Ad Widget

ಕೆ ವಿ ಜಿ ತಾಂತ್ರಿಕ ಮಹಾವಿದ್ಯಾಲಯ. ಮೆಕ್ಯಾನಿಕಲ್ ವಿದ್ಯಾರ್ಥಿನಿ ಕೃತಿಗೆ ಪ್ರಥಮ ರಾಂಕ್

“ಬದುಕಿನಲ್ಲಿ ಅಸಾಧ್ಯವಾದುದು ಯಾವುದು ಇಲ್ಲ. ಸಾಧಿಸುವ ಛಲವೊಂದಿದ್ದರೆ ಸಾಧನೆಯ ಪಥ ನಮ್ಮದಾಗುವುದು ”

ಎಂಬ ಮಾತನ್ನು ಅಕ್ಷರಶಃ ಸತ್ಯ ಎಂಬಂತೆ ಸಾಬೀತುಪಡಿಸಿದವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಾಧನೆಗೈದು ರಾಜ್ಯಪಾಲರಿಂದ ಎಂಟು ಚಿನ್ನದ ಪದಕ ಪಡೆದ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯ ಸುಳ್ಯ ಇಲ್ಲಿನ ವಿದ್ಯಾರ್ಥಿನಿ ಎಸ್. ಕೃತಿ ಅವರು. ಸತತವಾದ ಪರಿಶ್ರಮ ಹಾಗೂ ಸಾಧನೆಯ ದಾರಿ ತೋರಿದ ಕೆವಿಜಿ ಎಂಜಿನಿಯರಿಂಗ್ ಕಾಲೇಜು ಇಂದು ಕೃತಿಯಳನ್ನು ಅತ್ಯುನ್ನತ ಮಟ್ಟಕ್ಕೆ ತಲುಪಿಸಿದೆ ಎನ್ನಬಹುದು. ಕೃತಿಯ ಸಾಧನೆಯನ್ನು ಎಂದು ಇಡೀ ರಾಜ್ಯವೇ ಕೊಂಡಾಡುವಂತಾಗಿದೆ. ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಕೂಡ ಮಕ್ಕಳ ಶಿಕ್ಷಣಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡಿದ ಕೃತಿಯ ತಂದೆ ತಾಯಿಯ ಶ್ರಮಕ್ಕೆ ಮಹತ್ತರವಾದ ಫಲವೇ ಸಿಕ್ಕಿದಂತಾಗಿದೆ . ಕೃತಿಯ ತಂದೆ ಜನಾರ್ಧನ .ಏನ್ ಸುಮಾರು 10 ವರ್ಷಗಳಿಂದ ರಿಕ್ಷಾ ಚಲಾಯಿಸುತ್ತಿದ್ದಾರೆ .ತಾಯಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕುಟುಂಬವು ಪ್ರಸ್ತುತ ಸುಳ್ಳದ ಹಳೆಗೇಟಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಡತನದ ಬೇಗೆಯನ್ನು ಕಂಡಂತಹ ಕುಟುಂಬವಾದರೂ ಶಿಕ್ಷಣ ವಿಷಯದಲ್ಲಿ ಬಹಳಷ್ಟು ಸಿರಿವಂತರು!. ನಿಮ್ಮಿ ಸಾಧನೆಗೆ ಪ್ರೇರಣೆ ಏನು ಎಂಬ ಪ್ರಶ್ನೆಗೆ ಕೃತಿಯ ಉತ್ತರ ಈ ರೀತಿ “ನನ್ನ ಪೋಷಕರೇ ನನಗೆ ಸ್ಪೂರ್ತಿ .ನನ್ನ ತಾಯಿ, ಬಿಎ ಪದವಿ ಹೊಂದಿದ್ದರಿಂದ ಅವರಿಗೆ ಶಿಕ್ಷಣದ ಮಹತ್ವ ಗೊತ್ತಿತ್ತು. ನಾವು ಎರಡು ಹೆಣ್ಣು ಮಕ್ಕಳೇ ಆದ್ದರಿಂದ ಕುಟುಂಬದವರೆಲ್ಲರೂ ಹೆಣ್ಣುಮಕ್ಕಳಿಗೆ ಹೆಚ್ಚಿನ ಕ್ಷಣ ಕೊಡುವ ಅಗತ್ಯವಿಲ್ಲ ,ಎಷ್ಟೇ ಆದರೂ ಮದುವೆಯಾಗಿ ಬೇರೆ ಮನೆ ಸೇರುವವರು ಎಂಬ ಅಭಿಪ್ರಾಯವನ್ನು ತಂದೆಯ ಮುಂದೆ ಇಡುತ್ತಿದ್ದರು. ಆದರೆ ನನ್ನ ತಂದೆ ಬೇರೆಯವರ ಮಾತಿಗೆ ಕಿವಿಗೊಡದೆ ಮಕ್ಕಳ ಶಿಕ್ಷಣವೇ ನನ್ನ ಗುರಿ ಎಂಬ ಛಲತೊಟ್ಟು ನಮಗೆ ಶಿಕ್ಷಣ ಕೊಡಿಸಿದರು .