Ad Widget

ನ.24 : ರವಿ ಕಕ್ಕೆಪದವು ಅವರ ಬಗ್ಗೆ ಕೃತಿ ಬಿಡುಗಡೆ ಹಾಗೂ ಹರೇಕಳ ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮ

ರಾಷ್ಟ್ರ ಪ್ರಶಸ್ತಿ ವಿಜೇತ ರವಿ ಕಕ್ಕೆಪದವು ಅವರ ಕುರಿತ ಡಾ.ರಾಜೇಶ್ವರಿ ಗೌತಮ್ ಬರೆದ 'ಬೆಂಕಿಯಲ್ಲಿ ಅರಳಿದ ಹೂವು' ಎಂಬ ಕೃತಿ ಬಿಡುಗಡೆ ಹಾಗೂ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರಿಗೆ ಅಭಿನಂದನಾ ಕಾರ್ಯಕ್ರಮ ನ.24 ರಂದು ಸುಬ್ರಹ್ಮಣ್ಯದಲ್ಲಿ ನಡೆಯಲಿದೆ. ಜೇಸಿಐ ಸುಬ್ರಹ್ಮಣ್ಯ ಕುಕ್ಕೆ ಶ್ರೀ ವತಿಯಿಂದ ವಲ್ಲೀಶ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರು...

ಗುತ್ತಿಗಾರು : ಚಿಣ್ಣರ ಮನೆ ಉದ್ಘಾಟನೆ

ಗುತ್ತಿಗಾರಿನ ಸ್ವಾತಿ ಸಂಕೀರ್ಣದಲ್ಲಿ ನ.22 ರಂದು ಚಿಕ್ಕ ಮಕ್ಕಳ ಆರೈಕೆ ಕೇಂದ್ರ "ಚಿಣ್ಣರ ಮನೆ" ಗಣಪತಿ ಹವನದೊಂದಿಗೆ ಶುಭಾರಂಭಗೊಂಡಿತು.ಗಣಪತಿ ಹೋಮ ವನ್ನು ವೇದಮೂರ್ತಿ ಶಿವಸುಬ್ರಹ್ಮಣ್ಯ ಜೋಯಿಸ ನೆರವೇರಿಸಿದರು.ಸ್ವಾತಿ ಕೃಷಿ ಲಿಂಕ್ಸ್ ನ ಎಂ ಸುಬ್ರಹ್ಮಣ್ಯ ಭಟ್ ಮತ್ತು ಬಾಲಸುಬ್ರಹ್ಮಣ್ಯ ಭಟ್, ಸಂಜೀವಿನಿ ಸಂಘದ ಗುತ್ತಿಗಾರು ಪ್ರೇರಖಿ ಮಿತ್ರಕುಮಾರಿ ಚಿಕ್ಮುಳಿ, ದಿವ್ಯ ಚತ್ರಪ್ಪಾಡಿ, ತಿರುಮಲೇಶ್ವರ ಭಟ್,ಮಿಥುನ್ ತುಪ್ಪದಮನೆ,...
Ad Widget

ಕಾಂಗ್ರೆಸ್ ಮುಖಂಡರಿಂದ ವಿಧಾನ ಪರಿಷತ್ ಅಭ್ಯರ್ಥಿ ಮಂಜುನಾಥ ಭಂಡಾರಿ ಭೇಟಿ

ವಿಧಾನಪರಿಷತ್ ಚುನಾವಣೆಗೆ ದ.ಕ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಮಂಜುನಾಥ ಭಂಡಾರಿ ಅವರನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ನೇತೃತ್ವದಲ್ಲಿ ನ.23 ರಂದು ಭೇಟಿ ಮಾಡಿ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್...

ಗಟ್ಟಿಗಾರು : ಶಾಲಾ ಬಳಿಯ ರಸ್ತೆ ದುರಸ್ತಿ ಪಡಿಸಲು ಗ್ರಾಮಸ್ಥರ ಒತ್ತಾಯ

ಜೀರ್ಮುಕ್ಕಿ ಬೊಮ್ಮಾರು ರಸ್ತೆಯಲ್ಲಿ ಗಟ್ಟಿಗಾರು ಶಾಲೆಯ ಹತ್ತಿರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. 20 ಮೀಟರ್ ನಷ್ಟು ರಸ್ತೆ ಕೆಸರುಮಯವಾಗಿದೆ. ಶಾಲಾ ಮಕ್ಕಳಿಗೆ ನಡೆದಾಡಲು ಕಷ್ಟವಾಗಿದೆ. ದ್ವಿಚಕ್ರ ವಾಹನ ಸವಾರರಂತು ಹರಸಾಹಸಪಡುವಂತಾಗಿದೆ. ಈ ಬಗ್ಗೆ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಕೂಡಲೇ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನ.26-27 : ಎಲಿಮಲೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ ಹಾಗೂ ಅಂತರ ರಾಜ್ಯ ಸಾಂಸ್ಕ್ರತಿಕ ವಿನಿಮಯ ಕಾರ್ಯಕ್ರಮ

ಸರಕಾರಿ ಪ್ರೌಢ ಶಾಲೆ ಎಲಿಮಲೆ , ಶಾಲಾಭಿವೃದ್ದಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಸಿಸಿಆರ್ ಟಿ ಬಳಗ ಇದರ ಆಶ್ರಯದಲ್ಲಿ ದಿನಾಂಕ ನವಂಬರ್ 26, 2021 ಶುಕ್ರವಾರದಂದು ತಾಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ, ಪ್ರದರ್ಶನ, ಇನ್ಸೈರ್ ಅವಾರ್ಡ್ ನಾಮನಿರ್ದೇಶಿತ ವಿದ್ಯಾರ್ಥಿಗಳಿಗೆ ಹಾಗೂ ನೋಡಲ್ ಶಿಕ್ಷಕರಿಗೆ ವಿಜ್ಞಾನ ಮಾದರಿ ತಯಾರಿ ಬಗ್ಗೆ ತರಬೇತಿ ನಡೆಯಲಿದೆ....

