- Tuesday
- May 6th, 2025

ಗುತ್ತಿಗಾರು ಗ್ರಾಮದ ಬಳ್ಳಕ್ಕದಲ್ಲಿ ವರ್ಷಂಪ್ರತಿ ನಡೆಯುವ ಗಣೇಶೋತ್ಸವವು ಈ ಭಾರಿ 34ನೇ ವರ್ಷವನ್ನು ಪೂರೈಸುತ್ತಿದ್ದು, ನೂತನ ಗಣೇಶೋತ್ಸವ ಸಮಿತಿಯನ್ನು ಇತ್ತೀಚೆಗೆ ರಚನೆ ಮಾಡಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಗಂಗಾಧರ ಚಿಕ್ಮುಳಿ, ಕಾರ್ಯದರ್ಶಿಯಾಗಿ ಉಜಿತ್ ಶ್ಯಾಮ್ ಚಿಕ್ಮುಳಿ, ಖಜಾಂಚಿಯಾಗಿ ದಿನೇಶ್ ಬಪ್ಪನಮನೆ ಅವರುಗಳನ್ನು ಆಯ್ಕೆ ಮಾಡಲಾಯಿತು. ಹಲವು ಮಂದಿಯನ್ನು ಸದಸ್ಯರುಗಳಾಗಿ ಸಮಿತಿಗೆ ಸೇರ್ಪಡೆಗೊಳಿಸಲಾಯಿತು. ಗಣೇಶೋತ್ಸವ ಸಮಿತಿಯ ಟ್ರಸ್ಟ್...

ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಮಹಾಬಲ ಕಟ್ಟಕ್ಕೋಡಿ ಯವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಡಳಿತ ಮಂಡಳಿಗೆ ಚುನಾವಣೆ ನಡೆದು ಅಧ್ಯಕ್ಷ ಸ್ಥಾನದ ಆಯ್ಕೆ ಬಂದಾಗ ಬಿಜೆಪಿ ಪಕ್ಷದ ತೀರ್ಮಾನದಂತೆ ಎರಡೂವರೆ ವರ್ಷ ಮಹಾಬಲ ಕಟ್ಟಕೋಡಿ ಮತ್ತು ಎರಡೂವರೆ ವರ್ಷ ರಮೇಶ್ ದೇಲಂಪಾಡಿಯವರು ಅಧ್ಯಕ್ಷರಾಗುವುದು ಎಂದು ತೀರ್ಮಾನಿಸಲಾಗಿತ್ತು. ಅದರಂತೆ ಜು.30ರಂದು...

ಸಹಕಾರಿ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಹೊಸ ಸಂಚಲನ ಮಾಡಿದೆ. ಸದಸ್ಯರ ಬಳಿಗೆ ಸಹಕಾರಿ ಸಂಘದ ಸೇವೆಗಳನ್ನು ತಲುಪಿಸಿ ಸರ್ವ ಸದಸ್ಯರು ಸಹಕಾರಿ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲು ಈ ಹೆಜ್ಜೆ ಇರಿಸಿದೆ.ಸದಸ್ಯರಿಗೆ ಸಹಕಾರ ಸಂಘದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ವಿನಿಮಯದ ಸರಣಿ ಕಾರ್ಯಕ್ರಮ...

ಶ್ರೀ ತಂಬುರಾಟಿ ಭಗವತಿ ಕ್ಷೇತ್ರ ಕುತ್ತಿಕೋಲು ಇದರ ಅಧೀನಕ್ಕೆ ಒಳಪಡುವ ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿ ಅರಂತೋಡು ಇದರ ಪರಿಧಿ ಯಲ್ಲಿರುವ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನ ದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ದ ಪೂರ್ವಭಾವಿಯಾಗಿ ರಾಶಿ ಚಿಂತನೆ ಮತ್ತು ಮಹೋತ್ಸವ ಸಮಿತಿಯ ರಚನೆಯು ಕುತ್ತಿಕೋಲು ಶ್ರೀ ತಂಬುರಾಟಿ ಭಗವತಿ...

