Ad Widget

ಹಲ್ಗುಜಿ ಬ್ರಹ್ಮಕಲಶೋತ್ಸವಕ್ಕೆ ಚಾಲನೆ – ಹಸಿರುವಾಣಿ ಮೆರವಣಿಗೆ

ನಾಲ್ಕೂರು ಗ್ರಾಮದ ಕಲ್ಲಾಜೆ ಹಲ್ಗುಜಿ ಶ್ರೀ ಶಿರಾಡಿ ದೈವ, ಅಗ್ನಿ ಗುಳಿಗ ಮತ್ತು ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರಗೊಂಡು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿ ನಿಂತಿದ್ದು, ಜ.13 ರಂದು ಅದ್ದೂರಿ ಹಸಿರುವಾಣಿ ಮೆರವಣಿಗೆ ನಡೆಯಿತು.
ಹಲ್ಗುಜಿ, ಅಂಜೇರಿ, ರಾಗಿಯಡ್ಕ, ಬನಕೋಡಿ, ಕಲ್ಲಾಜೆ, ಅಂಬೆಕಲ್ಲು, ಎರ್ದಡ್ಕ, ಕೊರಂಬಟ, ಕಾರ್ಜ, ಕಾಯರಮೊಗೆರು, ವಲ್ಪಾರೆ, ಕೊಂಬೊಟ್ಟು, ಮರಕತ, ಉಜಿರಡ್ಕ, ಉದೇರಿ, ಇಜಿನಡ್ಕ, ಪರಮಲೆ, ಪಡ್ರೆ, ಕುತ್ಯಾಳ, ಕಂದಡ್ಕ, ನೆಲ್ಲಿಪುಣಿ, ಹುಲಿಮನೆ, ಕಟ್ಟೆಕೋಡಿ, ಕುಳ್ಳಂಪಾಡಿ, ಅಮೆ, ಪಂಜಿಪಳ್ಳ, ಹಾಲೆಮಜಲು, ಗುಡ್ಡೆಮನೆ, ಉತ್ರಂಬೆ, ನಡುಗಲ್ಲು ಸೇರಿದಂತೆ ಹಲವು ಕಡೆಗಳಿಂದ ದೈವಸ್ಥಾನಕ್ಕೆ ಹಸಿರುವಾಣಿ ಹರಿದು ಬಂತು.
ಈ ಹಸಿರುವಾಣಿ ಮೆರವಣಿಗೆಯ ಸಂದರ್ಭದಲ್ಲಿ ಶ್ರೀ ಮಹಾವಿಷ್ಣು ಸಿಂಗಾರಿ ಮೇಳದವರ ಚೆಂಡೆವಾದನ, ಪೂರ್ಣಕುಂಭ ಸ್ವಾಗತ, ಭಜನಾ ತಂಡಗಳು, ಕೀಲು ಕುದುರೆ ಗಳೊಂದಿಗೆ ಅದ್ಧೂರಿಯಾಗಿ ಹಸಿರುವಾಣಿ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!