ತಂದೆ ತಾಯಿಯ ಪ್ರೋತ್ಸಾಹ ಮತ್ತು ನನ್ನ ಕಾಲೇಜು ಹಾಗೂ ಸ್ನೇಹಿತರ ಪ್ರೋತ್ಸಾಹದಿಂದ ನಾನು ಇಂದು ಇಂತಹ ಸ್ಥಾನದಲ್ಲಿದ್ದೇನೆ” ಎಂದರು. ಇನ್ನು ನನ್ನ ಕಾಲೇಜು ಹಾಗೂ ವಿಭಾಗಕ್ಕೆ ಎಂದೆಂದಿಗೂ ಋಣಿಯಾಗಿರುವ ಎಂದು ಹೇಳಿದ ಕೃತಿ ಮೆಕ್ಯಾನಿಕಲ್ ವಿಭಾಗವನ್ನು ಕುರಿತು ಹೇಳಿದ್ದು ಹೀಗೆ “ಬಹುಶಃ ನಾನು ಮೆಕ್ಯಾನಿಕಲ್ ವಿಭಾಗ ಆರಿಸಿಕೊಂಡದ್ದಕ್ಕೆ ನನಗೆ ರ‍್ಯಾಂಕ್ ಬಂದಿದೆ. ಏಕೆಂದರೆ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಕ್ಕಿರುವುದರಿಂದ ನನಗೆ ರ‍್ಯಾಂಕ್ ಪಡೆಯಲು ಸಾಧ್ಯವಾಯಿತು. ನಮ್ಮ ಡಿಪಾರ್ಟ್ಮೆಂಟ್ನಲ್ಲಿ ಮೋಟಿವೇಷನಲ್ ಪ್ರೋಗ್ರಾಮ್ ಗಳನ್ನು ಹೆಚ್ಚಾಗಿ ಆಯೋಜಿಸುತ್ತಿದ್ದರು. ಅದರೊಂದಿಗೆ ಅತ್ಯುತ್ತಮವಾದ ಉಪನ್ಯಾಸಕ ವೃಂದ ಮತ್ತು ನನ್ನ ನೆಚ್ಚಿನ ಸ್ನೇಹಿತರ ಬಳಗ, ಮುಖ್ಯವಾಗಿ ನಮ್ಮ ವಿಭಾಗದ ಮುಖ್ಯಸ್ಥರಾದ ಡಾ. ಉಮಾಶಂಕರ್ ಕೆ.ಎಸ್ ಸರ್ ರವರ ಬೆಂಬಲವನ್ನು ನೆನಪಿಸಿಕೊಳ್ಳಲೇಬೇಕು. ಈ ಎಲ್ಲಾ ಪ್ರೋತ್ಸಾಹಗಳು ನನ್ನನ್ನು ಸಾಧನಾ ಶಿಖರಕ್ಕೆ ಏರುವಂತೆ ಮಾಡಿದೆ” ಎಂದು ನುಡಿದರು. ವಿಶ್ವವಿದ್ಯಾನಿಲಯಕ್ಕೆ ಮೊದಲ ರ‍್ಯಾಂಕ್ ಗಳಿಸಿದ ಕೃತಿ ಎಂದಿಗೂ ರ‍್ಯಾಂಕ್ ಗಾಗಿ ಓದಿರಲಿಲ್ಲ, ಪರೀಕ್ಷೆ ಸಮೀಪಿಸುತ್ತಿದ್ದಾಗ ಮಾತ್ರ ಓದುವ ಹವ್ಯಾಸವನ್ನು ತೊಡಗಿಸಿಕೊಂಡಿದ್ದರು. ಇದೀಗ ಕಾನ್ಸೆಪ್ಶಿಯ ಎಂಬ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ಕೃತಿಗೆ ಡಿಸೈನ್ ವಿಭಾಗದಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಆಸೆ ಇದೆ.”ರ‍್ಯಾಂಕ್ ಪಡೆದಿರುವುದು ಕೆ ವಿ ಜಿ ಎಂಜಿನಿಯರಿಂಗ್ ಕಾಲೇಜಿಗೆ ನನ್ನ ತಂದೆ ತಾಯಿಗೆ ಎಲ್ಲರಿಗೂ ಬಹಳಷ್ಟು ಖುಷಿ ತಂದಿದೆ ,ಅವರೆಲ್ಲರ ಸಂತೋಷ ನನ್ನಲ್ಲಿ ಸಾರ್ಥಕತೆಯ ನಗೆ ಬೀರುವಂತೆ ಮಾಡಿದೆ ಎಂದು ಕೃತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!