Ad Widget

ಕೇನ್ಯ: ಕಣ್ಕಲ್ ಬಳಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತ್ಯು – ಬೆಂಗಳೂರಿನಿಂದ ರಜೆಯಲ್ಲಿ ಬಂದಿದ್ದ ವೇಳೆ ದುರ್ಘಟನೆ – ಇಬ್ಬರ ಮೃತದೇಹ ಹೊರತೆಗೆದ ಅಗ್ನಿಶಾಮಕ ದಳ

ಕೇನ್ಯ ಗ್ರಾಮದ ಕಣ್ಕಲ್ ಬಳಿಯ ಪಳ್ಳ ಎಂಬಲ್ಲಿ ಕುಮಾರಧಾರ ಹೊಳೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಮೇ.8 ರಂದು ಸಂಜೆ 4 ಗಂಟೆಗೆ ನಡೆದಿದೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಸ್ಥಳಿಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ರಾತ್ರಿ ಗಂಟೆ ವೇಳೆಗೆ ಹೊರ ತೆಗೆಯಲಾಗಿದೆ ಎಂದು ತಿಳಿದುಬಂದಿದೆ.ಬೆಂಗಳೂರಿನಲ್ಲಿ ನೆಲೆಸಿರುವ...

ರೋಟರಿ ವಿದ್ಯಾಸಂಸ್ಥೆ ಶೇ.100 ಫಲಿತಾಂಶ – 622 ಅಂಕ ಪಡೆದ ಕೀರ್ತನಾ ಸಿ.ವಿ.

ಸುಳ್ಯ ರೋಟರಿ ವಿದ್ಯಾಸಂಸ್ಥೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.43 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಎಲ್ಲರೂ ಪಾಸಾಗಿದ್ದಾರೆ. 21 ಮಂದಿ‌ ಡಿಸ್ಟಿಂಕ್ಷನ್ ಗಳಿಸಿದ್ದಾರೆ. ಕೀರ್ತನಾ ಸಿ.ವಿ. 622 ಅಂಕ ಗಳಿಸಿ ರಾಜ್ಯಕ್ಕೆ ನಾಲ್ಕನೇ ಸ್ಥಾನಿಯಾಗಿದ್ದಾರೆ.‌ಸನಿಹಾ ಶೆಟ್ಟಿ 620, ತುಷಾರ್ ಕಾರ್ತಿಕ್ 612, ವೈಷ್ಣವಿ ಶೆಟ್ಟಿ 603, ಪೃಥ್ವಿ ಎಂ. 602, ಅನುಜ್ಞಾ ಎನ್.ಎಚ್. 600...
Ad Widget

ಉತ್ತಮ ಸಾಧನೆ ತೋರಿದ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ – 623 ಅಂಕ ಪಡೆದು ರಾಜ್ಯಕ್ಕೆ ತೃತೀಯ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಹತಿ

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯಕ್ಕೆ ಶೇ. 100 ಫಲಿತಾಂಶ ಬಂದಿದ್ದು, ಮಹತಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು, ದ.ಕ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ. ಇವರು ಬಳ್ಪ ಗ್ರಾಮದ ಎಡೋಣಿ ವಿಶ್ವೇಶ್ವರ ಬಿ ಹಾಗೂ ಪುಷ್ಪವತಿ ಯು ದಂಪತಿಗಳ ಪುತ್ರಿ. ಸಮಾಜ ವಿಜ್ಞಾನ, ಇಂಗ್ಲೀಷ್, ಗಣಿತ, ಸಂಸ್ಕ್ರತ ವಿಷಯದಲ್ಲಿ 100 ಅಂಕ,...

ಎಸ್.ಎಸ್.ಎಲ್.ಸಿ‌. ಫಲಿತಾಂಶ – ಸುಳ್ಯ ತಾಲೂಕಿಗೆ ಶೇ.89 – 10 ಶಾಲೆಗಳಿಗೆ ಶೇ.100

2023 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಹೊರಬಂದಿದ್ದು ಸುಳ್ಯ ತಾಲೂಕಿಗೆ 89 ಶೇ. ಫಲಿತಾಂಶ ದಾಖಲಾಗಿದೆ. 10 ಶಾಲೆಗಳು 100 ಶೇ. ಫಲಿತಾಂಶ ಪಡೆದು ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 1785 ವಿದ್ಯಾರ್ಥಿಗಳಲ್ಲಿ 1590 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಸುಳ್ಯ ಜೂನಿಯರ್ ಕಾಲೇಜಿಗೆ ಶೇ. 82 , ಪಂಜ ಜೂನಿಯರ್ ಕಾಲೇಜಿಗೆ ಶೇ. 72 , ಬಾಳಿಲದ...

ಗೂನಡ್ಕ ತೆಕ್ಕಿಲ್ ಪ್ರೌಡ ಶಾಲೆಗೆ ಶೇ.100 ಫಲಿತಾಂಶ

ಸಂಪಾಜೆ ಗ್ರಾಮದ ಗೂನಡ್ಕ ತೆಕ್ಕಿಲ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆಗೆ ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಪಲಿತಾಂಶ ಬಂದಿರುತ್ತದೆ. ಶಾಲೆಯಿಂದ ಪರೀಕ್ಷೆಗೆ ಹಾಜರಾದ ಒಟ್ಟು 10 ಮಂದಿ ವಿದ್ಯಾರ್ಥಿಗಳಲ್ಲಿ ಎಲ್ಲರು ತೇರ್ಗಡೆ ಹೊಂದಿರುತ್ತಾರೆ ಸಂಪಾಜೆ ಗ್ರಾಮದ ಗೂನಡ್ಕಅಬೀರಾ ಆನಂದ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರ ಲವೀತ್ ಅಬೀರ 606 ಪಡೆದು ಶಾಲೆಗೆ ಪ್ರಥಮ...

