋ ವೀಡಿಯೋ ಮಾಡಬಾರದು ಎಂಬುದು ತಪ್ಪು, ಇದೆಲ್ಲ ಸಾಧನಾ ಸಮಾವೇಶ ಅಲ್ಲ ಎಂದರು.

ಕಾಂಗ್ರೆಸ್ ಯಾವುದೇ ಯೋಜನೆಗಳನ್ನು ಕೊಡದೇ ಇದ್ದಿದ್ದರೆ ಬಿಜೆಪಿಯವರು ಬಿಕ್ಷೆ ಬೇಡಬೇಕಿತ್ತು – ಎಂ. ವೆಂಕಪ್ಪ ಗೌಡ
ಪಕ್ಷದ ಯಾವುದೇ ಯೋಜನೆಗಳನ್ನು ಬಿಜೆಪಿಗೆ ಕೊಡಬಾರದು ಎಂದಿದ್ದರೆ ಅದು ಯಾವ ಮಟ್ಟಕ್ಕೆ ಹೋಗಿರುತ್ತಿತ್ತು. ನಾವು ಅನೇಕ ಯೋಜನೆಗಳನ್ನು ಕೊಡದೇ ಹೋಗಿದ್ದರೆ ಬಿಜೆಪಿಯ ಹಲವಾರು ಮಂದಿ ಬಿಕ್ಷೆ ಬೇಡಬೇಕಿತ್ತು. ಹಾಗೆ ದೇಶದಲ್ಲಿ ಆಗುವಂತ ಸುದ್ದಿ ಸೋನಿಯಾ ಗಾಂಧಿಯನ್ನು ನ್ಯಾಸ್ನಲ್ ಹೆರಾಲ್ಡ್ ಪತ್ರಿಕೆ ವಿಚಾರವಾಗಿ ತನಿಕೆ ನಡೆಯುತ್ತಿದೆ. ರಾಹುಲ್ ಗಾಂಧಿಯನ್ನು ತನಿಕೆ ನಡೆಸಿದರು ಏನು ಸಿಗಲಿಲ್ಲ. ಇದೆಲ್ಲ ವಿರೋಧ ಪಕ್ಷವನ್ನು ಬಾಯಿ ಮುಚ್ಚಿಸುವ ತಂತ್ರ ಮಾಡುತ್ತಿದೆ ಎಂದು ಎಂ.ವೆಂಕಪ್ಪ ಗೌಡ ಹೇಳಿದರು.
ಗೋಷ್ಠಿಯಲ್ಲಿ ದಿನೇಶ್ ಅಂಬೆಕಲ್ಲು, ಭವಾನಿ ಶಂಕರ ಕಲ್ಮಡ್ಕ, ನಂದರಾಜ ಸಂಕೇಶ್ ಉಪಸ್ಥಿತರಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!