Ad Widget

ಪೆರುವಾಜೆ : ಗೊನೆ ಮುಹೂರ್ತ – ಜ.16ರಿಂದ ಜ.21ರವರೆಗೆ ಜಾತ್ರೆ

ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ಜ. 16ರಿಂದ ಜ.21ರವರೆಗೆ ಜಾತ್ರೆ ಮಹೋತ್ಸವ ನಡೆಯಲಿದೆ. ಆ ಪ್ರಯುಕ್ತ ಗೊನೆ ಮುಹೂರ್ತ ಜ.10 ರಂದು ನೆರವೇರಿತು. ಪೂಜಾ ಕಾರ್ಯಕ್ರಮವನ್ನು ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ನೆರೆವೆರಿಸಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಿ ಪದ್ಮನಾಭ ಶೆಟ್ಟಿ, ಸಮಿತಿ ಸದಸ್ಯರಾದ ಪಿ ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ದಾಮೋದರ ನಾಯ್ಕ, ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ ಶ್ರೀಮತಿ ಭಾಗ್ಯಲಕ್ಷ್ಮಿ, ಅಮರ್ ನಾಥ್ ಶೆಟ್ಟಿ ಪೆರುವಾಜೆಗುತ್ತು, ಪ್ರಮುಖರಾದ ಭೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ನಿರಂಜನ ಶೆಟ್ಟಿ ಪಾಲ್ತಾಡು, ರಾಮಕೃಷ್ಣ ರಾವ್ ಮಣಿಕ್ಕಾರ, ಸರ್ವೇಶ್ ಹೆಬ್ಬಾರ್, ವಿಠಲ ಶೆಟ್ಟಿ, ಕೇಪು ಗೌಡ, ನಾಗೇಶ್ ಪೂಜಾರಿ, ನಾರಾಯಣ ಮಡಿವಾಳ, ಹರೀಶ್ ಮಡಿವಾಳ, ಪ್ರಶಾಂತ್ ರೈ, ಕೋಟಿ ಪರವ, ನೇಮು ಪರವ, ನಾಗಪ್ಪ ಅಜಲಾಯ, ಪ್ರೀತಮ್ ರೈ ಪೆರುವಾಜೆ, ಜಗದೀಶ್ ರೈ ಪೆರುವಾಜೆ, ಚನಿಯ ಬಜ, ಅಂಗಾರ ಬಜ, ಕಿರಣ್ ಪೆರುವಾಜೆ, ಸಚಿನ್ , ಸನತ್ ಪೆರುವಾಜೆ, ರಾಜೇಶ್, ಶಿವಪ್ರಕಾಶ್ ಪೆರುವಾಜೆ, ದೇವಾಲಯದ ಸಿಬ್ಬಂದಿ ವಸಂತ ಆಚಾರ್ಯ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!