Ad Widget

ಏ.2 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಧಾರ್ಮಿಕ ದಿನಾಚರಣೆ ಮತ್ತು ಯುಗಾದಿ ಆಚರಣೆ

ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏ.2 ರಂದು ರಾಜ್ಯ ಧಾರ್ಮಿಕ ದಿನಾಚರಣೆ ಮತ್ತು ಯುಗಾದಿ ಆಚರಣೆ ನೆರವೇರಲಿದೆ. ಈ ಪ್ರಯುಕ್ತ ಮುಂಜಾನೆ 6 ಗಂಟೆಯಿಂದ ಶ್ರೀ ವಿದ್ಯಾಸಾಗರ ಭಜನಾ ಸಂಗಮ ಮತ್ತಿತರ ಸ್ವಯಂಸೇವಕ ತಂಡದವರಿದ ಶ್ರೀ ದೇವಳದ ಧರ್ಮಸಮ್ಮೇಳನ ಮಂಟಪದಲ್ಲಿ ಅಹಃಪೂರ್ಣ ಭಜನಾ ಕಾರ್ಯಕ್ರಮ ನೆರವೇರಲಿದೆ.

. . . . . . . . .

ರಾಜ್ಯದ ಅಭಿವೃದ್ಧಿಗಾಗಿ ಪ್ರಾರ್ಥನೆ:
ಯುಗಾದಿಯ ಪುಣ್ಯದಿನ ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಜನತೆಯ ಒಳಿತಿಗಾಗಿ ಕುಕ್ಕೆ ಶ್ರೀ ಶ್ರೀ ಸುಬ್ರಹ್ಮಣ್ಯ ದೇವರಿಗೆ ದೇವತಾ ಪ್ರಾರ್ಥನೆ ನೆರವೇರಲಿದೆ.ಅಲ್ಲದೆ ಶ್ರೀ ದೇವರಿಗೆ ವಿಶೇಷ ಪಂಚಾಮೃತ ಮಹಾಭಿಷೇಕ , ಹಾಲು ಪಾಯಸ ನೈವೇದ್ಯ ಮತ್ತು ಇತರ ಪರಿವಾರ ದೇವರುಗಳಿಗೆ ಅವಲಕ್ಕಿ ಪಂಚಕಜ್ಜಾಯ ಸಮರ್ಪಣೆ ಸಹಿತ ಮಂಗಳಾರತಿ ಸೇವೆ ನೆರವೇರಲಿದೆ.ಅಲ್ಲದೆ ಯುಗಾದಿ ವಿಶೇಷ ಪ್ರಯುಕ್ತ ಭಕ್ತಾದಿಗಳಿಗೆ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಬೇವು – ಬೆಲ್ಲ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಶ್ರೀ ದೇವಳದ ರಥಬೀದಿಯಲ್ಲಿ ಯಕ್ಷಶ್ರೀ ಹವ್ಯಾಸ ಬಳಗ ಪುತ್ತೂರು ಇವರಿಂದ ಕುಮಾರ ಸಂಭವ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ ಉತ್ಸವದ ಸಮಯದಲ್ಲಿ ಹೊಸ ಸಂವತ್ಸರದ ಪಂಚಾಂಗ ಶ್ರವಣ ಕಾರ್ಯಕ್ರಮ ನೆರವೇರಲಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading