Ad Widget

ಸುಬ್ರಹ್ಮಣ್ಯ : ಹಿರಿಯ ಪತ್ರಕರ್ತ ಮಂಜುನಾಥ ರಾವ್ ವಿಧಿವಶ

ಸುಬ್ರಹ್ಮಣ್ಯದ ಹಿರಿಯ ಪತ್ರಕರ್ತ,ಉದ್ಯಮಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮಂಜುನಾಥ್ ರಾವ್ (55) ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕೆಲ ಸಮಯದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.

ಸುಬ್ರಹ್ಮಣ್ಯ ವಲಯದ ಫಾರೆಸ್ಟರ್ ಸಂತೋಷ್ ದಮ್ಮಸೂರ್‌ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆ

ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರಕಾರ ಕೊಡಮಾಡುವ ೨೦೨೧ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಸುಬ್ರಹ್ಮಣ್ಯ ವಲಯದ ಫಾರೆಸ್ಟರ್ ಸಂತೋಷ್ ಶಿವಪ್ಪ ದಮ್ಮಸೂರ್ ಆಯ್ಕೆಯಾಗಿದ್ದಾರೆ.ರಾಜ್ಯದ ಅರಣ್ಯ ಇಲಾಖೆಯಲ್ಲಿ ಟ್ಟು ೨೫ ಮಂದಿಗೆ ಮುಖ್ಯಮಂತ್ರಿ ಪದಕ ನೀಡಲಾಗುತ್ತಿದ್ದು ಸುಳ್ಯ ಅರಣ್ಯ ಇಲಾಖೆಯಿಂದ ಸಂತೋಷ್‌ರವರು ಸಂಶೋಧನಾ ವಿಭಾಗದಲ್ಲಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಸಂತೋಷ್ ರವರು ಬೆಳಗಾವಿ...
Ad Widget

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಆಶ್ರಮಕ್ಕೆ ಧನ ಸಹಾಯ

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ಲಯನ್ಸ್ ಅಧ್ಯಕ್ಷ ಲಯನ್ ಆನಂದ ಪೂಜಾರಿ ಯವರು ರೂ. 10,000 ರೂಪಾಯಿ ಚೆಕ್ ನ್ನು ಆಶ್ರಮದ ಮುಖ್ಯಸ್ಥರಾದ ಅಣ್ಣಪ್ಪ ವಿ ಎಂ ರವರಿಗೆ ಹಸ್ತಾಂತರಿಸಿದರು.ಕ್ಲಬ್ಬಿನ ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿ ತಂದಿದ್ದ ಆಹಾರವನ್ನು ಆಶ್ರಮದ ಸದಸ್ಯರೊಂದಿಗೆ ಸೇವಿಸಿದರು. ಲಯನ್ಸ್ ವಲಯ ಸಲಹೆಗಾರರಾದ ಲಯನ್ ಗಂಗಾಧರ್ ರೈ,ಕಾರ್ಯದರ್ಶಿ...

ನಿಂತಿಕಲ್ಲು: ಸೋಲಾರ್ ಪಾಯಿಂಟ್ ಹೋಂ ಅಪ್ಲೈಯನ್ಸಸ್ & ಫರ್ನಿಚರ್ ಸಂಸ್ಥೆಯ “ಲಕ್ಕೀ ಡ್ರಾ” ಯೋಜನೆ ಮುಂದೂಡಿಕೆ – ಜೂ.11ರಂದು ಪ್ರಥಮ ಡ್ರಾ