ಸುಳ್ಯ : “ಮಂಡೆಬಿಸಿ” ಕಾಮಿಡಿ ಕಿರುಚಿತ್ರ ಬಿಡುಗಡೆ

ಸುಳ್ಯ ಬಾಯ್ಸ್ ಅರ್ಪಿಸುವ "ಮಂಡೆ ಬಿಸಿ" ಕನ್ನಡ ಕಾಮಿಡಿ ಕಿರುಚಿತ್ರ ಬಿಡುಗಡೆಗೊಂಡಿದೆ. https://youtu.be/gP6rNUoO8qo

ಜಯನಗರ : ಕಾಡಗುಡ್ಡೆಡ್ ಕಲ್ಲ್ ಕೊರಗಜ್ಜನ ಭಕ್ತಿ ಸುಗಿಪು ಬಿಡುಗಡೆ

ಸಂಕೇಶ ಪ್ರೊಡಕ್ಷನ್ ನಿರ್ಮಾಣದ ಕಾಡಗುಡ್ಡೆಡ್ ಕಲ್ಲ್ ಎಂಬ ಕೊರಗಜ್ಜನ ತುಳು ಭಕ್ತಿಗೀತೆಯು ನ.22 ರಂದು ಸುಳ್ಯ ಜಯನಗರದಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವಸ್ಥಾನ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಬಿಡುಗಡೆಗೊಂಡಿತು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಕೇಶವ ಮಾಸ್ತರ್ ಹೊಸಗದ್ದೆ, ನಂದರಾಜ ಸಂಕೇಶ , ದೈವ ಪಾತ್ರಿ ಉಮೇಶ್ ಕುದ್ಪಾಜೆ ಹಾಗೂ ಊರ...

ರೋಟರಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯದ ಶ್ರಾವ್ಯ.ಎಸ್.ವಿ ಪ್ರಥಮ

ಪುತ್ತೂರಿನ ಫಿಲೊಮಿನಾ ಕಾಲೇಜಿನ ಸಿಲ್ವರ್ ಜುಬಿಲಿ ಹಾಲ್ ನಲ್ಲಿ ನಡೆದ ರೋಟರಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ 14ರ ವಯೋಮಾನದ ಕೆಳಗಿನ ವಿದ್ಯಾರ್ಥಿಗಳ ಗಾಯನ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಭಾಗವಹಿಸಿದ ಶ್ರಾವ್ಯ.ಎಸ್.ವಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರಾದ ಎಚ್ ಎಲ್ ವೆಂಕಟೇಶ್ ಮತ್ತು ಶ್ರೀಮತಿ ಜಾನಕಿ...

ಹರಿಹರ ಪಲ್ಲತ್ತಡ್ಕ : ಗ್ರಾಮ ಪಂಚಾಯತ್ ನಲ್ಲಿ ಉದ್ಯಾನವನ ನಿರ್ಮಾಣ

ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ನಲ್ಲಿ "ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ" ಯೋಜನೆಯ ಅಡಿಯಲ್ಲಿ "ಗ್ರಾಮೀಣ ಉದ್ಯಾನವನ" ಎಂಬ ಪರಿಕಲ್ಪನೆಯಲ್ಲಿ ಗ್ರಾಮಪಂಚಾಯತ್ ವಠಾರದಲ್ಲಿ ಉದ್ಯಾನವನ ನಿರ್ಮಾಣಗೊಂಡಿದೆ.ಇಲ್ಲಿ ಹಚ್ಚ ಹಸಿರಿನ ಹುಲ್ಲು, ವಿವಿಧ ಜಾತಿಯ ಹೂವಿನ ಗಿಡಗಳನ್ನು ನೆಡಲಾಗಿದ್ದು, ಕೆಲವು ಗಿಡಗಳಿಗೆ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಉದ್ಯಾನವನಕ್ಕೆ ನೀರು ಹಾಯಿಸಲು ನೀರಿನ ವ್ಯವಸ್ಥೆ ಇದೆ. ನಡೆದಾಡಲು...

ರಂಗಮನೆಯಲ್ಲಿ ಹಿಮ್ಮೇಳ ತರಗತಿ ಆರಂಭ

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುವ ಯಕ್ಷಗಾನ ಹಿಮ್ಮೇಳ ತರಗತಿಯನ್ನುಹಿರಿಯ ಕಲಾವಿದರಾದ ಸುಜನಾ ಸುಳ್ಯರವರು ಉದ್ಘಾಟಿಸಿದರು.ಗುರುಗಳಾದ ವಳಕುಂಜ ಸುಬ್ರಹ್ಮಣ್ಯ ಮತ್ತು ಕೇಂದ್ರದ ಸಂಚಾಲಕರಾದ ಡಾ. ಸುಂದರ ಕೇನಾಜೆ ಉಪಸ್ಥಿತರಿದ್ದರು.ತರಗತಿಯು ಪ್ರತಿ ಭಾನುವಾರ ಪೂರ್ವಾಹ್ನ 9.00 ರಿಂದ ಅಪರಾಹ್ನ 1.00 ರ ವರೆಗೆ ನಡೆಯಲಿದ್ದು ಆಸಕ್ತರು ಗುರು...
Loading posts...

All posts loaded

No more posts

error: Content is protected !!