Ad Widget

ಕೊಡಿಯಾಲ ಗ್ರಾಮ ಪಂಚಾಯತಿಯಲ್ಲಿ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ

ಕೊಡಿಯಾಲ ಗ್ರಾಮ ಪಂಚಾಯತಿಯಲ್ಲಿ ಸುಮಾರು 9 ವರ್ಷಗಳ ಕಾಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಬಾಳಿಲ ಗ್ರಾಮ ಪಂಚಾಯತಿಗೆ ವರ್ಗಾವಣೆಗೊಂಡಿರುವ ಹೂವಪ್ಪ ಗೌಡ ರವರನ್ನು ಕೊಡಿಯಾಲ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರಾದ ಪ್ರದೀಪ್ ರೈ ಅಜ್ರಂಗಳ ಇವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಿ ಬೀಳ್ಗೊಡಲಾಯಿತು. ಈ ಸಂದರ್ಭದಲ್ಲಿ ಕೊಡಿಯಾಲ ಶಾಲಾ ಮುಖ್ಯ ಶಿಕ್ಷಕ ಸಿದ್ದರಾಜು, ಕೊಡಿಯಾಲ ಗ್ರಾ.ಪಂ. ಉಪಾಧ್ಯಕ್ಷ...

ಪಂಜ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರಭಾಕರ ಕಿರಿಭಾಗ ನಿವೃತ್ತಿ

ಪಂಜ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ ರವರು ಸೆ.30ರಂದು ತಮ್ಮ ಸೇವೆಯಿಂದ ನಿವೃತ್ತರಾಗಿದ್ದಾರೆ. ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಕಿರಿಭಾಗ ಶಿವಪ್ಪ ಮಾಸ್ತರ್ ಮತ್ತು ಅಮ್ಮಣಿ ದಂಪತಿಗಳ ಪುತ್ರರಾದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಾಳುಗೋಡು, ಪಂಜ, ಸುಬ್ರಹ್ಮಣ್ಯದಲ್ಲಿ ಪಡೆದು, ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ...
Ad Widget

ಎಸ್ ಎಸ್ ಪಿ ಯು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಸಾವಿತ್ರಿ ಕೆ. ನಿವೃತ್ತಿ

ಶ್ರೀ ಸುಬ್ರಹ್ಮಣ್ಯೇಶ್ವರ ಪಿಯು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಸಾವಿತ್ರಿ ಕೆ. ರವರು ಸೆ.30ರಂದು ಸೇವಾ ನಿವೃತ್ತಿ ಹೊಂದಿದರು. 24.10.1986 ರಲ್ಲಿ ವಾಣಿಜ್ಯ ವಿಭಾಗ ಆರಂಭಗೊಂಡಾಗ ಇಲ್ಲಿಗೆ ಉಪನ್ಯಾಸಕರಾಗಿ ಸೇರ್ಪಡೆಯಾದ ಇವರು ಸುದೀರ್ಘ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2016 ಡಿ.03 ರಿಂದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತಿದ್ದಾರೆ. ದ.ಕ. ಜಿಲ್ಲಾ ಪಿಯು ಪ್ರಿನ್ಸಿಪಾಲ್ ಅಸೋಸಿಯೇಷನ್ ಸುಳ್ಯ...

ಐವರ್ನಾಡು ಪಾಲೆಪ್ಪಾಡಿ ಪೆರ್ಲಂಪಾಡಿ ರಸ್ತೆ ದುರಾವಸ್ಥೆ ಬಗ್ಗೆ ನಾಗರಿಕರ ಆಕ್ರೋಶ – ಪಿಡಬ್ಲ್ಯೂಡಿ ರಸ್ತೆಯಾಗಿ ಪರಿವರ್ತನೆಯಾಗಿದ್ದು ಅಭಿವೃದ್ಧಿಯಾಗಲಿದೆ – ಬಾಲಕೃಷ್ಣ ಕೀಲಾಡಿ

ಐವರ್ನಾಡು ಮುಚ್ಚಿನಡ್ಕ ಪಾಲೆಪ್ಪಾಡಿ-ಪಾಂಬಾರು-ಅಮಲ-ಪೆರ್ಲಂಪ್ಪಾಡಿ ಮೂಲಕ ಪುತ್ತೂರಿಗೆ ಹೋಗುವ ರಸ್ತೆ ಸುಮಾರು10-12 ವರ್ಷಗಳಿಂದ ಮರು ಡಾಮರೀಕರಣ ಆಗದೇ ಅವ್ಯವಸ್ಥೆಯಿಂದ ಕೂಡಿದ್ದು ಜನ ಸಂಚಾರ ಮಾಡಲು ಹರಸಾಹಸ ಪಡುವಂತಾಗಿದೆ. ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ . ಮೋರಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣದಿಂದ ಮಳೆಗಾಲದಲ್ಲಿ ನೀರೆಲ್ಲಾ ರಸ್ತೆಯಲ್ಲಿ ಹರಿಯುವಂತಾಗಿದೆ . ಬೀದಿ ದೀಪದ ವ್ಯವಸ್ಥೆ ಇಲ್ಲದೇ ರಾತ್ರಿಯ ವೇಳೆ...

