- Saturday
- May 17th, 2025

ಯುಗಪುರುಷ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾನುಗ್ರಹದೊಂದಿಗೆ ಆದರಣೀಯ ಡಿ.ಹರ್ಷೇಂದ್ರ ಕುಮಾರ್ ಅವರ ಶುಭಾಶಯಗಳೊಂದಿಗೆ ಯಕ್ಷಯೋಧ ಮಿತ್ರವೃಂದ ಕೋಟೆಮುಂಡುಗಾರು ವತಿಯಿಂದ ಯೋಧನಮನ ಕಾರ್ಯಕ್ರಮ ನ.01ರಂದು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ಜರುಗಿತು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಎಂ. ಕೂಸಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಭಾಕಾರ್ಯಕ್ರಮ ಮುಖ್ಯ ಅತಿಥಿ ಅಭ್ಯಾಗತರಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು....

ಅಮರ ಸುದ್ದಿ ಕಚೇರಿಯಲ್ಲಿ ನ.1.ರಂದು ಗಣಹೋಮ ನಡೆಯಿತು. ಈ ಸಂದರ್ಭ ಪ್ರಧಾನ ಸಂಪಾದಕರಾದ ಮುರಳೀಧರ ಅಡ್ಡನಪಾರೆ ಹಾಗೂ ಕುಟುಂಬಸ್ಥರು, ಹಿರಿಯ ವರದಿಗಾರ ಪದ್ಮನಾಭ ಅರಂಬೂರು, ಕಾರ್ಯನಿರ್ವಾಹ ಸಂಪಾದಕ ಸುದೀಪ್ ರಾಜ್ ಕೋಟೆಮೂಲೆ, ಕಚೇರಿ ನಿರ್ವಾಹಕ ಕೀರ್ತನ್ ಕುಕ್ಕುಡೇಲು, ವರದಿಗಾರರಾದ ಜಗದೀಶ್ ಮುಂಡುಗಾರು, ಲಿಪಿ ಸಂಯೋಜಕಿ ಸೌಮ್ಯ ಬಳ್ಳಕ್ಕಾನ ಹಾಗೂ ಮತ್ತಿತರರು ಉಪಸ್ಥಿತರಿದ್ದರು.