Ad Widget

ಅಮರಮುಡ್ನೂರು : 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ

ಅಮರಮುಡ್ನೂರು ಗ್ರಾಮ ಪಂಚಾಯತ್, ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ, ಕುಕ್ಕುಜಡ್ಕ ಪ್ರಾಥಮಿಕ ಶಾಲೆ, ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಮಹಿಳಾ ಮಂಡಲ ಕುಕ್ಕುಜಡ್ಕ ಇವುಗಳ ಜಂಟಿ ಆಶ್ರಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಅಮೃತ ಮಹೊತ್ಸವವನ್ನು ಚೊಕ್ಕಾಡಿ ವಿದ್ಯಾಸಂಸ್ಥೆಯ ಆವರಣದಲ್ಲಿ ಆಚರಿಸಲಾಯಿತು. ಕುಕ್ಕುಜಡ್ಕ ಅಶ್ವತ್ಥ ಕಟ್ಟೆಯ ಬಳಿಯಿಂದ ಚೊಕ್ಕಾಡಿ ವಿದ್ಯಾಸಂಸ್ಥೆಯವರೆಗೆ ಪಥ ಸಂಚಲನವನ್ನು ಮಾಡಲಾಯಿತು....

ಕಳಂಜ : 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ – ಯೋಧರಿಗೆ ಗೌರವಾರ್ಪಣೆ

ಕಳಂಜ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ ಆ.15 ರಂದು ಕೋಟೆಮುಂಡುಗಾರು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾಂಗಣದಲ್ಲಿ ಜರುಗಿತು. ಕಳಂಜ ಬಾಳಿಲ ಸಹಕಾರಿ ಸಂಘದ ಅಧ್ಯಕ್ಷ ಎಂ.ಕೂಸಪ್ಪ ಗೌಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷ...
Ad Widget

“ಸ್ವಾತಂತ್ರ್ಯ ಸಮರದಲ್ಲಿ ನಮ್ಮವರು”ವಿಶೇಷ ಉಪನ್ಯಾಸ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಹಮ್ಮಿಕೊಂಡಿರುವ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರು "ಸ್ವಾತಂತ್ರ್ಯ ಸಮರದಲ್ಲಿ ನಮ್ಮವರು" ಎಂಬ ವಿಷಯದಲ್ಲಿ ಉಪನ್ಯಾಸವನ್ನು ನೀಡಲಿದ್ದಾರೆ.ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗುವ ಈ ಕಾರ್ಯಕ್ರಮವನ್ನು ಕೊರೋನಾ ಹಿನ್ನೆಲೆಯಿಂದಾಗಿ ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜಿನ ಯೂಟ್ಯೂಬ್ ನೇರಪ್ರಸಾರ ಹಾಗೂ ಗೂಗಲ್...

ಯೇನೆಕಲ್ಲು : ಅಖಂಡ ಭಾರತ ಸಂಕಲ್ಪ ದಿನ

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀರಾಮ ಶಾಖೆ ಯೇನೆಕಲ್ಲು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆ ಮಾಡಲಾಯಿತು.ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಊರಿನ ಹಿರಿಯರಾದ ಶೂರಪ್ಪ ಬಾಲಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಸೈನಿಕರು ಅವರ ಸೇವಾ ವೃತ್ತಿಯ ಬಗ್ಗೆ ಮತ್ತು ವಿಶ್ವಹಿಂದೂ ಪರಿಷತ್ತಿನ ಕಾರ್ಯವೈಖರಿ ಬಗ್ಗೆ ಮಾತಾಡಿದರು. ನಂತರ ದೇಶ ಸೇವೆ ಮಾಡಿದ...

ಪೆರಾಜೆ : ಶ್ರೀ ವನದುರ್ಗಾ ಮತ್ತು ಪರಿವಾರ ದೈವಸ್ಥಾನ ದಲ್ಲಿ ನಾಗರಪಂಚಮಿ ಆಚರಣೆ

ಕಲ್ಚರ್ಪೆ ಸಿರಿಕುರಲ್ ನಗರದಲ್ಲಿರುವ ವನದುರ್ಗಾ ಮತ್ತು ಪರಿವಾರ ದೈವಗಳ ದೈವಸ್ಥಾನದ ನಾಗನ ಸಾನಿಧ್ಯದಲ್ಲಿ ನಾಗರಪಂಚಮಿ ಪ್ರಯುಕ್ತ ಪರಿಸರದ ಭಕ್ತಾದಿಗಳಿಂದ ನಾಗರಪಂಚಮಿ ಆಚರಣೆ ನಡೆಯಿತು. ನಾಗರಪಂಚಮಿ ಪ್ರಯುಕ್ತ ಅರ್ಚಕರಾದ ಶ್ರೀವರ ಭಟ್ ರವರ ನೇತೃತ್ವದಲ್ಲಿ ನಾಗನಿಗೆ ಕ್ಷೀರಾಭಿಷೇಕ, ಎಳನೀರಿನ ಅಭಿಷೇಕ ಮತ್ತು ತಂಬಿಲ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಗೋಕುಲ್ ದಾಸ್,...

