- Saturday
- September 12th, 2026
ಮಾ.21 ರಿಂದ ಮಾ.23 ರ ತನಕ ಮಹಾರಾಷ್ಟ್ರದಲ್ಲಿ ನಡೆಯಲಿರುವ 70ನೇ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡದ ಪ್ರತಿನಿಧಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಏನೇಕಲ್ಲಿನ ಮಿಥುನ್ ಗೌಡ ಆಯ್ಕೆಯಾಗಿದ್ದಾರೆ.ಇವರು ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನ ಪೈನಲ್ ಬಿ.ಎ ವಿದ್ಯಾರ್ಥಿ. ಏನೆಕಲ್ಲು ಗ್ರಾಮದ ಸುಂದರ ಗೌಡ ಮತ್ತು ವಸಂತಿ ದಂಪತಿಗಳ ಪುತ್ರ.