Ad Widget

ಮೇಕೆದಾಟು ಹೋರಾಟ ಬೆಂಬಲಿಸಿ ಸುಳ್ಯ ಕಾಂಗ್ರೆಸ್ ವತಿಯಿಂದ ಪಯಸ್ವಿನಿ ನದಿಗೆ ಭಾಗಿನ ಅರ್ಪಣೆ

ಮೇಕೆದಾಟು “ನೀರಿಗಾಗಿ ನಡಿಗೆ” ಪಾದಯಾತ್ರೆಗೆ ಸುಳ್ಯದ ಕಾಂಗ್ರೆಸ್ ಪ್ರಮುಖರಿಂದ ಸುಳ್ಯದ ಅರಂಬೂರು ಪಾಲಡ್ಕ ಪಯಸ್ವಿನಿ ನದಿಗೆ ಧವಸ ಧಾನ್ಯಗಳನ್ನು ಭಾಗಿನ ಅರ್ಪಣೆ ಮಾಡಿ 10 ದಿನಗಳ ಬೃಹತ್ ಪಾದಯಾತ್ರೆಗೆ ಶುಭ ಹಾರೈಸಲಾಯಿತು. ಈ ಸಂದರ್ಭ ಸುಳ್ಯ ನಗರ ಪಂಚಾಯತ್ ಶುದ್ಧ ಕುಡಿಯುವ ನೀರಿನ ಯೋಜನೆಯು ಆದಷ್ಟು ಶೀಘ್ರ ಕಾರ್ಯರೂಪಕ್ಕೆ ಬರಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಜಯಪ್ರಕಾಶ್ ರೈ ಎನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿಸಿ ಜಯರಾಮ್, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂಶುದ್ದಿನ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ ಎಂ ಜೆ,ಇಂಟಕ್ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಶಾಫಿ ಕುತ್ತಮೊಟ್ಟೆ, ಮಹಮ್ಮದ್ ಕುಂಹಿ ಗೂನಡ್ಕ,ಬ್ಲಾಕ್ ಮಾಧ್ಯಮ ಸಂಯೋಜಕ ಭವಾನಿಶಂಕರ್ ಕಲ್ಮಡ್ಕ, ಸುರೇಶ್ ಎಂ ಹೆಚ್, ಧೀರಾ ಕ್ರಾಸ್ತ, ಜೂಲಿಯಾನ ಕ್ರಾಸ್ತಾ, ಬಾಪು ಸಾಹೇಬ್, ರಾಧಾಕೃಷ್ಣ ಪರಿವಾರಕಾನ, ಅನಿಲ್ ಬಳ್ಳಡ್ಕ, ಗಣೇಶ್ ಬೀರಮಂಗಲ, ರವಿಚಂದ್ರ ತೋಡಿಕಾನ, ಕೀರ್ತನ್ ಕೊಡಪಾಲ, ಶವಾದ್ ಗೂನಡ್ಕ, ರಾಬರ್ಟ್ ಡಿಸೋಜ,ರಾಜು ಪಂಡಿತ್, ಗಂಗಾಧರ್ ಮೇನಾಲ, ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಗೋಕುಲ್ ದಾಸ್ ಸಂಯೋಜಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!