Ad Widget

ಯೋಧರನ್ನು ಗೌರವಿಸುವುದು ದೇಶ ಪ್ರೇಮದ ಔನತ್ಯಕ್ಕೆ ಅಡಿಗಲ್ಲು- ಮೋಹನರಾಂ ಸುಳ್ಳಿ

ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಶುಭ ಸಮಾರಂಭದಲ್ಲಿ ಯೋಧರನ್ನು ಗೌರವಿಸುವುದು ಶ್ರೇಷ್ಟ ಮತ್ತು ಹೆಮ್ಮೆಯ ಕ್ಷಣವಾಗಿದೆ. ನಿವೃತ್ತ ಯೋಧರಿಗೆ ಗೌರವ ನೀಡುವುದು ದೇಶ ಪ್ರೇಮದ ಭಾವನೆಗಳ ಔನತ್ಯಕ್ಕೆ ಅಡಿಗಲ್ಲಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರ ವನ್ನು ಉಳಿಸಿ ಬೆಳೆಸುವತ್ತ ಆಧುನಿಕ ಯುಗದಲ್ಲಿ ಯುವ ಜನಾಂಗ ಕಟಿಬದ್ಧವಾಗಬೇಕು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಹೇಳಿದರು.ಸುಬ್ರಹ್ಮಣ್ಯ ಗ್ರಾ.ಪಂ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯ ದಲ್ಲಿ ಸುಬ್ರಹ್ಮಣ್ಯ ದ ವಚನ ವಲ್ಲೀಶ ಸಭಾಭವನದಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಡೆದ ಯೋಧರಿಗೆ ಗೌರವಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

. . . . . . . . .

ದೇಶ ರಕ್ಷಣಾ ಕೈಂಕರ್ಯವನ್ನು ನೆರವೇರಿಸಿ ಬಂದ ಸೈನಿಕರನ್ನು ಹಾಗೂ ದೇಶ ಸೇವೆ ಮಾಡುತ್ತಿರುವ ಯೋಧರನ್ನು ನೆನಪಿಸುವುದು ಸರ್ವರ ಆಧ್ಯ ಕರ್ತವ್ಯವಾಗಿದೆ. ಇದರೊಂದಿಗೆ ಸ್ವಾತಂತ್ರ್ಯ ಕ್ಕಾಗಿ ಹೋರಾಟ ನಡೆಸಿದ ಸರ್ವರೂ ಸ್ಮರಣೀಯರು ಎಂದರು. ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ ವಹಿಸಿದ್ದರು. ವಿಶೇಷ ಭಾಷಣವನ್ನು ನಿವೃತ್ತ ಶಿಕ್ಷಕ ಚಿದಾನಂದ ಯು.ಎಸ್ ಮಾಡಿದರು.

. . . . . . .

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಎಸ್ ಎಸ್ ಪಿ ಯು ಕಾಲೇಜು ಪ್ರಾಂಶುಪಾಲ ಸೋಮಶೇಖರ್ ನಾಯಕ್, ಉದ್ಯಮಿಗಳಾದ ಕೆ.ಯಜ್ಞೇಶ್ ಆಚಾರ್, ಹರೀಶ್ ಕಾಮತ್, ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್, ಏನೆಕಲ್ಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ, ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಸುಬ್ರಹ್ಮಣ್ಯದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ಕಡಬ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜೆ.ಪಿ.ಎಂ ಚೆರಿಯನ್ ಮುಖ್ಯ ಅತಿಥಿಗಳಾಗಿದ್ದರು. ಪಿಡಿಒ ಯು.ಡಿ.ಶೇಖರ್, ಕಾರ್ಯದರ್ಶಿ ಮೋನಪ್ಪ.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಮೃತ ಮಹೋತ್ಸವ ಸಮಿತಿಯ ರಾಜೇಶ್ ಎನ್ ಎಸ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಗ್ರಾ.ಪಂ ಪಿಡಿಒ ಯು ಡಿ ಶೇಖರ್ ಪ್ರಸ್ತಾವಿಕ ಮಾತನಾಡಿದರು.ಅಮೃತ ಮಹೋತ್ಸವ ಸಮಿತಿ ಸಹ ಸಂಚಾಲಕ ರತ್ನಾಕರ ಎಸ್ ವಂದಿಸಿದರು. ಮಹೋತ್ಸವ ಸಮಿತಿ ಸಂಚಾಲಕ ವಿಶ್ವನಾಥ ನಡುತೋಟ ಮತ್ತು ಗ್ರಾ.ಪಂ ಸದಸ್ಯೆ ಭಾರತಿ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

75 ಯೋಧರಿಗೆ ಗೌರವಾರ್ಪಣೆ;

ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾಗಿದ್ದು, ಇದರ ಸವಿ ನೆನಪಿಗಾಗಿ ಭವ್ಯ ಸಮಾರಂಭದಲ್ಲಿ ಕಡಬ ಮತ್ತು ಸುಳ್ಯ ತಾಲೂಕಿನ 75 ಯೋಧರನ್ನು ಸನ್ಮಾನಿಸಲಾಯಿತು. ದೇಶ ಸೇವೆ ನೆರವೇರಿಸುತ್ತಿರುವ ಸಂದರ್ಭ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರ ಮನೆಯವರನ್ನು ಸನ್ಮಾನಿಸಲಾಯಿತು.

ಬೃಹತ್ ಧ್ವಜ ಯಾತ್ರೆ

ಬೆಳಗ್ಗೆ ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ ಧ್ವಜಾರೋಹಣ ನೆರವೇರಿಸಿದರು. ಬಳಿಕ ಬೃಹತ್ ಧ್ವಜ ಯಾತ್ರೆ ಆರಂಭವಾಯಿತು.ನಿವೃತ್ತ ಯೋಧರು, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ತಂಡ, ಗ್ರಾ.ಪಂ ಸದಸ್ಯರು, ಸ್ವಸಹಾಯ ಸಂಘ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲೆ, ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಧ್ವಜ ಯಾತ್ರೆಯಲ್ಲಿ ಸಾಗಿ ಬಂದರು. ಪಂಚಾಯತ್ ನಿಂದ ಕುಕ್ಕೆ ದೇವಳದ ಮೂಲಕ ವಲ್ಲೀಶ ಸಭಾ ಭವನದ ತನಕ ಜಾಥಾ ಸಾಗಿ ಬಂತು. ಜಾಥಾದಲ್ಲಿ ನಿವೃತ್ತ ಯೋಧರನ್ನು ಟ್ಯಾಬ್ಲೋ ಮೂಲಕ ಮೆರವಣಿಗೆಯಲ್ಲಿ ಗೌರವಪೂರ್ವಕವಾಗಿ ಕರೆತರಲಾಯಿತು.ಚೆಂಡೆ, ಭಾರತ ಮಾತೆ ಸ್ತಬ್ಧ ಚಿತ್ರಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು.
ಸಾಂಸ್ಕೃತಿಕ ಸಂಭ್ರಮ:

ಸಭಾ ಕಾರ್ಯಕ್ರಮದ ನಂತರ ಎಸ್ ಎಸ್ ಪಿ ಯು ಕಾಲೇಜು ವಿದ್ಯಾರ್ಥಿಗಳಿಂದ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ, ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಈ ಮೊದಲು ಪ್ರವೀಣ ಏನೆಕಲ್ ಅವರಿಂದ ಕೊಳಲು ವಾದನ ನಡೆಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading