- Saturday
- September 21st, 2024
ಮಡಪ್ಪಾಡಿ ಗ್ರಾಮದ ಗಟ್ಟಿಗಾರು ದಿ. ಮಾಧವ ಗೌಡರ ಪುತ್ರ ಯತೀಶ್ ರವರ ವಿವಾಹವು ನೆಲ್ಲೂರು ಕೆಮ್ರಾಜೆ ಗ್ರಾಮದ ಉಳಿಯದಮಜಲು ( ಪಾತಿಕಲ್ಲು) ಶ್ರೀಧರ ಗೌಡರ ಪುತ್ರಿ ಮಣಿಶ್ರೀ ಯೊಂದಿಗೆ ಮೇ. 25 ರಂದು ಮಾವಿನಕಟ್ಟೆ ಉದಯಗಿರಿ ಶ್ರೀ ವಿಷ್ಣು ಕಲಾಮಂದಿರದಲ್ಲಿ ನಡೆಯಿತು.
ಹೋಟೆಲ್ ನಲ್ಲಿದ್ದಾಗ ತನ್ನ ಕೈ ಹಿಡಿದು ಎಳೆದಿದ್ದಾರೆಂದು ಮಹಿಳೆಯೊಬ್ಬರು ಪೋಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಿದ ಘಟನೆ ಕೊಲ್ಲಮೊಗ್ರದಿಂದ ವರದಿಯಾಗಿದೆ.ಕೈ ಹಿಡಿದೆಳೆದು ಮನೆಗೆ ಕರೆದು ಕಪಾಳಮೋಕ್ಷ ಮಾಡಿಸಿಕೊಂಡ ಆರೋಪಿ ಕೊಲ್ಲಮೊಗ್ರ ನಿವಾಸಿ ಮಹಮ್ಮದ್ ನನ್ನು ಸುಬ್ರಹ್ಮಣ್ಯ ಪೋಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇನ್ಯ ಗ್ರಾಮದಲ್ಲಿ ಮೇ.23 ರಂದು ಕಾಂಗ್ರೆಸ್ ಸಮಿತಿಯ ವಾರ್ಡ್ ಸಭೆ ನಡೆಯಿತು.ಗ್ರಾಮ ಉಸ್ತುವಾರಿಯಾದ ರವೀಂದ್ರ ಕುಮಾರ್ ರುದ್ರಪಾದ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಕೇನ್ಯ ವಾರ್ಡ್ ಸಮಿತಿಯನ್ನು ರಚಿಸಲಾಯಿತು. ಕೇನ್ಯ ವಾರ್ಡ್ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಕಾಶ್ ಗೆಜ್ಜೆ, ಉಪಾಧ್ಯಕ್ಷರುಗಳಾಗಿ ವಿಠಲ್ ರೈ ಕಂಡೆಬಾಯಿ, ಸೀತಾರಾಮ ರೈ, ಪ್ರದಾನ ಕಾರ್ಯದರ್ಶಿಯಾಗಿ...
ಯೋಗಾಸನದಲ್ಲಿ ನೋಬೆಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಮೋನಿಷ್ ತಂಟೆಪ್ಪಾಡಿ ಹೆಸರು ಮಾಡಿದ್ದಾರೆ. ಬದ್ದ ಪದ್ಮಾಸನದಲ್ಲಿ 1ಗಂಟೆ 02 ನಿಮಿಷ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಪ್ರಗತಿ ವಿದ್ಯಾ ಸಂಸ್ಥೆ (ರಿ.) ಕಾಣಿಯೂರಿನಲ್ಲಿ6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ತಂಟೆಪ್ಪಾಡಿ ಶ್ರೀ ವಿಶ್ವನಾಥ ಗೌಡ...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿನಿ ಪ್ರತೀಕ್ಷಾ.ಡಿ.ಎಸ್ ಇವರು ಮಡಿಕೇರಿ 19ಕೆಎಆರ್ ಬೆಟಾಲಿಯನ್ ನಿಂದ ಬೆಂಗಳೂರುನಲ್ಲಿ ನಡೆಯುವ ಇಂಟರ್ ಗ್ರೂಪ್ ಫೈರಿಂಗ್ ಕಾಂಪಿಟೇಷನ್ ನಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ. ಇವರಿಗೆ ಕಾಲೇಜಿನ ಲೆಪ್ಟಿನೆಂಟ್ ಸೀತಾರಾಮ.ಎಂ.ಡಿ ಇವರು ತರಬೇತಿ ನೀಡಿರುತ್ತಾರೆ. ಇವರು ಎನ್.ಎಂ.ಸಿ ಪದವಿ ಕಾಲೇಜಿನ ದ್ವಿತೀಯ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ. ಗುತ್ತಿಗಾರು ಗ್ರಾಮದ ವಳಲಂಬೆ ಗೋಳಿಯಡ್ಕ...