ಗುತ್ತಿಗಾರು : ಶ್ರೀ ಮಂಜುಶ್ರೀ ಜನರಲ್ ಸ್ಟೋರ್ ಶುಭಾರಂಭ

ಗುತ್ತಿಗಾರಿನ ಕೆಳಗಿನ ಪೇಟೆಯಲ್ಲಿರುವ ಎಸ್ ಎಂ ಎಸ್ ಜಿ ಕಾಂಪ್ಲೆಕ್ಸ್ ನಲ್ಲಿ ಮೋನಪ್ಪ ಕಾಜಿಮಡ್ಕ ( ಮೆಟ್ಟಿನಡ್ಕ) ಮಾಲಕತ್ವದ ಶ್ರೀ ಮಂಜುಶ್ರೀ ಜನರಲ್ ಸ್ಟೋರ್ ಸೆ.27 ರಂದು ಶುಭಾರಂಭಗೊಂಡಿತು. ಗ್ರಾ.ಪಂ .ಮಾಜಿ ಅಧ್ಯಕ್ಷ, ಕಾಂಪ್ಲೆಕ್ಸ್ ಮಾಲಕರಾದ ವೆಂಕಟ್ ವಳಲಂಬೆ ದೀಪ ಬೆಳಗಿ ಉದ್ಘಾಟಿಸಿದರು. ಇಲ್ಲಿ ಉತ್ತಮ ಗುಣಮಟ್ಟದ ದಿನಸಿ ಸಾಮಾಗ್ರಿಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ....

ಕನಕಮಜಲು : ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

ವ್ಯಕ್ತಿಯೊಬ್ಬರು ರಾತ್ರಿ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕನಕಮಜಲು ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಗ್ರಾಮದ ಪೆರುಂಬಾರು ನಿವಾಸಿ ಜಯರಾಮ ಗೌಡ(52) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಜಯರಾಮ ಗೌಡರಿಗೆ ಓಡಾಡುವ ಅಭ್ಯಾಸವಿದ್ದು, ನಿನ್ನೆ ತಡರಾತ್ರಿಯೂ ಮನೆಯಿಂದ ಹೊರಟು ಹೋಗಿದ್ದರೆನ್ನಲಾಗಿದೆ. ಬಳಿಕ ಮನೆಗೆ ಬಾರದಿದ್ದ ಅವರನ್ನು ಇಂದು ಮುಂಜಾನೆ ಹುಡುಕಾಟ ನಡೆಸಿದ್ದು,...

ಗುತ್ತಿಗಾರು : ನೇಸರ ಪ್ರಗತಿ ಬಂಧು ಸಂಘ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ( ಟ್ರಸ್ಟ್ ) ಸುಳ್ಯ ತಾಲೂಕು ಗುತ್ತಿಗಾರು ವಲಯದ ಗುತ್ತಿಗಾರು ಒಕ್ಕೂಟದ ನೇಸರ ಹೆಸರಿನ ಪ್ರಗತಿ ಬಂಧು ಸಂಘದ ಉದ್ಘಾಟನೆ ಸೆ.29 ರಂದು ನಡೆಯಿತು. ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ ವಳಲಂಬೆ ಯವರು ದೀಪ ಬೆಳಗಿ ಸಂಘವನ್ನು...

ಬೆಳ್ಳಾರೆಯಲ್ಲಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ- ಸ್ಥಳೀಯರಿಂದ ರಕ್ಷಣೆ

ಬೆಳ್ಳಾರೆಯಲ್ಲಿ ೨೨ ರ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ. ಸೆ.೨೮ರಂದು ಸಂಜೆ 7 ಗಂಟೆ ಸುಮಾರಿಗೆ ಗಣೇಶ ಎಂಬಾತ ಕೆಲಸ ಮುಗಿಸಿ ಬಸ್ ನಲ್ಲಿ ಬಂದ ಯುವತಿ ಯ ಮೇಲೆ ಬಸ್ ನಿಲ್ದಾಣದಿಂದ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಸಂದರ್ಭ ಆಕೆಯ ಮೈ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಯುವತಿಯನ್ನು ಏಕಾಏಕಿ...

ಪೆರುವಾಜೆ: ಬಿಜೆಪಿಯಿಂದ ನಾಮಫಲಕ ಅಳವಡಿಕೆ ಕಾರ್ಯಕ್ರಮ

ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ. ಪಿ. ನಡ್ಡರವರ ಸೂಚನೆಯಂತೆ ಭಾರತೀಯ ಜನತಾ ಪಾರ್ಟಿ ಸುಳ್ಯ ಇದರ ವತಿಯಿಂದ ಪೆರುವಾಜೆ ಗ್ರಾಮದ ಬೂತ್ ಸಂಖ್ಯೆ 76 ರ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ರಮೇಶ್ ನಾಯ್ಕ ಮಠತ್ತಡ್ಕ ರವರ ಮನೆಯಲ್ಲಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿಯವರಿಂದ ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಸೆ. 28 ರಂದು...

ಐವರ್ನಾಡು : ಮಕ್ಕಳ ಮಾನಸಿಕ, ದೈಹಿಕ ಭದ್ರತೆ ಹಾಗೂ ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಾಗಾರ

ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇಲ್ಲಿ ಮಕ್ಕಳ ಮಾನಸಿಕ ಹಾಗೂ ದೈಹಿಕ ಭದ್ರತೆ ಹಾಗೂ ಸುರಕ್ಷತೆಯ ಬಗ್ಗೆ ಮಾಹಿತಿ ಸೆ.29ರಂದು ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರದಲ್ಲಿ ಮಾಹಿತಿಯನ್ನು ಸ್ಥಳೀಯ ವೈದ್ಯರಾದ ಕುಮಾರಿ ಪ್ರಿಯಾಂಕ ನಾಟಿಕೇರಿ ಅವರು ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಮಹಮದ್ ಇಸಾಕ್ ಅವರು ಮತ್ತು ಆಂಗ್ಲ ಭಾಷಾ ಉಪನ್ಯಾಸಕರಾದ ಶ್ರೀಯುತ ಚಾರ್ಲ್ಸ್ ಅವರು...
Loading posts...

All posts loaded

No more posts

error: Content is protected !!