ನಿಂತಿಕಲ್ಲಿನ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸೋಲಾರ್ ಪಾಯಿಂಟ್ ಹೋಂ ಅಪ್ಲೈಯನ್ಸಸ್ & ಫರ್ನಿಚರ್ಸ್ ಸಂಸ್ಥೆಯ ನೂತನ ಯೋಜನೆಯಾದ "ಲಕ್ಕೀ ಡ್ರಾ" ಯೋಜನೆಯು ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದು ಜೂ.11ರಂದು ಪ್ರಥಮ ಡ್ರಾ ನಡೆಯಲಿದೆ. ಈ "ಲಕ್ಕೀ ಡ್ರಾ" ದಲ್ಲಿ 15 ದಿನಗಳಿಗೊಮ್ಮೆ ರೂ.500/- ರಂತೆ 12 ಕಂತುಗಳನ್ನು ಪಾವತಿಸಬೇಕಾಗಿದ್ದು, ಪ್ರತೀ ಲಕ್ಕೀ ಡ್ರಾ ಸಂದರ್ಭ ವಿಜೇತ ಅದೃಷ್ಟಶಾಲಿಗಳಿಗೆ...

ಅಜ್ಜಾವರ : ಪ್ರತಾಪ ಯುವಕ ಮಂಡಲ ಪದಾಧಿಕಾರಿಗಳ ಆಯ್ಕೆ ; ಅಧ್ಯಕ್ಷ ಗುರುರಾಜ್ ಅಜ್ಜಾವರ, ಕಾರ್ಯದರ್ಶಿ ಅನಿಲ್ ರಾಜ್ ಕರ್ಲಪ್ಪಾಡಿ, ಖಜಾಂಜಿ ಲೋಕೇಶ್ ಮಾವಿನಪಳ್ಳ

ಅಜ್ಜಾವರ ಪ್ರತಾಪ ಯುವಕ ಮಂಡಲದ ಮಹಾಸಭೆಯು ಮೇ.19 ರಂದು ಶ್ರೀ ಅಯ್ಯಪ್ಪ ಭಜನಾ ಮಂದಿರ ಅಡ್ಪಂಗಾಯದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಿವಪ್ರಕಾಶ್ ಅಡ್ಪಂಗಾಯ ವಹಿಸಿದ್ದರು. ಸಭೆಯಲ್ಲಿ ನೂತನ ಅಧ್ಯಕ್ಷ ರಾಗಿ ಗುರುರಾಜ್ ಅಜ್ಜಾವರ, ಉಪಾಧ್ಯಕ್ಷ ರಾಗಿ ವಿಕ್ರಮ್ ಅಡ್ಪಂಗಾಯ ಮತ್ತು ರವಿರಾಜ್ ಕರ್ಲಪ್ಪಾಡಿ,ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ರಾಜ್ ಕರ್ಲಪ್ಪಾಡಿ, ಜತೆ ಕಾರ್ಯದರ್ಶಿಯಾಗಿ ನವೀನ್ ಕುಮಾರ್, ಕೋಶಾಧಿಕಾರಿಯಾಗಿ...

ಎನ್ನೆಂಸಿ: ಯುವ ರೆಡ್ ಕ್ರಾಸ್ ಘಟಕದಿಂದ ವಿಶ್ವ ತಂಬಾಕು ರಹಿತ ದಿನಾಚರಣೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ "ತಂಬಾಕು ನಮ್ಮ ಪರಿಸರಕ್ಕೆ ಅಪಾಯ" ಎಂಬ ಶೀರ್ಷಿಕೆಯಡಿ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ರತ್ನಾವತಿ ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ...

ಕೊಲ್ಲಮೊಗ್ರು :- ಶ್ರೀ ಮಾತಾ ಪ್ರಗತಿಬಂಧು ಸಂಘ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಸುಬ್ರಹ್ಮಣ್ಯ ವಲಯದ ಕೊಲ್ಲಮೊಗ್ರುವಿನಲ್ಲಿ ಶ್ರೀಮಾತಾ ಎಂಬ ಹೆಸರಿನ ನೂತನ ಪ್ರಗತಿಬಂಧು ಸಂಘವು ಮೇ.29 ರಂದು ಉದ್ಘಾಟನೆಗೊಂಡಿತು.ನೂತನ ಸಂಘದ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷರಾದ ಜನಾರ್ಧನ ದೋಣಿಪಳ್ಳ ನೆರವೇರಿಸಿದರು. ನೂತನ ಸಂಘದ ಪ್ರಬಂಧಕರಾಗಿ ಗಾಯತ್ರಿ ಕೊಳಗೆ, ಸಂಯೋಜಕರಾಗಿ ನಮಿತಾ ಅಂಬೆಕಲ್ಲು, ಕೋಶಾಧಿಕಾರಿಯಾಗಿ ದಿವ್ಯಾ ತೀರ್ಥರಾಮ ನಾಲಡ್ಕ...

