Ad Widget

ಬಳ್ಪ : ಬೀದಿಗುಡ್ಡೆ ಕಾಂಗ್ರೆಸ್ ವಾರ್ಡ್ ಸಭೆ

ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಗ್ರಾಮ ಸಮಿತಿಯ ಬೀದಿಗುಡ್ಡೆ ಬೂತ್ ನ ವಾರ್ಡ್ ಸಭೆಯು ಜು.10 ರಂದು ಗ್ರಾಮದ ಉಸ್ತುವಾರಿಯಾದ ರವೀಂದ್ರ ರುದ್ರಪಾದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯರಾದ ಅಶೋಕ್ ನೆಕ್ರಾಜೆ, ಕಡಬ ತಾಲೂಕು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಶೋಭಿತ್ ಸುಬ್ರಹ್ಮಣ್ಯ, ಬಳ್ಪ ಹಾಗೂ ಕೇನ್ಯ ಗ್ರಾಮ ಸಮಿತಿಯ ಅಧ್ಯಕ್ಷರಾದ ಚಂದ್ರಕಾಂತ್.ಎಂ.ಎಂ, ಉಪಾಧ್ಯಕ್ಷರುಗಳಾದ ಬಾಲಕೃಷ್ಣ ಮಣಿಯಾಣಿ, ಅಚ್ಚುತ ಆಲ್ಕಬೆ, ಪ್ರಧಾನ ಕಾರ್ಯದರ್ಶಿ ಸಮಿತ್ ಪೊಳೆ, ಕಡಬ ಬ್ಲಾಕ್ ಸದಸ್ಯರುಗಳಾದ ಸಂತೋಷ್ ರೈ, ಉಮೇಶ್ ಬುಡೆಂಗಿ, ಬಳ್ಪ ಗ್ರಾಮ ಸಮಿತಿಯ ಖಜಾಂಜಿಯಾದ ದೇವಿಪ್ರಸಾದ್ ನಡುಮನೆ, ಕಾರ್ಯದರ್ಶಿ ಸದಾಶಿವ ಎಣ್ಣೆಮಜಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಳ್ಪ ಬೀದಿಗುಡ್ಡೆ ವಾರ್ಡ್ ನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶಿವಪ್ರಸಾದ್ ಕೊಠಾರಿ, ಉಪಾಧ್ಯಕ್ಷರಾಗಿ ಗೋಪಾಲ ಪಂಡಿ, ಕಾರ್ಯದರ್ಶಿಯಾಗಿ ಪ್ರಶಾಂತ್ ಕಾರ್ಜ, ಜತೆ ಕಾರ್ಯದರ್ಶಿಯಾಗಿ ರಾಜೇಶ್ ಬಿಟ್ಟಂಗಿಲ, ಖಜಾಂಚಿಯಾಗಿ ಹರೀಶ್ ಕಲ್ಲುಗುಂಡಿ, ಸದಸ್ಯರುಗಳಾಗಿ ಹರೀಶ್ ಕಾಂಜಿ, ಹುಕ್ರಪ್ಪ ನಡುಮನೆ, ವಿನೋದ್ ನಡುಮನೆ ಹಾಗೂ ಇತರರನ್ನು ಆಯ್ಕೆ ಮಾಡಲಾಯಿತು.

ರವೀಂದ್ರ ರುದ್ರಪಾದ ಹಾಗೂ ಅಶೋಕ್ ನೆಕ್ರಾಜೆ ಅವರು ಮಾಹಿತಿ ನೀಡಿದರು. ಮಹೇಶ್ ಸೂಂತಾರ್ ಸ್ವಾಗತಿಸಿ ಸಮಿತ್ ಪೊಳೆ ವಂದಿಸಿದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!