ತುಳುವರ ಆಚರಣೆ ಎಂದರೆ ಅದು ವೈಜ್ಞಾನಿಕ, ಪ್ರಾಕೃತಿಕ. ಪರಿಸರವನ್ನು ಬಿಟ್ಟು ಮಾಡುವ ತುಳುವರ ಯಾವ ಆಚರಣೆಯು ಬಹುಶಃ ಇಲ್ಲ. ‘ಪತ್ತನಾಜೆಗ್ ಪತ್ತ್ ಪನಿ ಬರ್ಸ’ (ಪತ್ತನಾಜೆಯ ದಿನ ಹತ್ತು ಹನಿಯಾದರೂ ಮಳೆ) ಎಂದು ನನ್ನ ಅಜ್ಜಿ ಬಾಲ್ಯದಲ್ಲಿ ನನಗೆ ಹೇಳುತ್ತಿದ್ದರು. ಇದು ಈಗಲೂ ಕಿವಿಗೆ ಕೇಳುತ್ತದೆ ಮತ್ತು ಇದು ಸತ್ಯವೂ ಹೌದು. ಬೇಸಿಗೆಯ ತಾಪದಿಂದ ಬೇಸತ್ತ...
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸ.ಹಿ.ಪ್ರಾ ಶಾಲೆ ಐನೆಕಿದು, ಎ.ಜೆ ಆಸ್ಪತ್ರೆ & ಸಂಶೋಧನಾ ಕೇಂದ್ರ ಬ್ಲಡ್ ಬ್ಯಾಂಕ್ ಮಂಗಳೂರು, ಕುಕ್ಕೆಶ್ರೀ ಆಟೋ ಚಾಲಕ ಮತ್ತು ಮಾಲಕರ ಸಂಘ (ರಿ.) ಸುಬ್ರಹ್ಮಣ್ಯ, ಬಿ.ಎಂ.ಎಸ್ ಸಂಯೋಜಿತ ಶ್ರೀ ಹರಿ ಆಟೋ ಚಾಲಕ ಮಾಲಕರ ಸಂಘ (ರಿ.) ಹರಿಹರ ಪಲ್ಲತ್ತಡ್ಕ...
ಕೊಲ್ಲಮೊಗ್ರು ಗ್ರಾಮದ ಮೋಹನಾಂಗಿ ದೇವಿದಾಸ್ ಕಜ್ಜೋಡಿ ಅವರ ಮನೆಯಲ್ಲಿ ಮೇ.22 ರಂದು ಶ್ರೀ ಪಾಷಾಣಮೂರ್ತಿ ದೈವಗಳ ನೇಮೋತ್ಸವವು ನಡೆಯಿತು.ಸಂಜೆ ಭಂಡಾರ ತೆಗೆದು ನಾಲ್ಕು ಪಾಷಾಣಮೂರ್ತಿ ದೈವಗಳ ನೇಮೋತ್ಸವ ನಡೆಯಿತು. ನಂತರ ಅನ್ನಸಂತರ್ಪಣೆ ನಡೆಯಿತು. ವರದಿ :- ಉಲ್ಲಾಸ್ ಕಜ್ಜೋಡಿ
Loading posts...
All posts loaded
No more posts