ಅಮರ ಸ್ವಾತಂತ್ರ್ಯ ಹೋರಾಟದ ಸ್ಮಾರಕ ನಿರ್ಮಿಸಲು ಕಟಿಬದ್ಧ: ಸಚಿವ ಅಂಗಾರ

ಭಾರತ ಸ್ವಾತಂತ್ರ್ಯ ಪಡೆಯುವುದಕ್ಕೆ ಅದೆಷ್ಟೋ ಹಿಂದೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಈ ಜಿಲ್ಲೆಗೆ 13 ದಿನಗಳ ಸ್ವಾತಂತ್ರ್ಯದ ಸವಿಯನ್ನು ನೀಡಿದ ಕೀರ್ತಿ ನಮ್ಮ ಸುಳ್ಯದ ಹಿರಿಯರಿಗೆ ಸಲ್ಲುತ್ತದೆ ಎನ್ನುವುದು ನಮಗೆ ಹೆಮ್ಮೆಯ ವಿಚಾರ. ಅವರ ತ್ಯಾಗ, ಬಲಿದಾನಗಳನ್ನು ಶಾಶ್ವತವಾಗಿ ನೆನಪಿಸುವುದಕ್ಕಾಗಿ ಬೆಳ್ಳಾರೆಯಲ್ಲಿ ಮತ್ತು ಉಬರಡ್ಕದ ಕೆದಂಬಾಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಸ್ಮಾರಕಗಳನ್ನು ನಿರ್ಮಿಸಲು ಕಟಿಬದ್ಧನಾಗಿದ್ದೇನೆ...

ಪ್ರಬಂಧ ಸ್ಪರ್ಧೆ: ಕು|ಸಂಜನಾ.ಬಿ.ಎಸ್ ಪ್ರಥಮ ಸ್ಥಾನ

2021 ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು ಆಯೋಜಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕು|ಸಂಜನಾ.ಬಿ.ಎಸ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಸುಳ್ಯ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸಂಜೀವ ಗೌಡ.ಬಿ ಹಾಗೂ ಶಿಕ್ಷಕಿ ಶ್ರೀಮತಿ ನಿರ್ಮಲಾರವರ ಪುತ್ರಿ.

ಸುಬ್ರಹ್ಮಣ್ಯ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆ

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆಯು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಸಚಿವ ಎಸ್.ಅಂಗಾರ ಅವರು ಅಧಿಕಾರಿಗಳಿಗೆ ಸೂಚಿಸಿದಂತೆ ಸರ್ವೇ ಇಲಾಖೆ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ಜಂಟಿ ಸರ್ವೇ ಶೀಘ್ರವಾಗಿ ನಡೆಸಬೇಕು ಹಾಗೂ ಕಡಬ ತಾಲೂಕಿನ ಅಕ್ರಮ ಸಕ್ರಮ ಕಡತಗಳನ್ನು...

ಎನ್ ಎಂ ಸಿ: ಯುವ ರೆಡ್ ಕ್ರಾಸ್ ಘಟಕದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಕ್ತದಾನ ಶಿಬಿರ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ಸಹಯೋಗದೊಂದಿಗೆ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಪ್ರಯುಕ್ತರಕ್ತದಾನ ಶಿಬಿರವು 15- 8-- 2021ರಂದು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ ಇಲ್ಲಿಯ ರಕ್ತನಿಧಿ ಕೇಂದ್ರದಲ್ಲಿ ನಡೆಯಲಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ (ರಿ)...

ಪರ್ನೋಜಿ ಕೃಷ್ಣಪ್ಪ ಗೌಡ ನಿಧನ

ಶತಾಯುಷಿ ನಾರ್ಕೊಡು ಕೃಷ್ಣಪ್ಪ ಗೌಡ ನಿಧನತೊಡಿಕಾನ ಗ್ರಾಮದ ಪರ್ನೋಜಿ ನಾರ್ಕೋಡು ಮನೆಯ ಶತಾಯುಷಿ ಕೃಷ್ಣಪ್ಪ ಗೌಡ (106) ಸ್ವಗ್ರಹದಲ್ಲಿ ಶುಕ್ರವಾರ ನಿಧನರಾದರು.ಪುತ್ರರಾದ ಸುಂದರ ಗೌಡ, ಕೂಸಪ್ಪ ಗೌಡ, ಚಂಗಪ್ಪ ಗೌಡ, ಗಣಪಯ್ಯ ಗೌಡ, ಪುತ್ರಿ ಭಾಗೀರಥಿ ಹಾಗೂ ಸೊಸೆಯಂದಿರನ್ನು, ಮೊಮ್ಮಕ್ಕಳನ್ನು, ಮರಿಮೊಮ್ಮಕ್ಕಳನ್ನು ಕುಟುಂಬಸ್ಥರನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!