Ad Widget

ಆಳ್ವಾಸ್ ನ “ಅಮರಕ್ರಾಂತಿ” ನಾಟಕ ರಾಜ್ಯ ಮಟ್ಟಕ್ಕೆ ಆಯ್ಕೆ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಅಳ್ವಾಸ್ ಕಾಲೇಜು ಮೂಡುಬಿದ್ರೆಯ ವಿದ್ಯಾರ್ಥಿಗಳು ಅಭಿನಯಿಸಿದ "ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ-1837" ನಾಟಕವು ಪ್ರಥಮ ಬಹುಮಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುತ್ತದೆ. ಇದಕ್ಕೂ ಮೊದಲು ಮಂಗಳೂರಿನ ರಾಮಕೃಷ್ಣ ಕಾಲೇಜಿನಲ್ಲಿ ನಡೆದ ಮಂಗಳೂರು ವಿ.ವಿ.ಫಟಕ ಮಟ್ಟದ ಸ್ಪರ್ಧೆಯಲ್ಲೂ ಈ...

ತುಳುನಾಡಿನಲ್ಲಿ ತುಳುವರಿಗೊಂದು ಆಟಿ ಸಂಭ್ರಮ

ತುಳುನಾಡಿನಲ್ಲಿ ತುಳುವರಿಗೊಂದು ಆಟಿ ಸಂಭ್ರಮತುಳುನಾಡಿನ ಪರಂಪರೆಯ ಹೊಸಬಗೆಯ ಆಚರಣೆಯಲೊಂದು. ತುಳುವರಿಗೆ ಆರ್ಥಿಕ ಪರಿಸ್ಥಿತಿ ಕೈ ಕಟ್ಟುತ್ತಿದ್ದರು. ಆಚರಣೆಗಳು ಹೊಸಬಗೆಯ ಕ್ರಮಗಳನ್ನು ತುಂಬಿ ಕಟ್ಟಿಕೊಡುತ್ತಿವೆ. ನಾಗರಾಧನೆ, ಧೈವರಾಧನೆ, ಸಿರಿಆರಾಧನೆಗಳನ್ನು ಮುಂದುವರಿಸಿಕೊಂಡು ಬಂದವರಿಗೆ ಆಟಿಯೂ ಒಂದು ವಿಶೇಷ ಆಚರಣೆ. ತುಳು ಭಾಷೆಯಲ್ಲಿ 4 ನೇ ತಿಂಗಳು ಅಂದರೆ ಜುಲಾಯಿ ತಿಂಗಳಲ್ಲಿ ಸಂಕ್ರಾಂತಿಯ ನಂತರ ಜುಲಾಯಿ 17 ರಿಂದ ಆಗಸ್ಟ್...
Ad Widget

ಜು.31 : ಉಬರಡ್ಕದಲ್ಲಿ ಉಚಿತ ನೇತ್ರಾ ತಪಾಸಣಾ ಶಿಬಿರ

ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜು.31 ನೇ ಆದಿತ್ಯವಾರದಂದು ಪೂರ್ವಾಹ್ನ 9.00ರಿಂದ 1.00ರ ತನಕ ನಡೆಯುವ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಎಡಮಂಗಲ : ಸಹಕಾರಿ ಸಂಘದ ಸಿಬ್ಬಂದಿ ಕುಶಾಲಪ್ಪ ನಾಯ್ಕ ಬೀಡು ನಿವೃತ್ತಿ – ಸನ್ಮಾನ

ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಿರಿಯ ಗುಮಾಸ್ತ ಹುದ್ದೆಯಲ್ಲಿದ್ದ ಕುಶಾಲಪ್ಪ ನಾಯ್ಕ ಬೀಡು ಇಂದು ಸೇವೆಯಿಂದ ನಿವೃತ್ತರಾದರು. ಇವರನ್ನು ಸಂಘದ ಪರವಾಗಿ ಗೌರವ ಪೂರಕವಾಗಿ ಬೀಳ್ಕೊಡಲಾಯಿತು. ಈ ಸಂದಂರ್ಭದಲ್ಲಿ ಸಂಘದ ಅಧ್ಯಕ್ಷರಾದ ರಾಮಕೃಷ್ಣರೈ ಮಾಲೆಂಗಿ, ಉಪಾಧ್ಯಕ್ಷರಾದ ಸುಮಾ ನೂಚಿಲ, ನಿರ್ದೇಶಕರಾದ ಪದ್ಮಯ್ಯ ನಾಯ್ಕ ಮುಳಿಯ, ಅವಿನಾಶ್ ದೇವರಮಜಲು, ತ್ಯಾಗರಾಜ್ ಬದ್ದೂಕು, ಪುರಂದರ ರೈ...

ಪ್ರವೀಣ್ ಹತ್ಯೆಗೆ ವೇಣುಗೋಪಾಲ ದೇರಪ್ಪಜ್ಜನಮನೆ ಖಂಡನೆ

ಯುವ ಬಿಜೆಪಿ ಮುಂದಾಳು ಪ್ರವೀಣ್ ನೆಟ್ಟಾರು ಹತ್ಯೆಯನ್ನು ಕ್ರೀಡಾ ಮತ್ತು ಕಲಾಪೋಷಕರಾದ ವೇಣುಗೋಪಾಲ ದೇರಪ್ಪಜ್ಜನಮನೆ ಖಂಡಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು ಪ್ರವೀಣ್ ಹಂತಕರನ್ನು ಕೂಡಲೇ ಬಂಧಿಸಿ ನಡುರಸ್ತೆಯಲ್ಲೇ ಎನ್ ಕೌಂಟರ್ ಮಾಡಬೇಕು, ಅದಾಗಲೇ ‌ಮೃತನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವವರೆಗೆ ಪಕ್ಷ ಚಟುವಟಿಕೆಗಳಿಂದ ದೂರ ಇರಲು ನಿರ್ಧರಿಸಿದ ಅಡ್ತಲೆ ಬೂತ್ ಸಮಿತಿ

ರಾಜ್ಯದಲ್ಲಿ ನಮ್ಮದೇ ಪಕ್ಷದ ಸರಕಾರವಿದ್ದರೂ ನಿರಂತರವಾಗಿ ಹಿಂದೂ ಸಂಘಟನೆಗಳ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ನಮ್ಮ ತಾಲೂಕಿನ ಹಿಂದೂ ಸಂಘಟನೆ ಕಾರ್ಯಕರ್ತ ಮತ್ತು ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಪ್ರವೀಣ್ ನೆಟ್ಟಾರ್ ರವರ ಹತ್ಯೆ ಇದಕ್ಕೆ ಇನ್ನೊಂದು ಸೇರ್ಪಡೆ, ಇದುವರೆಗಿನ ಕೃತ್ಯ ನಡೆಸಿದ ಯಾವುದೇ ಹಂತಕರಿಗೂ ಕಠಿಣವಾದ ಶಿಕ್ಷೆ ಆಗಲೇ ಇಲ್ಲ. ಇದು ಬರೀ...

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಮುಂದೂಡಿಕೆ

ಜು. 31ರಂದು ದ್ವಾರಕಾ ಸಭಾ ಭವನದಲ್ಲಿ ನಡೆಸಲು ಉದ್ದೇಶಿಸಿರುವ ವಾರ್ಷಿಕ ಮಹಾಸಭೆ ಹಾಗೂ ಸಂಘದಿಂದ ಅನಾರೋಗ್ಯ ಪೀಡಿತರೀಗೆ ನೀಡುವ ಆರೋಗ್ಯನಿಧಿ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಹೇರಿಕೆಯಲ್ಲಿರುವ ಕಾರಣ ಮುಂದೂಡಲಾಗಿದೆ.ಸಂಘದ ಸದಸ್ಯರುಗಳು ಹಾಗೂ ಸಮುದಾಯ ಬಾಂಧವರು ಸಹಕರಿಸಬೇಕೆಂದು ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಆಡಳಿತ ಮಾಡುವಾಗ ಎಲ್ಲರಿಗೂ ಸಮಾನವಾಗಿ ಏಕಮಾತ್ರ ತೀರ್ಮಾನ ಮಾಡಬೇಕು-ಭರತ್ ಮುಂಡೋಡಿ

ಬ್ಲಾಕ್ ಕಾಂಗ್ರೆಸ್ ವತಿಯಿಂದ ಜು.30ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಧನಂಜಯ ಅಡ್ಪಂಗಾಯ ಮಾತನಾಡಿ, ಬೆಳ್ಳಾರೆಯು ಸುಳ್ಯ ತಾಲೂಕಿಗೆ ಇಂದು ಕಪ್ಪು ಚುಕ್ಕಿ ತಂದಿದೆ. ಧರ್ಮದ ಹೆಸರಿನಲ್ಲಿ, ರಾಜ್ಯ ಧರ್ಮದ ನೆಲೆಯಲ್ಲಿ ಸಮಾಜದ ಹಿತದೃಷ್ಟಿಯಿಂದ ಚುನಾವಣಾ ಭಾಷಣಗಳು ಮತ್ತು ಪ್ರಚೋದನೆ ಭಾಷಣ ಬದಲಿಗೆ ದೇಶದ ಅಭಿವೃದ್ಧಿಯ ಭಾಷಣ ನಡೆದರೆ ಇಂತಹ ಕೊಲೆ...

ಜು.31 : ಅಂಬಟೆಡ್ಕದ ಕನ್ನಡ ಭವನದಲ್ಲಿ ನಡೆಯಬೇಕಾಗಿದ್ದ ವಿಚಾರಗೋಷ್ಠಿ ಮುಂದೂಡಿಕೆ

ಜು.31 : ಅಂಬಟೆಡ್ಕದ ಕನ್ನಡ ಭವನದಲ್ಲಿ ನಡೆಯಬೇಕಾಗಿದ್ದ ವಿಚಾರಗೋಷ್ಠಿ ಮುಂದೂಡಿಕೆ ದ. ಕ ಜಿಲ್ಲಾಧಿಕಾರಿಯರ ಆದೇಶದಂತೆ ದ. ಕ ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿರುವುದರಿಂದ ಜು.31 ರಂದು ಸುಳ್ಯದ ಅಂಬಟೆಡ್ಕ ಕನ್ನಡ ಭವನದಲ್ಲಿ ನಡೆಯಬೇಕಿದ್ದ 1837ರ ಅಮರ ಸುಳ್ಯ ಹೋರಾಟದ ಕುರಿತಾದ ವಿಚಾರಗೋಷ್ಠಿ ಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ ದಿನಾಂಕ ವನ್ನು ತಿಳಿಸಲಾಗುವುದು. ಕಾರ್ಯಕ್ರಮದ ಸಂಚಾಲಕರು ಪ್ರಕಟಣೆಯಲ್ಲಿ...

ಪ್ರವೀಣ್ ಹತ್ಯೆ ಸಂಬಂಧಿಸಿದಂತೆ ಕೇರಳ ಮೂಲದ ವ್ಯಕ್ತಿ ಬಂಧನ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದರು. ಇದೀಗ ಕೇರಳ ಕಣ್ಣೂರಿನ ತಲಶ್ಯೇರಿ ಯಲ್ಲಿ ಕೋಳಿ ಫಾರ್ಮ್ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಕರೆತರುತ್ತಿದ್ದಾರೆ ಎಂದು ವರದಿಯಾಗಿದೆ. ತಲಶ್ಯೇರಿಯ ಪರಲ್ ನಿವಾಸಿ ಅಬೀದ್ ಬಂಧಿತ ವ್ಯಕ್ತಿ. ಎನ್.ಐ.ಎ ಗೆ ಪ್ರಕರಣ ವಹಿಸಿದ ನಂತರ ತನಿಖೆ ಇನ್ನಷ್ಟೂ ವೇಗ...
Loading posts...

All posts loaded

No more posts

error: Content is protected !!