Ad Widget

ಕಾಸರಗೋಡಿನ ಬೆಳ್ಳೂರಿನಲ್ಲಿ ಗಾಯಕ ಸುಳ್ಯದ ವಿಜಯಕುಮಾರ್ ರಿಗೆ “ಶ್ರೀವಾರಿ ಸಂಗೀತ ರತ್ನ ಪ್ರಶಸ್ತಿ” ಸನ್ಮಾನ

. . . . . . . . .

ಕಾಸರಗೋಡು ಜಿಲ್ಲೆ ಆದೂರು ಗ್ರಾಮದ ಬೆಳ್ಳೂರು (ಮುಳ್ಳೇರಿಯ) ಶ್ರೀ ಗೋಪಾಲಕೃಷ್ಣ ಕ್ಷೇತ್ರ ಕೋಳಿಕ್ಕಾಲು ನಲ್ಲಿ ಕಳೆದ ಮಾರ್ಚ್ 2025ರಲ್ಲಿ ನಡೆದ ಅಷ್ಟಬಂದ ಬ್ರಹ್ಮಕಲಶೋತ್ಸವ ವಾರ್ಷಿಕ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಶ್ರೀವಾರಿ ಮೆಲೋಡೀಯಸ್ ಆರ್ಕೆಸ್ಟ್ರಾ ಬಾರಡ್ಕ ಇವರ ನೇತೃತ್ವದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸುಳ್ಯದ ಗಾಯಕರಾದ ವಿಜಯ್ ಕುಮಾರ್ ರಿಗೆ “ಶ್ರೀವಾರಿ ಸಂಗೀತ ರತ್ನ” ಪ್ರಶಸ್ತಿ 2025 ನೀಡಿ ಗೌರವಿಸಿರುತ್ತಾರೆ.‌ ಈ ಪ್ರಶಸ್ತಿಯನ್ನು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರುಗಳು ಶಾಲು ಹಾಕಿ ಪ್ರಶಸ್ತಿಯನ್ನು ನೀಡಿ ಆಶೀರ್ವದಿಸಿದರು. ವೇದಿಕೆಯಲ್ಲಿ ಶ್ರೀವಾರಿ ಮೆಲೋಡಿಯಸ್ ಆರ್ಕೆಸ್ಟ್ರಾ ಬಳಗ ಬಾರಡ್ಕ ಇದರ ಸಂಚಾಲಕರಾದ ಗಾಯಕ ವಸಂತ ಬಾರಡ್ಕ ಮತ್ತು ಕವಿ ಸಾಹಿತಿಯಾದ ಉದನೇಶ್ವರ ಪ್ರಸಾದ್ ಮೂಲಡ್ಕ ಮತ್ತಿತರು ವೇದಿಕೆಯಲ್ಲಿದ್ದು ಶುಭ ಹಾರೈಸಿದರು.

ಪ್ರಸ್ತುತ ಟಿ.ಎ.ಪಿ.ಸಿ.ಎಂ.ಎಸ್ ಸಿಬ್ಬಂದಿಯಾಗಿರುವ ಇವರು ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ನ ನಿರ್ದೇಶಕರಾಗಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!