ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದರು. ಇದೀಗ ಕೇರಳ ಕಣ್ಣೂರಿನ ತಲಶ್ಯೇರಿ ಯಲ್ಲಿ ಕೋಳಿ ಫಾರ್ಮ್ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಕರೆತರುತ್ತಿದ್ದಾರೆ ಎಂದು ವರದಿಯಾಗಿದೆ. ತಲಶ್ಯೇರಿಯ ಪರಲ್ ನಿವಾಸಿ ಅಬೀದ್ ಬಂಧಿತ ವ್ಯಕ್ತಿ. ಎನ್.ಐ.ಎ ಗೆ ಪ್ರಕರಣ ವಹಿಸಿದ ನಂತರ ತನಿಖೆ ಇನ್ನಷ್ಟೂ ವೇಗ ಪಡೆದುಕೊಂಡಿದೆ.
- Saturday
- September 21st, 2024