Ad Widget

ಅನಾರೋಗ್ಯದಿಂದ ಯುವತಿ ಮೃತ್ಯು

ಅಮರಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ರಮಣ ಗೌಡ ಇಟ್ಟಿಗುಂಡಿಯವರ ಪುತ್ರಿ ಕು.ಲಿಖಿತ (23) ಜ.12 ರಂದು ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಮೃತ ಯುವತಿ ಕಳೆದ ಕೆಲವು ಸಮಯಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅಸ್ವಸ್ಥಗೊಂಡಿದ್ದ ಅವಳಿಗೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಕೊಡಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ಅಜ್ಜ ಶೇಷಪ್ಪ, ಅಜ್ಜಿ ವೀರಮ್ಮ, ತಂದೆ ವೆಂಕಟ್ರಮಣ ಇಟ್ಟಿಗುಂಡಿ, ತಾಯಿ ಶ್ರೀಮತಿ ಲೀಲಾವತಿ,ಸಹೋದರಿ ಕು.ಗುಣಶ್ರೀ,ಸಹೋದರ ದರ್ಶನ್, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!