
ಸಮಸ್ತ ಕೇರಳ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಇದರ ಅಧೀನದ್ಲಲಿ ಕಾರ್ಯಾಚರಿಸುತ್ತಿರುವ ನಿಂತಿಕಲ್ಲು ಸಿರಾಜುಲ್ ಉಲೂಂ ಮದರಸದ ಮದರಸ ಪ್ರಾರಂಬೋತ್ಸವ ಪತ್ಹೇ ಮುಭಾರಕ್ ಕಾರ್ಯಕ್ರಮವು ದಿನಾಂಕ ಎಪ್ರಿಲ್ 9 ರಂದು ಮದರಸ ಸಭಾಂಗಣದಲ್ಲಿ ನಡೆಯಿತು. ಜಮಾಅತ್ ಖತೀಬ್ ಜಾಪರ್ ಸಹದಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಧಾರ್ಮಿಕ ಶಿಕ್ಷಣದ ಮಹತ್ವಗಳ ಕುರಿತು ಮಾತನಾಡಿದರು. ಮುಹದ್ಸಿನ್ ಮುಸ್ತಪಾ ಝುಹುರಿ , ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ಗಪೂರ್, ಉಪಾಧ್ಯಕ್ಷ ಇಬ್ರಾಹಿಂ ಕಜೆ ಕಾರ್ಯದರ್ಶಿ ಶರೀಪ್ ಜಿ , ಸಮಿತಿ ಪದಾಧಿಕಾರಿಗಳು , ಜಮಾಅತರು, ವಿಧ್ಯಾರ್ಥಿಗಳು , ಪೋಷಕರು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು. ಕೊನೆಯಲ್ಲಿ ಸಿಹಿ ವಿತರಿಸಲಾಯಿತು.