ಸುಬ್ರಹ್ಮಣ್ಯ : ಸ್ಕೌಟ್ ಗೈಡ್ಸ್ ಘಟಕದ ಬೇಸಿಗೆ ಶಿಬಿರ ಉದ್ಘಾಟನೆ

ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ ಸ್ಕೌಟ್ ಗೈಡ್ಸ್ ಘಟಕದ ಬೇಸಿಗೆ ಶಿಬಿರ ಮೇ. 30 ರಂದು ಉದ್ಘಾಟನೆಗೊಂಡಿತು. ಎಣ್ಮೂರು ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಅಧ್ಯಾಪಕ ಮೋಹನ ಗೌಡ ಶಿಬಿರ ಉದ್ಘಾಟಿಸಿದರು. ಪ್ರೌಢಶಾಲಾ ಮುಖ್ಯಸ್ಥರಾಗಿರುವ ಯಶವಂತ ರೈಯವರು ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ ಮಾಸ್ಟರ್ ಸತೀಶ್ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಗೈಡ್ ಕ್ಯಾಪ್ಟನ್ ಸ್ಮಿತಾ ಕೆ.ಎಸ್., ಅಧ್ಯಾಪಕ ಕೃಷ್ಣಾಭಟ್,...

ಗುತ್ತಿಗಾರು : ಶೀಘ್ರದಲ್ಲಿ ಪ್ರಾರಂಭವಾಗಲಿರುವ ನಿರೀಕ್ಷಾ ಕೋಚಿಂಗ್ ಹಾಗೂ ಟ್ಯುಟೋರಿಯಲ್ – ದಾಖಲಾತಿ ಆರಂಭ

ಗುತ್ತಿಗಾರು ಮುತ್ತಪ್ಪ ನಗರದ ಬಾಲಾಜಿ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ರಂಜಿತ್ ಅಂಬೆಕಲ್ಲು ಹಾಗೂ ಜೀವನ್ ಕುಮಾರ್ ತಳೂರು ಸಾರಥ್ಯದಲ್ಲಿ ನಿರೀಕ್ಷಾ ಕೋಚಿಂಗ್ ತರಗತಿ ಹಾಗೂ ಟ್ಯುಟೋರಿಯಲ್ ಆರಂಭಗೊಳ್ಳಲಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಇಂಗ್ಲಿಷ್ ಸ್ಪೀಕಿಂಗ್ ತರಗತಿಗಳು, 8,9,10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ,ಗಣಿತ, ಇಂಗ್ಲಿಷ್ ಹಾಗೂ ಎಲ್ಲಾ ವಿಷಯಗಳಿಗೆ ತರಗತಿಗಳು, ನೇರವಾಗಿ 10 ನೇ...

ಎನ್ನೆಂಸಿ: ವಿಶ್ವ ರೆಡ್ ಕ್ರಾಸ್ ದಿನದ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನದ ಪ್ರಯುಕ್ತ ರೆಡ್ ಕ್ರಾಸ್ ಸದಸ್ಯರಿಗೆ ರಸ ಪ್ರಶ್ನೆ ಸ್ಪರ್ಧೆಯನ್ನು ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಸುಳ್ಯ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ...
Loading posts...

All posts loaded

No more posts

error: Content is protected !!