Ad Widget

ದುಗಲಡ್ಕ : ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ – ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

ದುಗಲಡ್ಕ ದ ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗಲಡ್ಕ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಮಿತ್ರ ಯುವಕ ಮಂಡಲದ ಕಟ್ಟಡದಲ್ಲಿ ಆ.30 ರಂದು ಸರಳವಾಗಿ ಆಚರಿಸಲಾಯಿತು.


ದೀಪ ಬೆಳಗಿಸುವುದರ ಮೂಲಕ ಹಾಲು ಸೊಸೈಟಿಯ ಸ್ಥಾಪಕಾಧ್ಯಕ್ಷ ವಾರಿಜಾ ಕೊರಗಪ್ಪ ಕೊಯಿಕುಳಿ ಉದ್ಘಾಟಿಸಿದರು . ಕುರಲ್ ತುಳು ಕೂಟದ ಸಂಚಾಲಕ ಕೆ.ಟಿ. ವಿಶ್ವನಾಥ, ಹಾಲು ಸೊಸೈಟಿಯ ಸದಸ್ಯ,ಕೃಷಿಕ ಶಿವರಾಮ ಗೌಡ ಪಾನತ್ತಿಲ, ಮಾಜಿ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶೀಲ ಉಪಸ್ಥಿತರಿದ್ದು ಮಾತನಾಡಿದರು .ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕೊಯಿಕುಳಿ,ಕುರಲ್ ತುಳುಕೂಟದ ಅಧ್ಯಕ್ಷ ನಾರಾಯಣ ಟೈಲರ್ ಉಪಸ್ಥಿತರಿದ್ದರು ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಭವಾನಿಶಂಕರ್ ಕಲ್ಮಡ್ಕ ಸ್ವಾಗತಿಸಿ, ತುಳುಕೂಟದ ಕಾರ್ಯದರ್ಶಿ ನವ್ಯ ದಿನೇಶ್ ಕೊಯಿಕುಳಿ ವಂದಿಸಿದರು.ಮನೋಜ್ ಪಾನತ್ತಿಲ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ದುಗಲಡ್ಕ ಸರಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಆಶಾ ಎಸ್.ಎಸ್.,ಸನತ್ ಎನ್.ಕೆ., ಮೋನಿಷಾ ಎಲ್.ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಬಳಿಕ ಪುರುಷರಿಗೆ ,ಮಹಿಳೆಯರಿಗೆ ,ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.ಸಮಾರೋಪ ಸಮಾರಂಭದಲ್ಲಿ ಮೆಸ್ಕಾಂ ಉದ್ಯೋಗಿ ಬಾಲಕೃಷ್ಣ ಗೌಡ ದುಗಲಡ್ಕ ಬಹುಮಾನ ವಿತರಿಸಿದರು. ಮಾಜಿ ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ, ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ ,ಯುವಕ ಮಂಡಲದ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ ಕೆ.ಎನ್., ಉಪಸ್ಥಿತರಿದ್ದರು. ದಿನೇಶ್ ಕೊಯಿಕುಳಿ,ನಾರಾಯಣ ಟೈಲರ್, ನವ್ಯ ದಿನೇಶ್, ಅಕ್ಷಯ ಮೂಡೆಕಲ್ಲು ವೇದಿಕೆಯಲ್ಲಿದ್ದರು. ಮನೋಜ್ ಪಾನತ್ತಿಲ ಸ್ವಾಗತಿಸಿದರು, ಕೆ.ಟಿ .ಬಾಗೇಶ್ ವಂದಿಸಿದರು .ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!