Ad Widget

ಎನ್ನೆಂಸಿ: ಉಚಿತ ಆರೋಗ್ಯ ತಪಾಸಣಾ ಶಿಬಿರ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಮಾಜಕಾರ್ಯ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಇಲಾಖೆ ಮತ್ತು ಮಂಡಳಿ ಸಹಯೋಗದೊಂದಿಗೆ ಭಾರತ ಸರಕಾರದ ಮಾನ್ಯತೆ ಪಡೆದ ಹೆಚ್.ಎಲ್.ಎಲ್ ಲೈಫ್ ಕೇರ್ ಮಂಗಳೂರು ಇದರ ನುರಿತ ತಜ್ಞರ ಸಹಕಾರದಲ್ಲಿ ಕಟ್ಟಡ ಕಾರ್ಮಿಕರಿಗೆ,...

ಬೊಳುಬೈಲು : ಅಪಾಯಕಾರಿ ಸ್ಥಿತಿಯಲ್ಲಿರುವ ಟ್ರಾನ್ಸ್ ಫಾರ್ಮರ್ ಬಗ್ಗೆ ಗಮನ ಹರಿಸಲು ಸಾರ್ವಜನಿಕರ ಒತ್ತಾಯ

ಬೊಳುಬೈಲು ಸಮೀಪ ಗ್ಯಾರೇಜ್ ಎದುರು ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಪಾಯಕಾರಿ ಸ್ಥಿತಿಯಲ್ಲಿದೆ. ಟ್ರಾನ್ಸ್ ಫಾರ್ಮರ್ ತುಂಬೆಲ್ಲಾ ಬಳ್ಳಿ ಹಬ್ಬಿದ್ದು ಬೆಂಕಿ ಬಂದು ಕರೆಂಟ್ ಕೈಕೊಡುತ್ತಿದೆ. ಈ ಬಗ್ಗೆ ಇಲಾಖೆ ಶೀಘ್ರವಾಗಿ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Ad Widget

ತೆಲಂಗಾಣ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವಸೇನಾ ರೆಡ್ಡಿ ಕುಕ್ಕೆ ಕ್ಷೇತ್ರ ಭೇಟಿ

ತೆಲಂಗಾಣ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವಸೇನಾ ರೆಡ್ಡಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಎಸ್.ಸಿ.ಘಟಕದ ಉಪಾಧ್ಯಕ್ಷ ಪ್ರಹ್ಲಾದ್ ಬೆಳ್ಳಿಪ್ಪಾಡಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ರಂಜಿತ್ ಬಂಗೇರ ಜತೆಗಿದ್ದರು.

ಸಂಪಾಜೆ ಸರಕಾರಿ ಪ್ರೌಢಶಾಲಾ ಮಂತ್ರಿಮಂಡಲ ರಚನೆ – ವಿದ್ಯಾರ್ಥಿ ನಾಯಕನಾಗಿ ನೆಲೋನ್ ಜೋಶ್ವ ಫೆರ್ನಾಂಡಿಸ್

ಸಂಪಾಜೆ ಸರಕಾರಿ(ಆರ್ .ಎಂ.ಎಸ್.ಎ) ಪ್ರೌಢಶಾಲಾ ಮಂತ್ರಿಮಂಡಲ ರಚನೆ ಮೇ.27 ರಂದು ನಡೆಯಿತುಮೇ. 27ರಂದು ನಡೆದ ಮತದಾನದಲ್ಲಿ ನೆಲೋನ್ ಜೋಶ್ವ ಫೆರ್ನಾಂಡಿಸ್ ಹಾಗೂ ಶಿಬಿಲಾ ಸ್ಪರ್ಧಿಸಿದ್ದರು. ಮತದಾನ ಕೇಂದ್ರದ ಪ್ರಿಸೈಡಿಂಗ್ ಆಫಿಸರ್ ಆಗಿ ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ, ಪೋಲಿಂಗ್ ಆಫೀಸರ್ ಆಗಿ ಪರಿಮಳ,ಇಂದಿರಾ ಹಾಗೂ ವಿಷ್ಣು ಪ್ರಕಾಶ್ ಕರ್ತವ್ಯ ನಿರ್ವಹಿಸಿದರು. ನೆಲೋನ್ ಜೋಶ್ವ ಫೆರ್ನಾಂಡಿಸ್ ನಾಯಕನಾಗಿ...

ಇಂಟರ್ ಗ್ರೂಪ್ ಫೈರಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಪೂರ್ಣೇಶ್ ಯು.ಎಸ್.

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಎನ್‌.ಸಿ.ಸಿ ಘಟಕದ ಪೂರ್ಣೇಶ್ ಯು.ಎಸ್. ರವರು ಬೆಂಗಳೂರಿನಲ್ಲಿ ನಡೆದ ಇಂಟರ್ ಗ್ರೂಪ್ ಫೈರಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಮಂಗಳೂರು ಗ್ರೂಪನ್ನು ಪ್ರತಿನಿಧಿಸಿದ್ದಾನೆ. ಈತ ತೊಡಿಕಾನ ಗ್ರಾಮದ ಉಳುವಾರು ಸುರೇಶ್ ಯು.ಟಿ. ಹಾಗೂ ಸುಶೀಲ ಯು.ಎಸ್. ರವರ ಪುತ್ರ.

ನಡುಗಲ್ಲು : ಶಾಲೆಯಲ್ಲಿ ಶ್ರಮದಾನ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ಮೇ.28 ರಂದು ಎಸ್.ಡಿ.ಎಂ.ಸಿ ಮತ್ತು ವಿದ್ಯಾರ್ಥಿಗಳ ಪೋಷಕರೊಂದಿಗೆ ಶ್ರಮದಾನ ನಡೆಯಿತು. ಶ್ರಮದಾನದಲ್ಲಿ ಶಾಲೆಯ ಸುತ್ತಮುತ್ತಲಿನ ಕಾಡು ಕಡಿಯಲಾಯಿತು. ಅಡಿಕೆ ತೋಟಕ್ಕೆ ಸೊಪ್ಪು, ಮಿಷನ್ ನಿಂದ ಹುಲ್ಲು ಕತ್ತರಿಸಲಾಯಿತು ಹಾಗೂ ಶಾಲೆಯ ಸುತ್ತಲಿನ ಮಳೆಗಾಲದ ನೀರು ಹರಿದು ಹೋಗಲು ಚರಂಡಿಯನ್ನು ಮಾಡಲಾಯಿತು. ಶ್ರಮದಾನದ ನಂತರ ಎಸ್.ಡಿ.ಎಂ.ಸಿ ಹಾಗೂ ಪೋಷಕರ...

ಬಾಳಿಲ ಮುಪ್ಪೇರಿಯ ಶ್ರೀ ಮಹಾವಿಷ್ಣು ಸಿಂಗಾರಿ ಮೇಳದ ವತಿಯಿಂದ ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರಿಯ ಇದರ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ.29ರಂದು ಅಭಿನಂದನೆ ಸಲ್ಲಿಸಲಾಯಿತು. 624 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಪ್ರದೀಪ್ ಟಿ, 525 ಅಂಕ ಗಳಿಸಿದ ರಕ್ಷಿತ್, 465 ಅಂಕ ಗಳಿಸಿದ ಮಿಥುನ್, 278 ಅಂಕ ಗಳಿಸಿದ ಪ್ರಜ್ವಲ್ ಬಿ.ಎಂ ಇವರುಗಳನ್ನು ಸಿಂಗಾರಿ ಮೇಳದ ವತಿಯಿಂದ...

ಬಿರುವೆರ್ ಕುಡ್ಲ ಸುಳ್ಯ ಘಟಕದಿಂದ ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಪ್ರದೀಪ್ ಟಿ ಗೆ ಸನ್ಮಾನ

ಬಿರುವೆರ್ ಕುಡ್ಲ ಸುಳ್ಯ ಘಟಕದ ವತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ವಿದ್ಯಾರ್ಥಿ ಬಾಳಿಲ ಗ್ರಾಮದ ತೋಟಮೂಲೆ ಸದಾನಂದ ಪೂಜಾರಿ ಮತ್ತು ಶ್ರೀಮತಿ ದೇವಕಿ ದಂಪತಿಯ ಪುತ್ರ ಪ್ರದೀಪ್ ಟಿ ಅವರನ್ನು ವಿದ್ಯಾರ್ಥಿಯ ಮನೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಸುಳ್ಯ ಘಟಕದ...

ಐನೆಕಿದು :- ಹಾಲು ಉತ್ಪಾದಕರ ಸಹಕಾರಿ ಸಂಘದ ಪದಾಧಿಕಾರಿಗಳ ಆಯ್ಕೆ

ಐನೆಕಿದು ಹಾಲುತ್ಪಾದಕರ ಸಹಕಾರಿ ಸಂಘದ ಪದಾಧಿಕಾರಿಗಳ ಆಯ್ಕೆಯು ಮೇ.17 ರಂದು ಸಂಘದ ರಿಟರ್ನಿಂಗ್ ಅಧಿಕಾರಿಯಾದ ಬಿ.ನಾಗೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ ನಡೆಯಿತು.ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಕೂಜುಗೋಡು, ಉಪಾಧ್ಯಕ್ಷರಾಗಿ ಸವಿತಾ ಕೋಡಿಯಡ್ಕ ಹಾಗೂ ನೂತನ ನಿರ್ದೇಶಕರುಗಳಾಗಿ ಅಜಿತ್ ಕುಮಾರ್, ಡೋಜಪ್ಪ.ಪಿ, ಕಿರಣ.ಪಿ, ಹರಿಪ್ರಸಾದ್.ಕೆ, ಚಿದಾನಂದ.ಎಂ, ರಮೇಶ್.ಕೆ, ಶ್ರೀಮತಿ ಶಿಲ್ಪಾ.ಕೆ, ರಾಮಚಂದ್ರ.ಟಿ ಇವರುಗಳು ಅವಿರೋಧವಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ...

ಕೊಲ್ಲಮೊಗ್ರುದಲ್ಲಿ ಜೂ.01 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಮಂಗಳೂರು ದ.ಕ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಯುವಜನ ಸಂಯುಕ್ತ ಮಂಡಳಿ ಸುಳ್ಯ ತಾಲೂಕು, ಗ್ರಾಮ ಪಂಚಾಯತ್ ಕೊಲ್ಲಮೊಗ್ರು ಹಾಗೂ ಸ್ಥಳೀಯ ಸರಕಾರ ಸರಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜೂ.01 ರಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪೂರ್ವಾಹ್ನ 10:00 ಗಂಟೆಯಿಂದ...
Loading posts...

All posts loaded

No more posts

error: Content is protected !!