Ad Widget

ಚಂದ್ರಕಾಂತ್ ಎಂ.ಆರ್. ರಿಗೆ ಉಪ ತಹಶೀಲ್ದಾರ್ ಆಗಿ ಪದೋನ್ನತಿ – ವರ್ಗಾವಣೆ

ಸುಳ್ಯ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಚಂದ್ರಕಾಂತ್ ಎಂ.ಆರ್. ಇವರಿಗೆ ಉಪತಹಶೀಲ್ದಾರ್ ಆಗಿ ಬಡ್ತಿ ದೊರೆತಿದ್ದು ಅವರು ಪಂಜ ನಾಡಕಚೇರಿಗೆ ವರ್ಗಾವಣೆಗೊಂಡಿದ್ದಾರೆ.
2001ರಲ್ಲಿ ಗ್ರಾಮ ಕರಣಿಕರ ಸರಕಾರಿ ಸೇವೆಗೆ ಸೇರಿದ ಇವರು ಆರಂಭದಲ್ಲಿ ಕಲ್ಮಡ್ಕ ಗ್ರಾಮ ಸಹಾಯಕರಾಗಿ, ಆ ಬಳಿಕ ಗುತ್ತಿಗಾರು, ಎಡಮಂಗಲ, ಕೊಲ್ಲಮೊಗ್ರ, ಮಂಡೆಕೋಲು, ಕನಕಮಜಲು, ನಾಲ್ಕೂರು, ಸುಳ್ಯ ಕಸಬಾ ಗ್ರಾಮಗಳಲ್ಲಿ ಸೇವೆಸಲ್ಲಿಸಿದರು. 2015ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಪದೋನ್ನತಿ ಗೊಂಡು ಸುಳ್ಯ ತಾಲೂಕು ಕಚೇರಿಗೆ ಬಂದ ಇವರು 2017 ರಿಂದ ಸುಳ್ಯ ತಾಲೂಕು ಕಚೇರಿಯ ಚುನಾವಣಾ ವಿಭಾಗದಲ್ಲಿ ಪ್ರಭಾರ ಉಪ ತಹಶೀಲ್ದಾರ್ ಸೇವೆ ಸಲ್ಲಿಸಿರುವ ಇವರು ಇದೀಗ ಉಪ ತಹಶೀಲ್ದಾರ್ ಪದೋನ್ನತಿ ಗೊಂಡಿದ್ದಾರೆ.
ಇವರು ಮಂಡೆಕೋಲು ಗ್ರಾಮದ ಮಾವಂಜಿ ನಿವೃತ್ತ ಅಧ್ಯಾಪಕ ರಾಘವ ಗೌಡ ಹಾಗೂ ರತ್ನಾವತಿ ದಂಪತಿಗಳ ಪುತ್ರ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!