ಎಸ್.ಎಸ್.ಎಲ್.ಸಿ. ಫಲಿತಾಂಶ – ಗುತ್ತಿಗಾರು ಸ.ಪ.ಪೂ.ಕಾಲೇಜಿಗೆ 87%

2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇದರ ಪ್ರೌಡಶಾಲಾ ವಿಭಾಗವು 87.33% ಫಲಿತಾಂಶ ಪಡೆದಿದೆ. ಒಟ್ಟು 71 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 62 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿರುತ್ತಾರೆ. ವಿದ್ಯಾರ್ಥಿಗಳಾದ ದಿಶಾ 581, ಮೌಲ್ಯ 573, ಧನುಷ್.ಶೆಟ್ಟಿ 564, ಲಯಶ್ವಿತ್ 534 ಅಧಿಕ ಅಂಕ ಪಡೆದಿರುತ್ತಾರೆ

ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಗೆ ಶೇ.100 ಫಲಿತಾಂಶ

ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಗೊಂಡಿದ್ದು ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಗೆ ಶೇ.100 ಫಲಿತಾಂಶ ಲಭಿಸಿದೆ. ಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 22 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕು.ಬಿಂದುಶ್ರೀ ಪಿ.ವಿ 587 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಈಕೆ ದೇವಚಳ್ಳ ಗ್ರಾಮದ ಮೇಲೆಪುರ ವೀರಪ್ಪ ಗೌಡ ಮತ್ತು ಶ್ರೀಮತಿ ವಿನುತಾ  ದಂಪತಿಗಳ...

ಗುತ್ತಿಗಾರು : ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಭರ್ಜರಿ ರೋಡ್ ಶೋ

ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯರವರು ನಾಯಕರು ಹಾಗೂ ಕಾರ್ಯಕರ್ತರ ಜತೆ ಗುತ್ತಿಗಾರಿನಲ್ಲಿ ಇಂದು ರೋಡ್ ಶೋ ಮೂಲಕ ಪ್ರಚಾರ ನಡೆಸಿದರು. ಪಂಜ ಕ್ರಾಸ್ ನಿಂದ ನೂರಾರು ಕಾರ್ಯಕರ್ತರೊಂದಿಗೆ ಆರಂಭವಾದ ರೋಡ್ ಶೊ ಮುಖ್ಯ ಪೇಟೆಯಲ್ಲಿ ಸಾಗಿ ಮುತ್ತಪ್ಪ ನಗರದವರೆಗೆ ಸಾಗಿ ಬಂದು ಪೇಟೆಯ ಬಸ್ಸುತಂಗುದಾಣದಲ್ಲಿ ಸಂಪನ್ನಗೊಂಡಿತ್ತು. ಅಭ್ಯರ್ಥಿ ಭಾಗೀರಥಿ ಮುರುಳ್ಯ, ಮಂಡಲ ಪ್ರಮುಖರಾದ ಹರೀಶ್ ಕಂಜಿಪಿಲಿ,ಎಸ್,ಎನ್...

ನಡುಗಲ್ಲು : ಬಿಜೆಪಿಯಿಂದ ಭರ್ಜರಿ ಪ್ರಚಾರ

ನಡುಗಲ್ಲು ಬೂತ್ ನಲ್ಲಿ ಮೇ.06 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗೂ ಬಿಜೆಪಿಯ ಪ್ರಮುಖ ನಾಯಕರು ಬೆಳಿಗ್ಗೆ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ನಂತರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.80 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಹಾಗೂ ಮಾತೆಯರು ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ...

ದೇವಚಳ್ಳ :- ಶೈಲೇಶ್ ಅಂಬೆಕಲ್ಲು ಮನೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ

ದೇವಚಳ್ಳ ಗ್ರಾಮದ ಬಿಜೆಪಿ ಕಾರ್ಯಕರ್ತರ ಸಭೆ ಮೆ.06 ರಂದು ಸಂಜೆ ಶೈಲೇಲ್ ಅಂಬೆಕಲ್ಲು ಮನೆಯಲ್ಲಿ ನಡೆಯಿತು. ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡಲು ಶೈಲೇಶ್ ಅಂಬೆಕಲ್ಲು ಹಾಗೂ ಕಾರ್ಯಕರ್ತರಲ್ಲಿ ಬಿಜೆಪಿ ನಾಯಕರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಸ್.ಎನ್.ಮನ್ಮಥ, ಎನ್.ಎ. ರಾಮಚಂದ್ರ, ಬಿ ಕೆ ಬೆಳ್ಯಪ್ಪ, ಸಂತೋಷ್ ಕುತ್ತಮೊಟ್ಟೆ, ಹರೀಶ್ ರೈ ಉಬರಡ್ಕ, ಜಯಪ್ರಕಾಶ್...
Loading posts...

All posts loaded

No more posts

error: Content is protected !!