ನೆಹರೂ ಯುವ ಕೇಂದ್ರ ಮಂಗಳೂರು ಇದರ ಸಹಯೋಗದಲ್ಲಿ ಸದಾಸಿದ್ಧಿ ಮಿತ್ರ ಬಳಗ ಬೀದಿಗುಡ್ಡೆ ಬಳ್ಪ ಇದರ ವತಿಯಿಂದ ಸದ್ಭಾವನಾ ಕಾರ್ಯಕ್ರಮವು ಸಂಪ್ಯಾಡಿ ಬೀದಿಗುಡ್ಡೆ ಭಜನಾಮಂದಿರ ವಠಾರದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಸದಸ್ಯೆ ಕುಸುಮ ರೈ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸವಿತಾರ ಮುಡೂರು ಆಗಮಿಸಿದ್ದರು. ಮುಖ್ಯ ಅತಿಥಿಯಾಗಿ ವಿಜಯಕುಮಾರ್ ಕಾಂಜಿ, ವಿಶ್ವನಾಥ ರೈ, ಪ್ರಖ್ಯಾತ ರೈ ಹಾಗೂ ಅಭಿಲಾಶ್ ಕಟ್ಟ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಾಗೂ ಜಸ್ವಂತ್ ಎಸ್. ಸಂಪ್ಯಾಡಿ, ರಕ್ಷಿತ್ ಕಲ್ಗುಂಡಿ ಕಾರ್ಯಕ್ರಮ ನಿರ್ವಹಿಸಿದರು.
- Saturday
- September 21st, 2024