ಭಾರತ ಜಗತ್ತಿನ ಮುಂದುವರಿದ ದೇಶಗಳಲ್ಲಿ ಒಂದಾಗಿ ಬೆಳೆಯುತ್ತಿರುವುದು ಜನರು ಹೆಮ್ಮೆ ಪಡುವ ವಿಚಾರವಾಗಿದೆ. ಕೃಷಿಯನ್ನು ಮುಖ್ಯ ಕಸುಬಾಗಿಸಿ ಸೈನ್ಯಕ್ಕೆ ಮೊದಲ ಪ್ರಾಧಾನ್ಯತೆ ನೀಡಿ ಬಹು ಸಂಸ್ಕೃತಿಯ ಸುಂದರ ಸ್ವಚ್ಚಂದ ದೇಶವಾಗಿ ಮುಂದುವರಿಯುತ್ತಿದೆ. ಹೀಗಿದ್ದರೂ ಭಾರತವು ಹಲವಾರು ಸಮಸ್ಯೆಗಳನ್ನು ಕೂಡ ಎದುರಿಸುತ್ತಿದೆ.ಮುಖ್ಯವಾಗಿ ಹೊರಗಿನ ಶತ್ರುಗಳಿಗಿಂತ ಒಳಗಿರುವ ಶತ್ರುಗಳಿಂದಲೇ ಭಾರತ ಸಂಕಷ್ಟ ಅನುಭವಿಸುವಂತಾಗಿದೆ. ದೇಶದ್ರೋಹ ಚಟುವಟಿಕೆ, ಭಯೋತ್ಪಾದಕ ಕೃತ್ಯಗಳಂತಹ...

ಅರಂತೋಡು ಪೇಟೆಯಲ್ಲಿ ಹೋಟೆಲ್ ನಡೆಸಿ ಜೀವನ ಸಾಗಿಸುತ್ತಿರುವ ಯೋಗೀಶ್ ಹಾಗೂ ಲಲಿತಾ (ರೇಷ್ಮಾ) ದಂಪತಿಗಳ ಪುತ್ರಿ ಖುಷಿ ಇದುವರೆಗೂ ಎಲ್ಲರಂತೆ ಖುಷಿಯಿಂದ ಓಡಾಡಿಕೊಂಡಿದ್ದ ಹುಡುಗಿ. ಯೋಗೀಶ್ ಅವರ ಮೂವರು ಮಕ್ಕಳಲ್ಲಿ ಖುಷಿ (9ವರ್ಷದ) ಎರಡನೆಯವಳು. ದಿನ ತಲೆ ನೋವು ಎಂದು ಅಳುತ್ತಿದ್ದ ಖುಷಿಯನ್ನು ಪರಿಕ್ಷೀಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಮಗು ಬ್ರೈನ್ ಟ್ಯೂಮರ್ ಕಾಯಿಲೆಯಿಂದಬಳಲುತ್ತಿದ್ದು ಬಾಲಕಿಗೆ...

ಸುಮಾರು 100 ವರ್ಷಗಳಿಗೂ ಅಧಿಕ ಇತಿಹಾಸವಿರುವ ಕಳಂಜ ಗ್ರಾಮದ ಪಟ್ಟೆ ಗುಳಿಗ ದೈವಕ್ಕೆ ವರ್ಷಂಪ್ರತಿಯಂತೆ ಆಟಿಯ ಅಗೇಲು ಸೇವೆ ಆ.07ರಂದು ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.

ಆಧುನಿಕ ಸುಳ್ಯದ ನಿರ್ಮಾತೃ , ಶಿಕ್ಷಣ ಬ್ರಹ್ಮ, ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ರಾದ ದಿ. ಡಾ. ಕುರುಂಜಿ ವೆಂಕಟ್ರಮಣ ಗೌಡರ 9ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ನುಡಿನಮನ ಕಾರ್ಯಕ್ರಮವು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಇಂದು ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾದರ್ ಡಿ. ವಿ. ಯವರು ಕುರುಂಜಿ ಯವರ ತತ್ವ- ಆದರ್ಶಗಳನ್ನು...

ಐವರ್ನಾಡು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಾಸಿಕ ಸ್ವಚ್ಛತಾ ಕಾರ್ಯಕ್ರಮವು ಆ.7 ಬೆಳಗ್ಗೆ 7.00 ಗಂಟೆಯಿಂದ 9.00 ರವರೆಗೆ ಐವರ್ನಾಡು ಗ್ರಾಮದ ವಾಹನ ಚಾಲಕ ಮತ್ತು ಮಾಲಕರ ವತಿಯಿಂದ ನಡೆಸಲಾಯಿತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ವಾಹನ ಚಾಲಕರು ಹಾಗೂ ಮಾಲಕರು ಹಾಗೂ ಊರಿನ ಗ್ರಾಮಸ್ಥರು ಈ ಸಂಧರ್ಭದಲ್ಲಿ ಭಾಗವಹಿಸಿದ್ದರು.

All posts loaded
No more posts