
ಮಗು ಅನಾರೋಗ್ಯದಿಂದ ಮೃತಪಟ್ಟ ಹಿನ್ನಲೆಯಲ್ಲಿ ದು:ಖವನ್ನು ಸಹಿಸಿಕೊಳ್ಳಲಾಗದೆ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 28ರಂದು ಬಾಳಿಲದಿಂದ ವರದಿಯಾಗಿದೆ.
ಬಾಳಿಲ ಬೊಮ್ಮಣಮಜಲು ಎಂಬಲ್ಲಿನ ನಿವಾಸಿ ಬಾಲಕೃಷ್ಣ ಎಂಬವರ ಆರು ತಿಂಗಳ ಪುತ್ರಿ ಕೆಲದಿನಗಳ ಹಿಂದೆ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿತ್ತು. ಇದರಿಂದ ನೊಂದ ಮಗುವಿನ ತಂದೆ ಬಾಲಕೃಷ್ಣರು ಮೇ. 28 ರಂದು ರಾತ್ರಿ ಮನೆ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.