Ad Widget

ಅಯ್ಯನಕಟ್ಟೆ ಜಾತ್ರೆಯ ಕುರಿತಾದ ನೆನಪಿನ ಸಂಚಿಕೆ “ಅಯ್ಯನಕಟ್ಟೆ ಜಾತ್ರಾಂತರಂಗ” ಅಯ್ಯನಕಟ್ಟೆ ಜಾತ್ರೋತ್ಸವದಂದು ಬಿಡುಗಡೆ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನಗಳ ಜೀರ್ಣೋದ್ಧಾರ, ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಹಾಗೂ ಅಯ್ಯನಕಟ್ಟೆ ಜಾತ್ರೆಯ ಕುರಿತಾದ ಸಂಗ್ರಾಹಯೋಗ್ಯ ನೆನಪಿನ ಸಂಚಿಕೆ “ಅಯ್ಯನಕಟ್ಟೆ ಜಾತ್ರಾಂತರಂಗ” ಈ ವರ್ಷದ ಅಯ್ಯನಕಟ್ಟೆ ಜಾತ್ರೆಯ ಸಂದರ್ಭದಲ್ಲಿ ಅಧಿಕೃತವಾಗಿ ನಮ್ಮ ಕೈಸೇರಲಿದೆ. ಕೋವಿಡ್ ಕಾರಣದಿಂದ ಮುದ್ರಣಗೊಳ್ಳುವಾಗ ಸ್ವಲ್ಪ ತಡವಾಯಿತು. ನಾಡಿನ ಹೆಸರಾಂತ ಜನಪದ ಸಂಶೋಧಕರು ನೀಡಿದ ಮಾಹಿತಿಪೂರ್ಣ ಲೇಖನಗಳು, ಜಾತ್ರೋತ್ಸವದ ವರದಿ, ಜೀರ್ಣೋದ್ಧಾರ ಕಾರ್ಯಗಳು, ಶ್ರಮಸೇವೆ, ಬ್ರಹ್ಮಕಲಶೋತ್ಸವ, 2020 ರ ಅಯ್ಯನಕಟ್ಟೆ ಜಾತ್ರೆಯ ಚಿತ್ರಗಳನ್ನು ಒಳಗೊಂಡ ಸಂಚಿಕೆಯಿದು. ಜೀರ್ಣೋದ್ಧಾರ ಕಾರ್ಯಗಳಿಗಾಗಿ ₹1000/- ಕ್ಕೂ ಅಧಿಕ ಆರ್ಥಿಕ ನೆರವನ್ನಿತ್ತ ಹಾಗೇ ವಸ್ತುರೂಪದ ನೆರವನ್ನಿತ್ತವರ ವಿವರವೂ ಇದು ಒಳಗೊಂಡಿದೆ. ಸತೀಶ ಕಳಂಜರವರ ವಿನ್ಯಾಸದ ಆಕರ್ಷಕ ಮುಖಪುಟ ಹಾಗೂ ಕಿರಣ್ ಪ್ರಿಂಟರ್ಸ್ ನ ಅಕ್ಷಯ ಪದ್ಯಾಣರವರು ಒಳಪುಟ ವಿನ್ಯಾಸಗೊಳಿಸಿದ್ದಾರೆ. ಈ ಸಂಚಿಕೆಯನ್ನು ಹೊರತರುವಲ್ಲಿ ರಾಮಪ್ರಸಾದ್ ಕಾಂಚೋಡು ಬಹಳಷ್ಟು ಶ್ರಮವಹಿಸಿದ್ದಾರೆ. ಎಲ್ಲ ಲೇಖಕರಿಗೆ, ಜಾಹೀರಾತುದಾರರಿಗೆ ಸಂಪಾದಕ ಮಂಡಳಿಯ ಎಲ್ಲರಿಗೆ ಹಾರ್ದಿಕ ಧನ್ಯವಾದಗಳು. 146 ಪುಟಗಳನ್ನೊಳಗೊಂಡ ಈ ಸಂಚಿಕೆಯ ಮುಖ ಬೆಲೆ ₹ 200/- ಎಲ್ಲರ ಸಹಕಾರವನ್ನು ಕೋರುತ್ತಿದ್ದೇವೆ ಎಂದು ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಕಾರ್ಯದರ್ಶಿ ಪಿ.ಜಿ.ಎಸ್.ಎನ್ ಪ್ರಸಾದ್ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading